ಬ್ರೇಕಿಂಗ್ ನ್ಯೂಸ್
10-11-21 06:05 pm Headline Karnataka News Network ಕರಾವಳಿ
ಮಂಗಳೂರು, ನ.10: ಮೂಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ ಪೇಟೆಯಲ್ಲಿ ಮೀನು ಮಾರಾಟ ವಿಚಾರದ ಜಟಾಪಟಿ ಈಗ ಹಿಂದು- ಮುಸ್ಲಿಂ ದ್ವೇಷಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿಂದ ಜಟಾಪಟಿ ನಡೆಯುತ್ತಿದ್ದು, ಈಗ ಪೊಲೀಸರೇ ಬಂದು ಮೀನು ಮಾರಾಟಕ್ಕೆ ಸೆಕ್ಯುರಿಟಿ ನಿಲ್ಲುವ ಸ್ಥಿತಿ ಎದುರಾಗಿದೆ.
ಹಳೆಯಂಗಡಿ ಜಂಕ್ಷನ್ನಲ್ಲೇ ಮೀನು ಮಾರುಕಟ್ಟೆ ಸಂಕೀರ್ಣ ಇತ್ತು. ಆದರೆ, ಮಾರುಕಟ್ಟೆ ಕಟ್ಟಡ ಅಜೀರ್ಣಾವಸ್ಥೆಯಲ್ಲಿದ್ದ ಕಾರಣ ತಿಂಗಳ ಹಿಂದೆ ಅದನ್ನು ಪಂಚಾಯತ್ ವತಿಯಿಂದ ನೆಲಸಮ ಮಾಡಲಾಗಿತ್ತು. ಬದಲಿಗೆ, ಹೊಸ ಕಟ್ಟಡವನ್ನು ಶೀಘ್ರದಲ್ಲೇ ಮಾಡಿಕೊಡುವುದಾಗಿ ಹೇಳಿದ್ದರು. ಅಲ್ಲಿ ಮೀನು ಮಾರುತ್ತಿದ್ದವರಿಗೆ ತಾತ್ಕಾಲಿಕ ನೆಲೆಯಲ್ಲಿ ಹಳೆಯಂಗಡಿ ಬಸ್ ನಿಲ್ದಾಣದ ಬಳಿಯಲ್ಲೇ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಯಾವುದೇ ಶೆಡ್ ನಿರ್ಮಿಸದೆ ಹೊರಭಾಗದಲ್ಲಿಯೇ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರು. ಇದೇ ವೇಳೆ, ಮುಸ್ಲಿಮ್ ಸಮುದಾಯದ ಯುವಕರು ಕೂಡ ಹಳೆಯಂಗಡಿ ಪೇಟೆಯಲ್ಲಿ ಅಲ್ಲಲ್ಲಿ ಗಾಡಿ ನಿಲ್ಲಿಸಿ, ಮೀನು ಮಾರಾಟಕ್ಕೆ ಇಳಿದಿದ್ದರು. ಇದೇ ವಿಚಾರ ಮೀನುಗಾರ ಮಹಿಳೆಯರು ಮತ್ತು ಮುಸ್ಲಿಮ್ ಯುವಕರ ನಡುವೆ ಜಟಾಪಟಿಗೆ ಕಾರಣವಾಗಿದ್ದು, ಮುಸ್ಲಿಂ ಯುವಕರು ಇಲ್ಲಿ ಬಂದು ಮೀನು ಮಾರಾಟ ಮಾಡಬಾರದು ಎಂದು ಮಹಿಳೆಯರು ತಗಾದೆ ಎತ್ತಿದ್ದಾರೆ. ಆದರೆ, ಯುವಕರು ಮಹಿಳೆಯರ ವಿರೋಧವನ್ನು ಲೆಕ್ಕಿಸಿಲ್ಲ. ನಾನು ಮೀನು ಮಾರಬಾರದು ಎಂದು ನೀವು ಹೇಗೆ ಹೇಳುತ್ತೀರಿ ಎಂದು ಮರು ಪ್ರಶ್ನೆ ಹಾಕಿದ್ದಾರೆ.


ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆ ಮತ್ತು ಹಳೆಯಂಗಡಿ ಪಂಚಾಯತಿಗೂ ದೂರು ನೀಡಲಾಗಿದೆ. ಅಧಿಕಾರಿಗಳು ಬಂದು ಎರಡೂ ಕಡೆಯ ಮೀನುಗಾರರಿಗೆ ಜೋರು ಮಾಡಿದ್ದಾರೆ. ಆದರೆ, ಮುಸ್ಲಿಂ ಯುವಕರು ತಮ್ಮನ್ನು ಮೀನು ಮಾರಬಾರದೆಂದು ಹೇಳಲು ನಿಮಗೆ ರೈಟ್ ಇಲ್ಲವೆಂದು ಪೊಲೀಸರ ಬಳಿಯೂ ರಂಪ ತೆಗೆದಿದ್ದಾರೆ. ಹೀಗಾಗಿ ಎರಡೂ ಕೋಮಿನ ನಡುವೆ ಮೀನು ಮಾರಾಟದ ವಿಚಾರ ವೈಷಮ್ಯಕ್ಕೆ ಕಾರಣವಾಗಿದೆ.
ಇದಲ್ಲದೆ, ಹಳೆಯಂಗಡಿ ಹಳೆ ಮಾರುಕಟ್ಟೆಯಲ್ಲಿ ಹಿಂದೆ ಇದ್ದ ಕೋಳಿ ಅಂಗಡಿಗಳೂ ಬಂದ್ ಆಗಿವೆ. ಆನಂತರ ಪರಿಸರದ ಇತರೇ ಅಂಗಡಿಗಳು, ಮನೆಗಳಲ್ಲಿಯೇ ಕೋಳಿಯನ್ನು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ. ಪಂಚಾಯತ್ ಲೈಸನ್ಸ್ ಇಲ್ಲದೆ ಮನೆಯಲ್ಲಿಯೇ ಕೋಳಿ ಮಾಂಸ ಮಾಡುವುದು, ಮಾರಾಟ ಮಾಡುವಂತಿಲ್ಲ. ಹಾಗಿದ್ದರೂ, ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎನ್ನುವ ದೂರನ್ನು ಸ್ಥಳೀಯರು ತಿಳಿಸಿದ್ದಾರೆ.
ಇದಲ್ಲದೆ, ಹಳೆಯಂಗಡಿ ಪೇಟೆಯಲ್ಲಿ ಪಂಚಾಯತ್ ಪರವಾನಗಿ ಇಲ್ಲದೆ ಕೋಳಿ ಅಂಗಡಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಸ್ಥಳೀಯರು ಮಾಡಿದ್ದಾರೆ. ಕೋಳಿ ಮಾಂಸದ ಅಂಗಡಿ ನಡೆಸಲು ಸ್ಥಳೀಯ ಪಂಚಾಯತ್ ಪರವಾನಗಿ ಅಗತ್ಯವಿರುತ್ತದೆ. ಇದನ್ನು ಪಡೆಯದೆ ಕೆಲವರು ತಾತ್ಕಾಲಿಕ ವ್ಯವಸ್ಥೆಯಲ್ಲಿ ಕೋಳಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Mangalore Haleangadi dispute erupts between Fishermen over selling Fish between Inter religion faith. People allege illegal shops being opened at Houses.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 04:46 pm
HK News Staffer
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
Mangalore Jail Jammer, Lawyers Protest, CM, M...
18-09-26 11:30 am
SDPI Protest, CM DK Shivakumar, Mangalore: ರಹ...
18-09-26 10:35 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am