ಬ್ರೇಕಿಂಗ್ ನ್ಯೂಸ್
12-10-21 05:12 pm Mangalore Reporter ಕರಾವಳಿ
ಸುಳ್ಯ, ಅ.12: ತನ್ನನ್ನು ಮತಾಂತರಿಸಿ, ಮದುವೆಯಾದ ಬಳಿಕ ಬೀದಿಪಾಲು ಮಾಡಿದ್ದನ್ನು ವಿರೋಧಿಸಿ ಗಂಡನ ಮನೆಯಲ್ಲೇ ಪ್ರತಿಭಟನೆ ಕುಳಿತು ಸುದ್ದಿಯಾಗಿದ್ದ ಆಸಿಯಾ ಮತ್ತೆ ನಿರಶನಕ್ಕಿಳಿದಿದ್ದಾರೆ. ಒಂದು ವರ್ಷದಿಂದ ಗಂಡನ ಮನೆಯಲ್ಲೇ ಇದ್ದುಕೊಂಡು ಕುಟುಂಬದ ಜೊತೆಗೇ ಇದ್ದರೂ, ಗಂಡ ಇಬ್ರಾಹಿಂ ಖಲೀಲ್ ಮರಳಿ ಬಾರದೇ ಇರುವುದರಿಂದ ಧೃತಿಗೆಟ್ಟ ಆಸಿಯಾ ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ.
ಗಂಡನ ಕುಟುಂಬಸ್ಥರಿಗೆ ಸೇರಿದ ಸುಳ್ಯ ಪೇಟೆಯ ಗಾಂಧಿನಗರದಲ್ಲಿರುವ ಅಂಗಡಿಯ ಮುಂದೆ ಆಸಿಯಾ ಪ್ರತಿಭಟನೆ ಕುಳಿತಿದ್ದು, ಗಂಡನೇ ಬರಬೇಕು ಎಂದು ಹಠ ಹಿಡಿದಿದ್ದಾಳೆ. ಮೂಲತಃ ಕೇರಳದ ಕಣ್ಣೂರಿನ ನಿವಾಸಿಯಾಗಿರುವ ಶಾಂತಿ ಜೂಬಿ ಎನ್ನುವ ಹಿಂದು ಯುವತಿಯನ್ನು ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ವೇಳೆ ಇಬ್ರಾಹಿಂ ಕಟ್ಟೆಕಾರ್ ಎಂಬಾತ ಪ್ರೀತಿಯ ನೆಪದಲ್ಲಿ ಮತಾಂತರಿಸಿ, ಮದುವೆಯಾಗಿದ್ದ. ಆನಂತರ, ಜೊತೆಗೆ ಬಾಳುವುದನ್ನು ಬಿಟ್ಟು ಆಕೆಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದ. ಇಬ್ರಾಹಿಂ ತನ್ನ ಮನೆಯವರ ಸೂಚನೆಯಂತೆ ಯುವತಿಯನ್ನು ಬಿಟ್ಟು ಬಂದಿದ್ದಾನೆ ಎನ್ನಲಾಗಿತ್ತು.
ಆನಂತರ, ಆಸಿಯಾ ಸುಳ್ಯದಲ್ಲಿರುವ ಇಬ್ರಾಹಿಂ ಮನೆಯನ್ನು ಹುಡುಕಿ ಬಂದಿದ್ದು, ಆತ ಮಾತ್ರ ನಾಪತ್ತೆಯಾಗಿದ್ದ. ಸುಳ್ಯ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ, ವಿವಾದ ಮಾತ್ರ ಇತ್ಯರ್ಥವಾಗಿಲ್ಲ. ಗಂಡನ ಮನೆಯವರ ಕಿರುಕುಳದ ಮಧ್ಯೆಯೇ ಆಸಿಯಾ ಆತನ ಮನೆಯಲ್ಲೇ ಕಾಲ ಕಳೆದಿದ್ದಾಳೆ. ಹೀಗಿದ್ದರೂ, ಇಬ್ರಾಹಿಂ ಮರಳಿ ಬಾರದೆ ದೂರ ಉಳಿದಿದ್ದಾನೆ. ಆಸಿಯಾ ಕಣ್ಣೂರು ಮೂಲದ ಶ್ರೀಮಂತ ಕುಟುಂಬದ ಹುಡುಗಿಯಾಗಿದ್ದು, ಮರಳಿ ಮನೆಗೂ ಹೋಗಲಾಗದೆ, ಇತ್ತ ಗಂಡನ ಜೊತೆಗೂ ಇರಲಾಗದೆ ಲವ್ ಜಿಹಾದ್ ಕರಾಳ ಪಾಶಕ್ಕೆ ಸಿಲುಕಿ ಒಂಟಿಯಾಗಿದ್ದಾಳೆ.
ಮೊದಲು ಆಸಿಯಾ ಪ್ರತಿಭಟನೆಗೆ ಇಳಿದಾಗ ಮುಸ್ಲಿಂ ಸಂಘಟನೆಗಳು ಸಹಕಾರದ ಭರವಸೆ ನೀಡಿದ್ದವು. ಆದರೆ, ಮುಸ್ಲಿಂ ಸಂಘಟನೆಗಳಿಗೆ ಇಬ್ರಾಹಿಂ ಖಲೀಲ್ ಮನೆಯವರಿಂದ ಸಹಕಾರ ಸಿಗದೇ ಇದ್ದುದರಿಂದ ಅವರು ಕೈಬಿಟ್ಟಿದ್ದರು. ಇದೀಗ ಅಂಗಡಿ ಮುಂದೆ ನಿರಶನ ಕುಳಿತಿದ್ದು, ಗಂಡನೇ ಬರಬೇಕೆಂದು ಕಾದು ಕುಳಿತಿದ್ದಾಳೆ.
ಪ್ರೀತಿ, ಮತಾಂತರ, ಮದುವೆ ; ಮುಸ್ಲಿಂ ಲವ್ ಜಿಹಾದ್ ಬಲಿಯಾದ ಯುವತಿ ಬೀದಿಪಾಲು !!
Love Jihad victim Asiya protests against her Husband and family seeking for Justice at Sullia. The Asiya-Ibrahim Khaleel marriage controversy, which had kicked up immense interest last year after Asiya doggedly pursued the family of Khaleel, claiming that she had married Khaleel and that Khaleel had deserted her at the insistence of his father and brother, has surfaced again. As she could not get a solution to the problem, Asiya, has resumed her protest demonstration in front of a shop in Gandhinagar here which is owned by the family of Khaleel.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am