ಬ್ರೇಕಿಂಗ್ ನ್ಯೂಸ್
03-02-22 07:14 pm HK Desk news ಕರಾವಳಿ
ಉಡುಪಿ, ಫೆ.3 : ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಹಾಸ್ಟೆಲ್ ಒಳಗೆ ಒಯ್ಯಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಮಣಿಪಾಲ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಕುಖ್ಯಾತಿ ಇರುವ ಪ್ರದೇಶ. ಅಲ್ಲಿನ ಎಂಐಟಿ ಕ್ಯಾಂಪಸ್ ಅಂದ್ರೆ ಹುಡುಗ- ಹುಡುಗಿಯರಿಗೆ ಭೇದವೇ ಇಲ್ಲದಷ್ಟು ನಂಟು, ತಾದಾತ್ಮ್ಯ ಬೆಳೆದಿದೆ. ಅಂಥ ಕ್ಯಾಂಪಸ್ ಒಳಗಿನಿಂದ ಸಿಸಿಟಿವಿ ದೃಶ್ಯಾವಳಿಯೊಂದು ಹೊರಬಂದಿದ್ದು ಅಲ್ಲಿನ ಹುಡುಗ- ಹುಡುಗಿಯರ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ.
ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಹುಡುಗರ ಹಾಸ್ಟೆಲ್ ಒಳಗೆ ದೊಡ್ಡ ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಒಯ್ಯಲು ಯತ್ನಿಸಿದ್ದಾನೆ. ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಚೆಕ್ ಮಾಡುತ್ತಿದ್ದರು. ಈ ಸಂದರ್ಭ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಮುಂದೆ ಹೋಗಲು ಯುವಕ ಪ್ರಯತ್ನಿಸಿದ್ದು ಅತಿ ಭಾರದಿಂದ ನಲುಗಿದ್ದಾನೆ. ಬ್ಯಾಗ್ ಇಷ್ಟೊಂದು ಭಾರ ಇರುವ ಬಗ್ಗೆ ಸಂಶಯ ಬಂದು ಸೆಕ್ಯುರಿಟಿ ಸಿಬಂದಿ ಸೂಟ್ ಕೇಸ್ ತೆಗೆದು ನೋಡಿದ್ದಾರೆ.
ಸೂಟ್ ಕೇಸ್ ನೋಡಿದರೆ ಸೆಕ್ಯುರಿಟಿ ಸಿಬಂದಿ ತಮ್ಮ ಕಣ್ಣುಗಳನ್ನೇ ನಂಬದಾಗಿದ್ದಾರೆ. ಅದರ ಒಳಗಿಂದ ಯುವತಿ ಎದ್ದು ಬಂದಿದ್ದು ಅಲ್ಲಿಯೇ ಎದ್ದು ನಿಂತಿದ್ದಾಳೆ. ಜೊತೆಗಿದ್ದ ಹುಡುಗ ಗಾಬರಿಯಿಂದ ನಿಂತಲ್ಲೇ ನಿಂತು ಬಿಟ್ಟಿದ್ದ.
ಈ ಬಗ್ಗೆ ಮಣಿಪಾಲ ಪೊಲೀಸರಿಗೆ ಕೇಳಿದರೆ, ನಮಗೇನು ಈ ವಿಚಾರ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಓಡಾಡುತ್ತಿದ್ದು ಅಲ್ಲಿನ ಸಿಬಂದಿಯೇ ವಿದ್ಯಾರ್ಥಿಗಳ ಚಮತ್ಕಾರವನ್ನು ಸಿಸಿಟಿವಿಯಿಂದ ತೆಗೆದು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ಆದರೆ ಈ ವಿಡಿಯೋವನ್ನು ಮಣಿಪಾಲದ ಭದ್ರತಾ ಸಿಬಂದಿ ನಿರಾಕರಿಸಿದ್ದಾರೆ. ಇದು ಮಣಿಪಾಲದ್ದಲ್ಲ. ಬೇರೆಲ್ಲಿಯದೋ ಹಳೆಯ ವಿಡಿಯೋ ಎಂದು ಹೇಳಿದ್ದಾರೆ. ಕೆಲವರ ಪ್ರಕಾರ, ಮಣಿಪಾಲದ ಹಳೇ ವಿಡಿಯೋ ಎನ್ನುತ್ತಿದ್ದಾರೆ.
Udupi Engineering student carries his girlfriend in suitcase enters hostel gets caught by security guard. The video of this has gone viral social media.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm