ಬ್ರೇಕಿಂಗ್ ನ್ಯೂಸ್
28-09-21 10:30 pm Headline Karnataka News Network ಕರಾವಳಿ
ಉಳ್ಳಾಲ, ಸೆ.28: ಉಳ್ಳಾಲದ ಅಬ್ಬಕ್ಕ ಸರ್ಕಲ್ ನಿಂದ ಓವರ್ ಬ್ರಿಡ್ಜ್ ತನಕದ ಚತುಷ್ಪಥ ರಾಜರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಲಿದ್ದು ಶಾಸಕ ಯು.ಟಿ ಖಾದರ್ ಅವರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ತನಕದ ರಾಜ ರಸ್ತೆಯು ಶಾಸಕ ಯು.ಟಿ.ಖಾದರ್ ಮುತುವರ್ಜಿಯಿಂದ ವರ್ಷಗಳ ಹಿಂದೆ ಚತುಷ್ಪಥ ರಸ್ತೆಯಾಗಿ ಕಾಂಕ್ರಿಟೀಕರಣಗೊಂಡಿತ್ತು. ಇದೀಗ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಸಂಪರ್ಕದ ಚತುಷ್ಪಥ ರಾಜ ರಸ್ತೆಯ ಇಕ್ಕೆಲಗಳಿಗೆ ಲೋಕೋಪಯೋಗಿ ಇಲಾಖೆಯ 4.30 ಕೋಟಿ ರೂಪಾಯಿ ಅನುದಾನದಿಂದ ಸರ್ವಿಸ್ ರಸ್ತೆ ನಿರ್ಮಾಣವಾಗಲಿದ್ದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರು ನೂತನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.



ಈ ವೇಳೆ ಮಾತನಾಡಿದ ಖಾದರ್ ಬೆಳೆಯುತ್ತಿರುವ ಉಳ್ಳಾಲದ ಮುಖ್ಯ ರಸ್ತೆಯು ಸುಸಜ್ಜಿತ, ಸುಂದರವಾಗಿರಬೇಕು. ಉಳ್ಳಾಲದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿದ್ದು ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಯಾವುದೇ ತೊಂದರೆಗಳಾಗದಂತೆ ತಡೆಯಲು ಸರ್ವಿಸ್ ರಸ್ತೆಯಲ್ಲೇ ಬೈಕ್ ಮತ್ತು ಸೈಕಲ್ ಸವಾರಿಗೆ ಸ್ಪೆಷಲ್ ಟ್ರ್ಯಾಕ್ ಒದಗಿಸಲಾಗಿದೆ. ಡ್ರೈನ್ ಮೇಲೆ ನಡೆದಾಡಲು ಪಾತ್ ವೇಯನ್ನೂ ಕಲ್ಪಿಸಲಾಗಿದೆ. ಮುಂದೆ ಅಬ್ಬಕ್ಕ ಸರ್ಕಲ್ ನಿಂದ ಮುಕ್ಕಚ್ಚೇರಿ ರಸ್ತೆಯನ್ನೂ ಸ್ಮಾರ್ಟ್ ರಸ್ತೆಯನ್ನಾಗಿಸಲು ಲೋಕೋಪಯೋಗಿ ಇಲಾಖೆಯಿಂದ ಅನುದಾನ ಮೀಸಲಿಡಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು. ಉಳ್ಳಾಲದ ಕೋಟೆಪುರ, ಅಂಬಿಕಾ ರೋಡ್, ಉಳ್ಳಾಲ ಬೈಲ್ ಸೇರಿದಂತೆ ಅನೇಕ ಕಡೆ ಹೈಮಾಸ್ಟ್ ದೀಪಗಳನ್ನ ಅಳವಡಿಸಲಾಗುತ್ತಿದೆ ಎಂದರು.


ಉಳ್ಳಾಲ ನಗರಸಭೆ ಅಧ್ಯಕ್ಷರಾದ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾದ ಆಯೂಬ್ ಮಂಚಿಲ, ನಗರಸಭಾ ಆಯುಕ್ತರಾದ ರಾಯಪ್ಪ, ಉಳ್ಳಾಲ ನಗರಸಭಾ ಮಾಜಿ ಅಧ್ಯಕ್ಷರಾದ ಮಹಮ್ಮದ್ ಮುಕ್ಕಚ್ಚೇರಿ, ಯು.ಎ ಇಸ್ಮಾಯಿಲ್, ಭಾಝಿಲ್ ಡಿಸೋಜ, ಸದಸ್ಯರಾದ ಭಾರತಿ, ಶಶಿಕಲಾ, ಸಪ್ನ ಹರೀಶ್, ವೀಣಾ ಡಿಸೋಜ, ರವಿಚಂದ್ರ ಗಟ್ಟಿ,ಪ್ರಮುಖರಾದ ಇಬ್ರಾಹಿಂ ,ಅಶ್ರಫ್,ಅಝೀಝ್ ಕೋಡಿ ,ಸುರೇಶ್ ಭಟ್ನಗರ ,ಮಹಿಳಾ ಕಾಂಗ್ರೆಸ್ನ ದೇವಕಿ,ಮುಸ್ತಫಾ ಅಬ್ದುಲ್ಲ, ಅದ್ದಾಮ ಮೇಲಂಗಡಿ,ರಫೀಕ್ ಮೇಲಂಗಡಿ,ಜಾಫರ್,ಲೋಕೋಪಯೋಗಿ ಇಂಜಿನಿಯರ್ ದಾಸ್ ಪ್ರಕಾಶ್, ಎ.ಇ ಚಂದ್ರಶೇಖರಯ್ಯ ಮೊದಲಾದವರು ಉಪಸ್ಥಿತರಿದ್ದರು.
Ullal Bike cycle riders get separate track founding laid by MLA UT Khader. The track will lead from Abbakka circle to Thokottu over bridge.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm