ಬ್ರೇಕಿಂಗ್ ನ್ಯೂಸ್
27-10-21 04:44 pm Mangalore Reporter ಕರಾವಳಿ
ಮಂಗಳೂರು, ಅ.27: ಎಂಆರ್ ಪಿಎಲ್ ಪೆಟ್ರೋಲಿಯಂ ಸ್ಥಾವರದಿಂದ ಹೊರಬಿಡುವ ತ್ಯಾಜ್ಯ ಸ್ಥಳೀಯ ಜಲಮೂಲಗಳನ್ನು ಹಾಳುಗೆಡವುತ್ತಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಆಧರಿಸಿ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಮಾಲಿನ್ಯ ರಹಿತ ನೀರು ಮತ್ತು ಪರಿಸರ ಮೂಲಭೂತ ಹಕ್ಕಾಗಿದ್ದು, ಅದನ್ನು ಸಂರಕ್ಷಿಸುವುದು ಆಡಳಿತದ ಜವಾಬ್ದಾರಿ ಎಂದಿರುವ ಲೋಕಾಯುಕ್ತ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನೇ ಹೊಣೆಯಾಗಿಸಿ ಕೇಸು ದಾಖಲಿಸಿದೆ. ಅಲ್ಲದೆ, ಈ ಬಗ್ಗೆ ನ.2ರ ಒಳಗೆ ಕೈಗೊಂಡಿರುವ ಕ್ರಮಗಳು ಮತ್ತು ಸೂಕ್ತ ಸಾಕ್ಷ್ಯ ಸಹಿತ ವರದಿಯನ್ನು ನೀಡುವಂತೆ ಆದೇಶ ಮಾಡಿದೆ.
ಎಂಆರ್ ಪಿಎಲ್ ಘಟಕದಿಂದ ಹೊರಬರುವ ಕಪ್ಪು ಆಯಿಲ್ ಮಿಶ್ರಿತ ತ್ಯಾಜ್ಯ ಸ್ಥಳೀಯ ಜಲಮೂಲಗಳನ್ನು ಸೇರುತ್ತಿದೆ. ಅಲ್ಲದೆ, ಇದೇ ನೀರು ಫಲ್ಗುಣಿ ನದಿಯನ್ನು ಸೇರುತ್ತಿದ್ದು, ಸಾರ್ವಜನಿಕರಿಗೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಕುರಿತ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ, ಲೋಕಾಯುಕ್ತ ಸುಮೋಟೋ ಕೇಸು ದಾಖಲಿಸಿದೆ. ಜಲಮೂಲಗಳು, ನದಿ, ತೋಡಿನಲ್ಲಿ ಹರಿಯುವ ನೀರಿನ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಮನುಷ್ಯರು, ಇತರ ಜೀವಿಗಳು, ಹಕ್ಕಿಗಳ ಆರೋಗ್ಯದ ದೃಷ್ಟಿಯಿಂದ ನೀರನ್ನು ಮಲಿನವಾಗದಂತೆ ಕಾಪಾಡಬೇಕಿದೆ.


ನೈರ್ಮಲ್ಯಯುತ ಪರಿಸರ ಮತ್ತು ಮಾಲಿನ್ಯ ರಹಿತ ನೀರನ್ನು ಪಡೆಯುವುದು ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ಮನುಷ್ಯನ ಮೂಲಭೂತ ಹಕ್ಕು. ಹೀಗಾಗಿ ಮಾಲಿನ್ಯ ರಹಿತ ಪರಿಸರವನ್ನು ಕಾಪಾಡುವುದು ಸರಕಾರದ ಕರ್ತವ್ಯ ಮತ್ತು ಹೊಣೆಯಾಗಿರುತ್ತದೆ ಎಂದು ಹೇಳಿರುವ ಲೋಕಾಯುಕ್ತ ನ್ಯಾಯಮೂರ್ತಿ, ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ 23 ಪುಟಗಳ ನೋಟೀಸನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ತಹಸೀಲ್ದಾರ್ ಮತ್ತು ಎಂಆರ್ ಪಿಎಲ್ ಆಡಳಿತ ನಿರ್ದೇಶಕರಿಗೂ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದೆ.
ಇತ್ತೀಚೆಗೆ ಎಂಆರ್ ಪಿಎಲ್ ತ್ಯಾಜ್ಯ ತೋಕೂರು ಭಾಗದ ತೋಡುಗಳಲ್ಲಿ ಮತ್ತು ಪರಿಸರದ ಕೃಷಿ, ಗದ್ದೆಗಳಲ್ಲಿ ಕಂಡುಬಂದಿರುವ ಬಗ್ಗೆ ಡಿವೈಎಫ್ಐ ಕಾರ್ಯಕರ್ತರು ಸರಕಾರದ ಗಮನ ಸೆಳೆಯುವ ಸಲುವಾಗಿ ಪ್ರತಿಭಟನೆ ನಡೆಸಿದ್ದರು. ಪರಿಸರ ನಿಯಂತ್ರಣ ಮಂಡಳಿ ಕಚೇರಿಯ ಮುಂದೆಯೂ ಪ್ರತಿಭಟನೆ ನಡೆಸಿದ್ದರು. ಆದರೆ, ಸ್ಥಳೀಯ ಅಧಿಕಾರಿ ವರ್ಗವಾಗಲೀ, ಜನಪ್ರತಿನಿಧಿಗಳಾಗಲೀ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು.
The Lokayukta, which has registered a suo motu complaint against Dakshina Kannada (DK) district deputy commissioner (DC), has served notices to the deputy commissioner and several other officials. It has taken serious view of the fact that effluents from the industrial area at Jokatte are flowing into the rivulet and River.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm