ಬ್ರೇಕಿಂಗ್ ನ್ಯೂಸ್
12-11-21 08:47 pm Mangaluru Corespondent ಕರಾವಳಿ
ಬೆಳ್ತಂಗಡಿ, ನ.12: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ನುಗ್ಗಿ 12 ಲಕ್ಷ ರೂ. ಮೌಲ್ಯದ ಸುಮಾರು 320 ಗ್ರಾಮ್ ಚಿನ್ನಾಭರಣವನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅ.31 ರಂದು ಇಂದಬೆಟ್ಟು ಗ್ರಾಮದ ಮಹಮ್ಮದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಳವು ಕೃತ್ಯ ನಡೆಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕೃತ್ಯ ಎಸಗಿದ್ದರು. ಕಪಾಟಿನಲ್ಲಿ ಇರಿಸಿದ್ದ 13 ಪವನ್ ತೂಕದ ಚಿನ್ನದ ನೆಕ್ಲೆಸ್, ಒಂದು ಪವನ್ ತೂಕದ ಎರಡು ಚಿನ್ನದ ಚೈನ್, ತಲಾ ಒಂದು ಪವನ್ ತೂಕದ ನಾಲ್ಕು ಚಿನ್ನದ ಕಾಯಿನ್, ತಲಾ ನಾಲ್ಕು ಪವನ್ ತೂಕದ ನಾಲ್ಕು ಚಿನ್ನದ ಬಿಸ್ಕೆಟ್, ಎರಡು ಪವನ್ ತೂಕದ ಚಿನ್ನದ ಗಟ್ಟಿ ಸೇರಿದಂತೆ ವಿವಿಧ ಮಾದರಿಯ ಒಟ್ಟು 12.5 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, 5200 ರೂ. ನಗದು ಕಳವಾದ ಬಗ್ಗೆಯೂ ಮಾಹಿತಿ ನೀಡಲಾಗಿತ್ತು.
ಪ್ರಕರಣದ ಪತ್ತೆಗಾಗಿ ಬೆಳ್ತಂಗಡಿ ಇನ್ ಸ್ಪೆಕ್ಟರ್ ಶಿವಕುಮಾರ್ ಬಿ., ಪಿಎಸ್ಐ ನಂದ ಕುಮಾರ್, ಪಿಎಸ್ಐ ಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಮೂವರನ್ನು ಬಂಧಿಸಲಾಗಿದೆ. ನಾವೂರು ಗ್ರಾಮದ ಮಹಮ್ಮದ್ ಸ್ವಾಲಿ (26), ಲಾಯ್ಲ ಗ್ರಾಮದ ಯಾಹ್ಯಾ(32), ನಾವೂರು ಗ್ರಾಮದ ಬಿ.ಎಚ್. ನೌಫಲ್ (27) ಬಂಧಿತರು. ಕೃತ್ಯಕ್ಕೆ ಉಪಯೋಗಿಸಿದ ಆಲ್ಟೋ ಕಾರು, ಪಲ್ಸರ್ ಬೈಕ್, ನಾಲ್ಕು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಕಳವುಗೈದಿದ್ದ 12.5 ಲಕ್ಷ ಮೌಲ್ಯದ 320 ಗ್ರಾಮ್ ಚಿನ್ನಾಭರಣ, ನಗದು 1230 ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದು ಒಂದೇ ವಾರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಮನೆಯಲ್ಲಿ ಚಿನ್ನ ಇಟ್ಟಿರುವ ವಿಚಾರ ತಿಳಿದಿದ್ದವರೇ ಸಂಚು ನಡೆಸಿ ಕಳವು ಕೃತ್ಯ ಎಸಗಿದ್ದರು.
320 gram of God Biscuit stolen from home three arrested by a week by Belthangady police
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
18-06-25 10:24 am
Mangalore Correspondent
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm