ಹೊಸ ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ಮೀನಿನ ಲಾರಿ ಡಿಕ್ಕಿ ; ಸ್ಥಳದಲ್ಲೇ ಸಾವು

05-10-21 02:29 pm       Mangaluru Correspondent   ಕರಾವಳಿ

ಅತಿ ವೇಗದಿಂದ ಬೈಕ್ ಚಲಾಯಿಸುತ್ತಿದ್ದ ಯುವಕನಿಗೆ ಮೀನಿನ ಲಾರಿ ಡಿಕ್ಕಿಯಾಗಿ ಆತ ಸ್ಥಳದಲ್ಲೇ ಸಾವು ಕಂಡ ಘಟನೆ ನಗರದ ಜಪ್ಪಿನಮೊಗರು ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮಂಗಳೂರು, ಅ.5: ಅತಿ ವೇಗದಿಂದ ಬೈಕ್ ಚಲಾಯಿಸುತ್ತಿದ್ದ ಯುವಕನಿಗೆ ಮೀನಿನ ಲಾರಿ ಡಿಕ್ಕಿಯಾಗಿ ಆತ ಸ್ಥಳದಲ್ಲೇ ಸಾವು ಕಂಡ ಘಟನೆ ನಗರದ ಜಪ್ಪಿನಮೊಗರು ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಉರ್ವಾ ಸ್ಟೋರ್ ನಿವಾಸಿ ನವೀನ್ ಕುಮಾರ್ (20) ಮೃತ ಯುವಕ. ಒಂದು ತಿಂಗಳ ಹಿಂದಷ್ಟೇ ಯಮಾಹ ಎಂಟಿ 15 ಹೆಸರಿನ ಹೊಸ ಮಾದರಿಯ ಬೈಕನ್ನು ಖರೀದಿಸಿದ್ದ ನವೀನ್ ಕುಮಾರ್ ನೇತ್ರಾವತಿ ಸೇತುವೆಯ ಕಡೆಯಿಂದ ಎಕ್ಕೂರು ಕಡೆಗೆ ಬರುತ್ತಿದ್ದ. ಈ ವೇಳೆ, ತಲಪಾಡಿ ಕಡೆಯಿಂದ ಉಡುಪಿಯತ್ತ ತೆರಳುತ್ತಿದ್ದ ಮೀನಿನ ಲಾರಿ ಡಿಕ್ಕಿಯಾಗಿದ್ದು, ಬೈಕಿನಲ್ಲಿ ಸಾಗುತ್ತಿದ್ದ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಉರ್ವಾ ಸ್ಟೋರ್ ನಿವಾಸಿಯಾಗಿರುವ ನವೀನ್ ಹೆತ್ತವರಿಗೆ ಒಬ್ಬನೇ ಮಗ ಎನ್ನಲಾಗಿದೆ. ತಮಿಳುನಾಡು ಮೂಲದ ಹೆತ್ತವರು ದತ್ತು ಪಡೆದು ಸಾಕಿದ್ದು, ಇದೀಗ ಬೈಕ್ ಹುಚ್ಚಿನಲ್ಲಿ ಸಾವು ಕಾಣುವಂತಾಗಿದೆ. ಒಂದೂವರೆ ವರ್ಷದ ಹಿಂದೆ ನವೀನ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ಲಾಲ್ ಬಾಗ್ ನಲ್ಲಿ ಒಬ್ಬ ಮಹಿಳೆಗೆ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಮಹಿಳೆ ಸಾವು ಕಂಡಿದ್ದು ಈತನ ಮೇಲೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Mangalore Accident Fish Truck rams on Two wheeler Youth dies on spot at Urwa.