ಬ್ರೇಕಿಂಗ್ ನ್ಯೂಸ್
23-01-22 08:27 pm Mangalore Correspondent ಕರಾವಳಿ
ಮಂಗಳೂರು, ಜ.23 ಕಮ್ಯುನಿಸ್ಟರ ಕುತಂತ್ರದಿಂದಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ದೆಹಲಿಯಲ್ಲಿ ಅವಕಾಶ ಸಿಗದಿರುವುದಕ್ಕೆ ಎಲ್ಲ ಹಿಂದೂಗಳ ಮನಸಿಗೆ ನೋವುಂಟಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯರಾದ ಜನಾರ್ದನ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರದ ಮೆರವಣಿಗೆಯನ್ನ ಜನವರಿ 26 ರಂದು ಆಯೋಜಿಸಿದ್ದು ಜಾತಿ ಭೇದ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದ್ದಾರೆ, ಅವರ ಹೇಳಿಕೆಗೆ ವಿಶ್ವ ಹಿಂದು ಪರಿಷತ್ ಸ್ವಾಗತಿಸುತ್ತದೆ. ಅಲ್ಲದೆ, ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ವಿಶ್ವ ಹಿಂದು ಪರಿಷತ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶರಣ್ ಪಂಪ್ವೆಲ್, ಅಸಮಾನತೆಯ ವಿರುದ್ಧ ಹೋರಾಟ ಮಾಡಿದ, ದೇಶ ಕಂಡ ಮಹಾನ್ ಸಂತ ಪೂಜನೀಯ ಬ್ರಹ್ಮಶ್ರೀ ನಾರಾಯಣ ಗುರುಗಳು, ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೋಸ್ಕರ, ಸಮಾಜದಲ್ಲಿನ ಮೇಲ್ಜಾತಿ ಕೀಳ್ಜಾತಿ ಭೇದ ಭಾವವನ್ನು ದೂರಮಾಡಲು ಹೋರಾಟ ಮಾಡಿದ ಮಹಾನ್ ಯೋಗಿ.
ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರು ಪ್ರಾತಃ ಸ್ಮರಣೆಯಲ್ಲಿ ಶ್ರೀ ಗುರುಗಳನ್ನು ನಿತ್ಯ ಸ್ಮರಣೆ ಮಾಡುತ್ತೇವೆ. 2017 ರಲ್ಲಿ ನಡೆದ ಸಾವಿರಾರು ಸಾಧು ಸಂತರು ಸೇರಿ ಇತಿಹಾಸ ನಿರ್ಮಿಸಿದ ಉಡುಪಿಯ ಧರ್ಮಸಂಸದ್ ಕಾರ್ಯಕ್ರಮದ ವೇದಿಕೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಇಡಲಾಗಿತ್ತು. ಗಣರಾಜ್ಯ ದಿನದಂದು ನಡೆಯಲಿರುವ ಸ್ತಬ್ಧಚಿತ್ರದ ಮೆರವಣಿಗೆ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಬೆಂಬಲ ಸೂಚಿಸುತ್ತದೆ. ಮತ್ತು ಸಂಘಟನೆಯ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸುತ್ತದೆ ಎಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mangalore Narayana Guru Tableau themed on traditional handicrafts VHP to supports Janardhana Poojary procession.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
19-06-25 10:08 pm
Mangalore Correspondent
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm