ಮದುವೆ ಸಮಾರಂಭದಲ್ಲಿ ಚುಡಾವಣೆ, ಯುವಕರ ನಡುವೆ ಹೊಡೆದಾಟ, ತಡೆಯಲು ಬಂದ ಪೊಲೀಸರಿಗೂ ಹಲ್ಲೆ !  ಹಲ್ಲೆಕೋರರಿಗೆ ಅಟ್ಟಾಡಿಸಿ ಹೊಡೆದ ಪೊಲೀಸರು 

17-02-22 05:41 pm       Mangalore Correspondent   ಕರಾವಳಿ

ತೊಕ್ಕೊಟ್ಟಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವಕನೋರ್ವ ಯುವತಿಗೆ ಚುಡಾಯಿಸಿದ ಪರಿಣಾಮ ನೆರೆದಿದ್ದ ಯುವಕರ ನಡುವೆ ಹೊಯ್ ಕೈ ನಡೆದು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೈದಿದ್ದು ರೊಚ್ಚಿಗೆದ್ದ ಪೊಲೀಸರು ಹಲ್ಲೆಕೋರರಿಗೆ ಅಟ್ಟಾಡಿಸಿ ಹೊಡೆದ ಘಟನೆ ನಡೆದಿದೆ. 

Photo credits : Headline Karnataka

ಉಳ್ಳಾಲ, ಫೆ.17 : ತೊಕ್ಕೊಟ್ಟಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವಕನೋರ್ವ ಯುವತಿಗೆ ಚುಡಾಯಿಸಿದ ಪರಿಣಾಮ ನೆರೆದಿದ್ದ ಯುವಕರ ನಡುವೆ ಹೊಯ್ ಕೈ ನಡೆದು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೈದಿದ್ದು ರೊಚ್ಚಿಗೆದ್ದ ಪೊಲೀಸರು ಹಲ್ಲೆಕೋರರಿಗೆ ಅಟ್ಟಾಡಿಸಿ ಹೊಡೆದ ಘಟನೆ ನಡೆದಿದೆ. 

ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಸಭಾಂಗಣದಲ್ಲಿ ಇಂದು ಮದುವೆ ಸಮಾರಂಭ ನಡೆದಿತ್ತು. ಕೋಟೆಕಾರು ಮಾಡೂರಿನ ವಧು ಮತ್ತು ಕೇರಳದ ಕಾಸರಗೋಡಿನ ವರನಿಗೆ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ಕಡೆಯ ಯುವಕನೋರ್ವ ವಧುವಿನ‌ ಕಡೆಯ ಯುವತಿಯ ಹಿಂದೆ ಬಿದ್ದು ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ ಚುಡಾಯಿಸಿದವನಿಗೆ ಹಲ್ಲೆ ನಡೆಸಿದ್ದಾನೆ.

ಪರಿಣಾಮ ಪರಸ್ಪರ ಯುವಕರ ಗುಂಪಿನ ನಡುವೆ ಬೀದಿ ಕಾಳಗವೇ ನಡೆದಿದೆ. ಸ್ಥಳದಲ್ಲಿ ಉಳ್ಳಾಲ ಉರೂಸ್ ಬಂದೋಬಸ್ತಲ್ಲಿದ್ದ ಪೊಲೀಸರೋರ್ವರಿಗೆ  ಉದ್ರಿಕ್ತರು ಕುತ್ತಿಗೆ ಹಿಚುಕಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿ ಬಂದೋಬಸ್ತಲ್ಲಿದ್ದ ಇತರ ಪೊಲೀಸರು ಸೇರಿ ಹಲ್ಲೆಕೋರರನ್ನ ಅಟ್ಟಾಡಿಸಿ ಹೊಡೆದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.‌

Mangalore ullal Police thrash youths for teasing girls at wedding place. Three taken to custody. It is also said that the police was assaulted by the youths. The youths are said to be from Kasargod.