ಬ್ರೇಕಿಂಗ್ ನ್ಯೂಸ್
27-10-21 10:49 am Mangalore Reporter ಕರಾವಳಿ
ಮಂಗಳೂರು, ಅ.26 : ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳನ್ನು ಸತಾಯಿಸುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆ ಅಧೀಕ್ಷಕ ಸದಾಶಿವ ಅವರನ್ನು ಕರೆದು ಯಾವುದೇ ಕಾರಣಕ್ಕೂ ಬಡ ರೋಗಿಗಳ ಅಡ್ಮಿಶನ್ ಅಥವಾ ಇನ್ನಾವುದೇ ವಿಚಾರದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಿಬಂದಿ ಸತಾಯಿಸುತ್ತಿರುವ ವಿಚಾರದ ಬಗ್ಗೆ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ರೆಡ್ ಕ್ರಾಸ್ ಮತ್ತು ವಿಎಚ್ ಪಿ ಕಾರ್ಯಕರ್ತರ ಹೆಲ್ಪ್ ಲೈನ್ ಸಿಬಂದಿ ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾಧ್ಯಮದ ಮಂದಿಗೆ ಮಾಹಿತಿ ನೀಡಿದ್ದರು. ಅದರಂತೆ, ಇಂದು ಮಧ್ಯಾಹ್ನ ಅಲ್ಲಿಗೆ ಭೇಟಿ ನೀಡಿದಾಗ, ಆಸ್ಪತ್ರೆ ಸಿಬಂದಿ ತಡಬಡಾಯಿಸಿದ್ದಾರೆ. ಆಸ್ಪತ್ರೆ ಅಧೀಕ್ಷಕ ಸದಾಶಿವ ಮತ್ತು ಅವರ ಕೆಳಗಿನ ಅಧಿಕಾರಿ ಜೆಸಿಂತಾ ಅವರು ಮಾಧ್ಯಮದ ಮಂದಿಗೆ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.
ಆದರೆ, ಅಲ್ಲಿನ ಅವ್ಯವಸ್ಥೆ ಬಗ್ಗೆ ರೋಗಿಯ ಜೊತೆಗೆ ಉಳಿದುಕೊಳ್ಳುವ ಸಂಬಂಧಿಕರೇ ಆರೋಪ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದರೂ, ಅಡ್ಮಿಟ್ ಮಾಡಿಕೊಂಡಿದ್ದು ಸಂಜೆ 6 ಗಂಟೆಗೆ. ಆದರೆ, ರೋಗಿಯನ್ನು ಪರೀಕ್ಷೆ ಮಾಡಲು ವೈದ್ಯರು ಬಂದಿರಲಿಲ್ಲ. ಯಾರೋ ಒಬ್ಬರು ಬಂದು ನೋಡಿ ತೆರಳುತ್ತಾರೆ ಎಂದು ಕಾರ್ಕಳ ತಾಲೂಕಿನ ವರಂಗ ನಿವಾಸಿ ಮಹಿಳೆ ಹೇಳಿದರು. ಆಕೆಯ ಗಂಡನನ್ನು ಬ್ರೈನ್ ಟ್ಯೂಮರ್ ಎಂದು ಅಡ್ಮಿಟ್ ಮಾಡಲಾಗಿದೆ. ಆದರೆ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಐಸಿಯು ದಾಖಲು ಮಾಡಬೇಕೆಂದು ಹೇಳಿದ್ದರೂ, ಮಾಡಿಲ್ಲ ಎಂದು ಆಕೆ ಆರೋಪಿಸಿದ್ದಾರೆ.
ಈ ನಡುವೆ, ಆಡಳಿತ ವಿಭಾಗದ ಅಧಿಕಾರಿ ಜೆಸಿಂತಾ ಅವರು ವೈದ್ಯರು ಪರೀಕ್ಷೆ ನಡೆಸಿರುವುದನ್ನು ತೋರಿಸಿ, ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ ಸದಾಶಿವ, ಕೆಲವೊಮ್ಮೆ ಚಿಂತಾಜನಕ ಸ್ಥಿತಿಯಲ್ಲಿ ರೋಗಿ ಬಂದರೆ, ಅವರನ್ನು ಐಸಿಯುಗೆ ದಾಖಲು ಮಾಡಲು ತೊಂದರೆಯಾಗುತ್ತದೆ. ಐಸಿಯು ಭರ್ತಿಯಾಗಿದ್ದ ವೇಳೆ ಬೆಡ್ ಖಾಲಿ ಮಾಡಿಸಿ, ಅಡ್ಮಿಟ್ ಮಾಡಬೇಕು. ಯಾವುದೇ ರೋಗಿ ಬಂದರೂ, ಅಡ್ಮಿಶನ್ ಮಾಡುವಲ್ಲಿ ತೊಂದರೆ ಆಗೋದಿಲ್ಲ. ರಕ್ತ, ಎಕ್ಸ್ ರೇ ಇನ್ನಿತರ ಪರೀಕ್ಷೆ ಮಾಡಿಸಿಯೇ ಅಡ್ಮಿಶನ್ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಸ್ವಲ್ಪ ಲೇಟ್ ಆಗುತ್ತದೆ ಎಂದು ಹೇಳಿದರು.
ಸಮಸ್ಯೆ ಬಗ್ಗೆ ವೈದ್ಯರು ಮತ್ತು ಡಿಎಂಓ ಅವರನ್ನು ಕರೆಸಿ ಮಾತುಕತೆ ನಡೆಸಿದ ಶಾಸಕ ವೇದವ್ಯಾಸ ಕಾಮತ್, ಅವರಿಂದ ಮಾಹಿತಿ ಕೇಳಿ ತಿಳಿದುಕೊಂಡರು. ಆನಂತರ, ರೋಗಿಯ ಸಂಬಂಧಿಕರನ್ನು ಕೂಡ ಸಮಾಧಾನ ಪಡಿಸಿದರು. ರೋಗಿಯ ಅಡ್ಮಿಶನ್ ವೇಳೆ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಈ ಬಗ್ಗೆ ನಾವು ಸದ್ಯದಲ್ಲೇ ಮೀಟಿಂಗ್ ಮಾಡಿ, ಪಿಓರ್ ಓ ನೇಮಕ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Mla Vedavyas Kamath visits Wenlock hospital after the negligence of Hospital Staffs in admitting non covid patients. Headline Karnataka had exposed how patients were being made to wait for hours in the ambulance without even giving them emergency treatment.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 03:24 pm
Mangalore Correspondent
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm