ಬ್ರೇಕಿಂಗ್ ನ್ಯೂಸ್
08-03-22 01:29 pm Mangalore Correspondent ಕರಾವಳಿ
ಉಳ್ಳಾಲ, ಮಾ.8: ಖಾಸಗಿ ಜಾಗದಲ್ಲಿ ತೆರೆದ ಸ್ಥಿತಿಯಲ್ಲಿರುವ ಆಳ ಬಾವಿಯೊಂದಕ್ಕೆ ಮೇಯಲು ಬಂದ ಹಸು ಮತ್ತು ಕರು ಬಿದ್ದು ಒದ್ದಾಡಿದ ಪ್ರಸಂಗ ನಡೆದಿದ್ದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಮೂಕ ಪ್ರಾಣಿಗಳನ್ನ ಮೇಲಕ್ಕೆತ್ತಿ ಮರುಜೀವ ನೀಡಿದ ಘಟನೆ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿ ನಡೆದಿದೆ.
ಸೋಮೇಶ್ವರ ಗ್ರಾಮದ ಪಿಲಾರು ಮಹಾಲಕ್ಮೀ ಮಂದಿರದ ಬಳಿ ಮಹಮ್ಮದ್ ಹ್ಯಾರಿಸ್ ಎಂಬವರಿಗೆ ಸೇರಿದ ಖಾಲಿ ಜಮೀನಿನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಹ್ಯಾರಿಸ್ ಅವರ ಖಾಲಿ ಜಮೀನಿಗೆ ಆವರಣ ಗೋಡೆಯನ್ನೂ ನಿರ್ಮಿಸಿಲ್ಲ. ಕಳೆದ ಹತ್ತು ವರುಷದಿಂದ ಜಮೀನಿನಲ್ಲಿರುವ ಆಳ ಬಾವಿಗೂ ಆವರಣ ಗೋಡೆ ನಿರ್ಮಿಸಿಲ್ಲ. ಬಾವಿಯ ಸುತ್ತಲೂ ಗಿಡ ಗಂಟೆಗಳು ಬೆಳೆದಿದ್ದು ಬಾವಿಯ ಇರುವಿಕೆ ಮೂಕ ಪ್ರಾಣಿ ಬಿಡಿ ಮನುಷ್ಯರಿಗೂ ತಿಳಿಯದಾಗಿತ್ತು. ಸೋಮವಾರ ಸಂಜೆ ಚೆಂಬುಗುಡ್ಡೆಯ ಸಾಹುಲ್ ಎಂಬವರ ಸಾಕು ದನ ಮತ್ತು ಅದರ ಕರು ಇಲ್ಲಿಗೆ ಮೇಯಲು ಬಂದು ಆಳ ಬಾವಿಯೊಳಗೆ ಬಿದ್ದಿದೆ. ಬಾವಿಯೊಳಗೆ ಕರು, ಹಸು ಬಿದ್ದುದನ್ನ ಹೊರಗಿದ್ದ ಕರುವು ಕಂಡಿದ್ದು ರೋದಿಸಲು ಆರಂಭಿಸಿದೆ. ಪಶುಗಳ ರೋದನದಿಂದ ಪರಿಸರ ವಾಸಿಗಳಿಗೆ ವಿಚಾರ ತಿಳಿದು ಅಗ್ನಿ ಶಾಮಕ ದಳವರನ್ನ ಸ್ಥಳಕ್ಕೆ ಕರೆಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸು ಮತ್ತು ಕರುವನ್ನ ಮೇಲಕ್ಕೆತ್ತಿದ್ದಾರೆ. ಹಸು ಸ್ವಲ್ಪ ಅಸ್ವಸ್ಥಗೊಂಡಿದ್ದು ಕರು ಆರೋಗ್ಯವಾಗಿದೆ. ಆವರಣ ಗೋಡೆ ಇಲ್ಲದ ಜಾಗದಲ್ಲಿ ಬಾವಿಯನ್ನ ತೆರೆದಿಟ್ಟು ಉದ್ಧಟತನ ತೋರುತ್ತಿರುವ ಮಹಮ್ಮದ್ ಹ್ಯಾರಿಸ್ ವಿರುದ್ಧ ಸಂಬಂಧಪಟ್ಟ ಸೋಮೇಶ್ವರ ಪುರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿ ಮುಂದೆಯೂ ಅನಾಹುತಗಳು ನಡೆಯುವ ಸಾಧ್ಯತೆಗಳು ಇದೆ.
Cow and calf fall into the open well at Pillar in Mangalore fire service come to rescue. As the owners haven't created any fense or wall surrounding the well accidentally both Cow and Calf haven into the deep open well.
10-07-25 12:45 pm
HK News Desk
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
10-07-25 03:24 pm
HK News Desk
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
10-07-25 04:01 pm
Mangalore Correspondent
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
Mangalore Peace meeting Home Minister: ಎಳೆಯ ಮ...
09-07-25 07:37 pm
10-07-25 01:05 pm
HK News Desk
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm