ಬ್ರೇಕಿಂಗ್ ನ್ಯೂಸ್
26-10-21 04:44 pm Mangalore Reporter ಕರಾವಳಿ
ಮಂಗಳೂರು, ಅ.26: ಭಾರೀ ಗಾತ್ರದ ವೇಲ್ ಶಾರ್ಕ್ ಮೀನೊಂದು ಬಲೆಗೆ ಬಿದ್ದಿದ್ದು, ಅದನ್ನು ಮೀನುಗಾರರು ಮರಳಿ ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಎನ್ನುವ ಬೋಟಿನಲ್ಲಿ 1500 ಕೇಜಿ ತೂಕದ ಮೀನು ಬಲೆಗೆ ಬಿದ್ದಿತ್ತು.
ವೇಲ್ ಶಾರ್ಕ್ ಮೀನುಗಳನ್ನು ಹಿಡಿಯುವುದು ನಿಷೇಧವಿದ್ದು, ಅಕಸ್ಮಾತ್ತಾಗಿ ಬಲೆಗೆ ಭಾರೀ ಗಾತ್ರದ ಮೀನು ಬಿದ್ದಿತ್ತು. ಆನಂತರ, ಮೀನನ್ನು ಬೋಟಿಗೆ ಎಳೆದು ಅದರಲ್ಲಿ ಹಿಡಿದಿದ್ದ ಬಲೆಗಳನ್ನು ಕಟ್ ಮಾಡಿ, ಮತ್ತೆ ಸಮುದ್ರಕ್ಕೆ ಬಿಡಲಾಗಿದೆ. ಎರಡು ಬೋಟ್ ಗಳ ಮೂಲಕ ಮೀನನ್ನು ಮರಳಿ ಸಮುದ್ರಕ್ಕೆ ಬಿಡುವ ಕಾರ್ಯಾಚರಣೆ ನಡೆಸಲಾಯಿತು.
ಮಂಗಳೂರಿನಿಂದ 50 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆ ಎರಡು ಬೋಟ್ ಗಳನ್ನು ಅಕ್ಕಪಕ್ಕ ನಿಲ್ಲಿಸಿ, ಯಶಸ್ವಿಯಾಗಿ ಮೀನನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಒಂದು ಬೋಟಿನಲ್ಲಿ ಕ್ರೇನ್ ನಿಲ್ಲಿಸಿ, ಅದನ್ನು ಹೊರಕ್ಕೆ ಎಳೆದು ಹಾಕುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಅದೀಗ ವೈರಲ್ ಆಗಿದೆ.
ಶಾರ್ಕ್ ಮತ್ತು ವೇಲ್ ನಲ್ಲಿ ವಿವಿಧ ರೀತಿಯ ಪ್ರಭೇದಗಳಿದ್ದು, ಆ ಪೈಕಿ ವೇಲ್ ಶಾರ್ಕ್ ಅನ್ನುವುದು ಕೂಡ ಒಂದು. ಈ ರೀತಿಯ ಮೀನುಗಳು ಬೃಹತ್ ಗಾತ್ರವನ್ನು ಹೊಂದಿರುತ್ತವೆ. ಈ ಮೀನುಗಳ ಸಂತತಿ ಕಡಿಮೆಯಾಗುತ್ತಿರುವುದರಿಂದ ಇದನ್ನು ಹಿಡಿಯುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮೀನುಗಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
A huge fish got caught in a fishnet that was spread out by the fishermen in the Arabian Sea. The video of the fish has become viral on social media sites. This fish was caught by the fishermen of a boat titled Sagar. This boat had left for deep sea fishing from the fishing port here.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm