ಬ್ರೇಕಿಂಗ್ ನ್ಯೂಸ್
24-11-21 09:33 am HK news Desk ಕರಾವಳಿ
ಉಡುಪಿ, ನ. 24: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದಕ್ಕೆ ಬಂಪರ್ ಲಾಟರಿ ಸಿಕ್ಕಂತಾಗಿದೆ. ಅದರಲ್ಲಿದ್ದ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದ್ದು ಆ ಒಂದು ಮೀನು ಬರೋಬ್ಬರಿ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿಗೆ ಮಾರಾಟವಾಗಿ ಮೀನುಗಾರರನ್ನೇ ಹುಬ್ಬೇರಿಸಿದೆ.
ಮಲ್ಪೆ ಕಡಲ ಕಿನಾರೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬವರ ಬಲರಾಮ್ ಎಂಬ ಹೆಸರಿನ ಬೋಟ್ಗೆ ಅದೃಷ್ಟ ಖುಲಾಯಿಸಿತ್ತು. ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಅನ್ನುವ ಹೆಸರಿನ ಮೀನು ಲಭ್ಯವಾಗಿದ್ದು, ಈ ಮೀನು ಬರೋಬ್ಬರಿ 1,80,200 ರೂಪಾಯಿಗೆ ಮಾರಟವಾಗಿದೆ. ಮಲ್ಪೆ ಬಂದರಿನಲ್ಲಿ ಮೀನಿನ ಹರಾಜು ಪ್ರಕ್ರಿಯೆ ನಡೆದಿದ್ದು, ನೂರಾರು ಮಂದಿಯ ಕುತೂಹಲಕ್ಕೆ ಸಾಕ್ಷಿಯಾಗಿದೆ.
ಪ್ರತಿ ಕೆಜಿಗೆ 9060 ರೂ.ನಂತೆ ಗೋಳಿ ಮೀನು ಮಾರಾಟವಾಗಿದೆ. ಇದು ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿದ್ದು ಮೀನುಗಾರರ ಬಲೆಗೆ ಬೀಳೋದು ಅಪರೂಪ ಎನ್ನಲಾಗಿದೆ.
ಮಲ್ಪೆ ಬಂದರಿನಿಂದ ಹರಾಜಿನಲ್ಲಿ ತೆಗೆದುಕೊಂಡ ಈ ಮೀನನ್ನು ಮುಂಬೈ ಮೀನುಗಾರಿಕಾ ಬಂದರಿನಲ್ಲಿ ಮಾರಾಟ ಮಾಡಲಾಗುತ್ತದೆ. ಮುಂಬೈಯಲ್ಲಿ ಈ ಮೀನಿನ ದರ ಪ್ರತೀ ಕೆಜಿಗೆ ಹದಿನೈದು ಸಾವಿರದಿಂದ ಹದಿನೆಂಟು ಸಾವಿರದ ವರೆಗೂ ಹೋಗಲಿದೆ ಎಂದು ಮೀನುಗಾರರು ಹೇಳುತ್ತಾರೆ. ಮುಂಬೈನಿಂದ ನೇರ ಔಷಧ ಕಂಪೆನಿಗಳೇ ಈ ಮೀನನ್ನು ಖರೀದಿ ಮಾಡಲಿದ್ದು ಭಾರೀ ಬೆಲೆ ಸಿಗಲಿದೆಯಂತೆ.
ಉಡುಪಿಯ ಮಲ್ಪೆಯಲ್ಲಿ ಈ ರೀತಿಯ ಮೀನು ದೊರಕಿರೋದು ಇದೇ ಮೊದಲು. ಈ ಹಿಂದೆ ಗೋಳಿ ಜಾತಿಯ ಸಣ್ಣ ಮೀನುಗಳು ಬಲೆಗೆ ಬಿದ್ದಿದ್ದು ಪ್ರಥಮ ಬಾರಿಗೆ ಭಾರೀ ತೂಕದ ಮೀನು ಲಭ್ಯವಾಗಿದೆ. ಮಲ್ಪೆ ಬಂದರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ದರಕ್ಕೆ ಮೀನು ಮಾರಾಟವಾಗಿದೆ.
Udupi Maple Fishermen sells fish 18 kilo fish for 1.18 lakhs. The fish was auctioned by Mumbai fishermen for 15 thousand per kilo ane later it was sold for 1.18 lakhs.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm