ಬ್ರೇಕಿಂಗ್ ನ್ಯೂಸ್
03-02-22 12:48 pm HK Desk news ಕರಾವಳಿ
ಕುಂದಾಪುರ, ಫೆ.2 : ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆಂಬ ಕಾರಣಕ್ಕೆ ಬಾಗಿಲು ಮುಚ್ಚಲಾಗಿದೆ. ಕಾಲೇಜು ಆವರಣದ ಗೇಟ್ ಹೊರಭಾಗದಲ್ಲಿ ನಿಂತು ವಿದ್ಯಾರ್ಥಿನಿಯರು ಅತ್ತು ಕರೆದು ತಮ್ಮ ಭವಿಷ್ಯ ಹಾಳು ಮಾಡದಂತೆ ಬೇಡಿಕೊಂಡಿದ್ದಾರೆ.
ಕಾಲೇಜಿನ ಶಿಕ್ಷಕರು ಗೇಟ್ ಬಳಿ ಬಂದು, ಸರಕಾರದ ಆದೇಶ ಇದೆ. ಹಿಜಾಬ್ ಧರಿಸಿ ಬರುವವರಿಗೆ ಅವಕಾಶ ನೀಡಬಾರದೆಂದು ಶಾಸಕರು ಸೂಚನೆ ನೀಡಿದ್ದಾರೆ. ಅದನ್ನು ನಾವು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಗೇಟ್ ಬಳಿ ಪೊಲೀಸರನ್ನು ನಿಯೋಜಿಸಿದ್ದು, ವಿದ್ಯಾರ್ಥಿನಿಯರು ಏನೂ ತೋಚದಂತಾಗಿದ್ದಾರೆ. ಗೇಟ್ ಬಳಿ ನಿಂತು, ನೀವು ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಈ ರೀತಿಯ ನಿಮಯ ತಂದರೆ ಹೇಗೆ..? ಆರಂಭದಲ್ಲಿ ಇಂತಹ ಯಾವುದೇ ರೂಲ್ಸ್ ನೀವು ಹೇಳಿರಲಿಲ್ಲ. ಈಗ ಕಾಲೇಜು ಎರಡು ತಿಂಗಳು ಇರುವಾಗ ಇಂಥ ರೂಲ್ಸ್ ತಂದು ನಮ್ಮನ್ನು ಬೀದಿಗೆ ಹಾಕುತ್ತಿದ್ದೀರಿ ಎಂದು ಅಳಲು ತೋಡಿಕೊಂಡರು.

ಆದರೆ, ವಿದ್ಯಾರ್ಥಿನಿಯರ ಪ್ರಶ್ನೆಗೆ ಕಾಲೇಜು ಸಿಬಂದಿ ಬಳಿ ಸೂಕ್ತ ಉತ್ತರ ಇರಲಿಲ್ಲ. ಉಡುಪಿ ಕಾಲೇಜಿಗೆ ನೀಡಿರುವ ಆದೇಶ ಎಲ್ಲ ಕಡೆಗೂ ಅನ್ವಯಿಸುತ್ತದೆ. ಸರಕಾರ ರಾಜ್ಯದ ಎಲ್ಲ ಕಾಲೇಜುಗಳಿಗೂ ಈ ಆದೇಶ ನೀಡಿದೆ, ಇದರ ಬಗ್ಗೆ ಎರಡು ದಿನ ಮೊದಲೇ ನಿಮಗೆ ಮಾಹಿತಿ ನೀಡಿದ್ದೇವೆ ಎಂದು ಉತ್ತರ ನೀಡಿದ್ದಾರೆ. ಅರ್ಧದಲ್ಲಿ ನೀವು ಕಾಲೇಜಿಗೆ ಬರಬಾರದು ಅಂದ್ರೆ ಹೇಗೆ ಎಂಬ ಪ್ರಶ್ನೆಗೆ, ಉತ್ತರ ನೀಡದೆ ನುಣುಚಿಕೊಂಡಿದ್ದಾರೆ. ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಸಮವಸ್ತ್ರದ ನೆಪದಲ್ಲಿ ಹಿಜಾಬ್ ನಿರ್ಬಂಧ ಇರಲಿಲ್ಲ. ಈವರೆಗೂ ಹಿಜಾಬ್ ಧರಿಸಿಯೇ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದರು. ಆದರೆ ಉಡುಪಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಏರ್ಪಟ್ಟು ಚರ್ಚೆಗೀಡಾಗುತ್ತಿದ್ದಂತೆ, ಅದೇ ಗೀಳು ಕುಂದಾಪುರದಲ್ಲೂ ಕಾಣಿಸಿಕೊಂಡಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ, ನಾವು ಕೇಸರಿ ಶಾಲು ಹಾಕ್ಕೊಂಡು ಬರುತ್ತೇವೆ ಎಂದು ಹೇಳಿ ಈ ವಿವಾದಕ್ಕೆ ತುಪ್ಪ ಸುರಿದಿದ್ದು ಹಿಂದು ಸಂಘಟನೆಯ ಮಂದಿ. ಬುಧವಾರ ದಿಢೀರ್ ಆಗಿ ಹಿಂದು ವಿದ್ಯಾರ್ಥಿಗಳು ಒಂದಷ್ಟು ಮಂದಿ ಕೇಸರಿ ಶಾಲು ಹಾಕ್ಕೊಂಡು ಬಂದು ಹಿಜಾಬ್ ನಿಷೇಧ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಶಾಸಕ ಶ್ರೀನಿವಾಸ ಶೆಟ್ಟಿ ಮತ್ತು ಕಾಲೇಜಿನ ಸಿಬಂದಿಗಳು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರನ್ನು ಕರೆದು ಮನವೊಲಿಕೆ ಮಾಡಿದ್ದಾರೆ. ಆದರೆ ಪೋಷಕರು ಹಿಜಾಬ್ ಧರಿಸದೇ ಬರಲು ಒಪ್ಪಿಗೆ ನೀಡಲಿಲ್ಲ.

ನಮ್ಮ ಧಾರ್ಮಿಕ ಸಂಕೇತ ಆಗಿರುವುದರಿಂದ ಇದನ್ನು ನಿರಾಕರಣೆ ಮಾಡುವಂತಿಲ್ಲ. ಧಾರ್ಮಿಕ ಸ್ವಾತಂತ್ರ್ಯವೂ ಇದೆ. ಅಲ್ಲದೆ, ಇಂಥ ನಿಯಮವನ್ನು ನೀವು ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಜಾರಿಗೆ ತರುವುದು ತಪ್ಪೆಂದು ವಾದಿಸಿದ್ದಾರೆ. ಸಮವಸ್ತ್ರ ಧರಿಸುವುದರ ಜೊತೆಗೆ ಹಿಜಾಬ್ ಧರಿಸಿಕೊಂಡು ತರಗತಿಗೆ ಬರುತ್ತಿದ್ದರು. ಇಷ್ಟು ದಿನ ಇಲ್ಲದ ನಿಯಮ ಈಗ ಯಾಕೆ ದಿಢೀರ್ ಆಗಿ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಇಂದು ಬೆಳಗ್ಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಕೂಡ ಇದೇ ಪ್ರಶ್ನೆ ಮಾಡಿದ್ದು, ಕಾಲೇಜಿನ ಆಡಳಿತಕ್ಕೆ ಅಹವಾಲು ಮುಂದಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಈ ಬಗ್ಗೆ ಜಿಲ್ಲಾಡಳಿತದ ಜೊತೆಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಏಕರೂಪದ ನಿಯಮದ ಬಗ್ಗೆ ರಾಜ್ಯ ಸರಕಾರ ಕಾನೂನು ರೂಪಿಸಬೇಕಾಗಿದೆ ಎಂದು ಹೇಳಿದ್ದಾರೆ.
Muslim girl students of government college who arrived to the institute wearing Hijabs were stopped at the gate by the principal and denied entry into the campus on Thursday February 3. The principal asked the concerned students not to attend classes with Hijab. He asked the students to remove the Hijab and attend classes.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm