ಬ್ರೇಕಿಂಗ್ ನ್ಯೂಸ್
21-09-20 06:26 pm Udupi Correspondent ಕರಾವಳಿ
ಉಡುಪಿ, ಸೆಪ್ಟಂಬರ್ 21: ಉಡುಪಿಯಲ್ಲಿ ಎರಡು ದಿನಗಳಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆ ಯಾವೆಲ್ಲ ಅನಾಹುತಗಳನ್ನು ಮಾಡಿದೆ ಅಂದರೆ ಅದನ್ನು ಊಹಿಸೋಕು ಸಾಧ್ಯವಿಲ್ಲ. ಅದಕ್ಕೆ ಒಂದು ಸಣ್ಣ ಉದಾಹರಣೆ ಕಾಪು ಬೀಚ್ ನಲ್ಲಿದ್ದ ಬ್ರಿಟಿಷರ ಕಾಲದ ದೀಪಸ್ತಂಭ ಬಳಿಯ ದೃಶ್ಯ.
ಕಾಪು ಬೀಚ್ ಬಳಿಯ ಲೈಟ್ ಹೌಸ್ ಕನ್ನಡ, ತುಳು ಸಿನಿಮಾ ಚಿತ್ರೀಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ಜಾಗ. ಅಪೂರ್ವ ಸೌಂದರ್ಯದಿಂದ ವೀವ್ ಸ್ಪಾಟ್ ಆಗಿದ್ದ ಕಾಪು ದೀಪಸ್ತಂಭದತ್ತ ಇನ್ನು ಸುಳಿದಾಡುವುದು ಬಿಡಿ. ಅದರ ಬಳಿಗೆ ಹೋಗುವುದೇ ಡೇಂಜರ್ ಅನ್ನುವಂತಾಗಿದೆ. ಯಾಕಂದ್ರೆ, ಎರಡು ದಿನಗಳ ಮಳೆಯಿಂದ ಭೋರ್ಗರೆದ ನದಿಗಳು ಸಮುದ್ರ ಸೇರಲು ಜಾಗ ಸಾಲದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಸಮುದ್ರದತ್ತ ನುಗ್ಗಿದೆ. ಲೌಟ್ ಹೌಸ್ ಹಿಂಭಾಗದಿಂದ ಸಮುದ್ರ ಸೇರುತ್ತಿದ್ದ ನದಿ ತನ್ನ ಪಥವನ್ನೇ ಬದಲಿಸಿದ್ದು ದೀಪಸ್ತಂಭದತ್ತ ತೆರಳುವ ಕಾಲುದಾರಿಯನ್ನೇ ಕಬಳಿಸಿಕೊಂಡು ಮುಂಭಾಗದಿಂದ ಹರಿಯಲಾರಂಭಿಸಿದೆ. ಕಾಲು ದಾರಿ ಕೊಚ್ಚಿಹೋಗಿದ್ದು, ಎರಡೂ ಭಾಗಗಳಿಂದ ಸಮುದ್ರ ಕೊರೆತ ಉಂಟಾದಲ್ಲಿ ದೀಪಸ್ತಂಭವೇ ಸಮುದ್ರ ಪಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಾಪು ಬೀಚ್ ನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್ನ ಹಿಂಭಾಗದಲ್ಲಿ ನದಿ ಸಮುದ್ರ ಸೇರ್ತಾ ಇತ್ತು. ಭಾರೀ ಮಳೆಯಿಂದಾಗಿ ನದಿ ಪಾತ್ರವೇ ಬದಲಾಗಿದ್ದು, ನೆರೆ ನೀರು ತನ್ನ ಪಥವನ್ನೇ ಬದಲಿಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಾಪು ಬಳಿಯ ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತುತೋಟ ಸೇರಿದಂತೆ ಆಸುಪಾಸಿನ ಭಾಗದಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿರುವ ನದಿ ನೀರು ಲೈಟ್ ಹೌಸ್ ಮುಂಭಾಗದಿಂದಲೇ ಸಮುದ್ರ ಸೇರುತ್ತಿದೆ. ಇದರಿಂದ ದೀಪಸ್ತಂಭದತ್ತ ಹೋಗಲು ದಾರಿ ಇಲ್ಲದಾಗಿದ್ದು, ಅಲ್ಲದೆ ನೆರೆನೀರು ಇದೇ ರೀತಿ ಹರಿದರೆ ಲೈಟ್ ಹೌಸ್ ಏರುವ ಮೆಟ್ಟಲುಗಳು ಕೊಚ್ಚಿ ಹೋಗುವ ಸಾಧ್ಯತೆ ಇದೆ.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm