ಬ್ರೇಕಿಂಗ್ ನ್ಯೂಸ್
27-10-21 10:49 am Mangalore Reporter ಕರಾವಳಿ
ಮಂಗಳೂರು, ಅ.26 : ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳನ್ನು ಸತಾಯಿಸುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆ ಅಧೀಕ್ಷಕ ಸದಾಶಿವ ಅವರನ್ನು ಕರೆದು ಯಾವುದೇ ಕಾರಣಕ್ಕೂ ಬಡ ರೋಗಿಗಳ ಅಡ್ಮಿಶನ್ ಅಥವಾ ಇನ್ನಾವುದೇ ವಿಚಾರದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಿಬಂದಿ ಸತಾಯಿಸುತ್ತಿರುವ ವಿಚಾರದ ಬಗ್ಗೆ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ರೆಡ್ ಕ್ರಾಸ್ ಮತ್ತು ವಿಎಚ್ ಪಿ ಕಾರ್ಯಕರ್ತರ ಹೆಲ್ಪ್ ಲೈನ್ ಸಿಬಂದಿ ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾಧ್ಯಮದ ಮಂದಿಗೆ ಮಾಹಿತಿ ನೀಡಿದ್ದರು. ಅದರಂತೆ, ಇಂದು ಮಧ್ಯಾಹ್ನ ಅಲ್ಲಿಗೆ ಭೇಟಿ ನೀಡಿದಾಗ, ಆಸ್ಪತ್ರೆ ಸಿಬಂದಿ ತಡಬಡಾಯಿಸಿದ್ದಾರೆ. ಆಸ್ಪತ್ರೆ ಅಧೀಕ್ಷಕ ಸದಾಶಿವ ಮತ್ತು ಅವರ ಕೆಳಗಿನ ಅಧಿಕಾರಿ ಜೆಸಿಂತಾ ಅವರು ಮಾಧ್ಯಮದ ಮಂದಿಗೆ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.

ಆದರೆ, ಅಲ್ಲಿನ ಅವ್ಯವಸ್ಥೆ ಬಗ್ಗೆ ರೋಗಿಯ ಜೊತೆಗೆ ಉಳಿದುಕೊಳ್ಳುವ ಸಂಬಂಧಿಕರೇ ಆರೋಪ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದರೂ, ಅಡ್ಮಿಟ್ ಮಾಡಿಕೊಂಡಿದ್ದು ಸಂಜೆ 6 ಗಂಟೆಗೆ. ಆದರೆ, ರೋಗಿಯನ್ನು ಪರೀಕ್ಷೆ ಮಾಡಲು ವೈದ್ಯರು ಬಂದಿರಲಿಲ್ಲ. ಯಾರೋ ಒಬ್ಬರು ಬಂದು ನೋಡಿ ತೆರಳುತ್ತಾರೆ ಎಂದು ಕಾರ್ಕಳ ತಾಲೂಕಿನ ವರಂಗ ನಿವಾಸಿ ಮಹಿಳೆ ಹೇಳಿದರು. ಆಕೆಯ ಗಂಡನನ್ನು ಬ್ರೈನ್ ಟ್ಯೂಮರ್ ಎಂದು ಅಡ್ಮಿಟ್ ಮಾಡಲಾಗಿದೆ. ಆದರೆ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಐಸಿಯು ದಾಖಲು ಮಾಡಬೇಕೆಂದು ಹೇಳಿದ್ದರೂ, ಮಾಡಿಲ್ಲ ಎಂದು ಆಕೆ ಆರೋಪಿಸಿದ್ದಾರೆ.
ಈ ನಡುವೆ, ಆಡಳಿತ ವಿಭಾಗದ ಅಧಿಕಾರಿ ಜೆಸಿಂತಾ ಅವರು ವೈದ್ಯರು ಪರೀಕ್ಷೆ ನಡೆಸಿರುವುದನ್ನು ತೋರಿಸಿ, ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ ಸದಾಶಿವ, ಕೆಲವೊಮ್ಮೆ ಚಿಂತಾಜನಕ ಸ್ಥಿತಿಯಲ್ಲಿ ರೋಗಿ ಬಂದರೆ, ಅವರನ್ನು ಐಸಿಯುಗೆ ದಾಖಲು ಮಾಡಲು ತೊಂದರೆಯಾಗುತ್ತದೆ. ಐಸಿಯು ಭರ್ತಿಯಾಗಿದ್ದ ವೇಳೆ ಬೆಡ್ ಖಾಲಿ ಮಾಡಿಸಿ, ಅಡ್ಮಿಟ್ ಮಾಡಬೇಕು. ಯಾವುದೇ ರೋಗಿ ಬಂದರೂ, ಅಡ್ಮಿಶನ್ ಮಾಡುವಲ್ಲಿ ತೊಂದರೆ ಆಗೋದಿಲ್ಲ. ರಕ್ತ, ಎಕ್ಸ್ ರೇ ಇನ್ನಿತರ ಪರೀಕ್ಷೆ ಮಾಡಿಸಿಯೇ ಅಡ್ಮಿಶನ್ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಸ್ವಲ್ಪ ಲೇಟ್ ಆಗುತ್ತದೆ ಎಂದು ಹೇಳಿದರು.

ಸಮಸ್ಯೆ ಬಗ್ಗೆ ವೈದ್ಯರು ಮತ್ತು ಡಿಎಂಓ ಅವರನ್ನು ಕರೆಸಿ ಮಾತುಕತೆ ನಡೆಸಿದ ಶಾಸಕ ವೇದವ್ಯಾಸ ಕಾಮತ್, ಅವರಿಂದ ಮಾಹಿತಿ ಕೇಳಿ ತಿಳಿದುಕೊಂಡರು. ಆನಂತರ, ರೋಗಿಯ ಸಂಬಂಧಿಕರನ್ನು ಕೂಡ ಸಮಾಧಾನ ಪಡಿಸಿದರು. ರೋಗಿಯ ಅಡ್ಮಿಶನ್ ವೇಳೆ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಈ ಬಗ್ಗೆ ನಾವು ಸದ್ಯದಲ್ಲೇ ಮೀಟಿಂಗ್ ಮಾಡಿ, ಪಿಓರ್ ಓ ನೇಮಕ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Mla Vedavyas Kamath visits Wenlock hospital after the negligence of Hospital Staffs in admitting non covid patients. Headline Karnataka had exposed how patients were being made to wait for hours in the ambulance without even giving them emergency treatment.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm