ಬ್ರೇಕಿಂಗ್ ನ್ಯೂಸ್
27-09-21 11:11 am Mangaluru Correspondent ಕರಾವಳಿ
ಮಂಗಳೂರು, ಸೆ.27: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆ.27ರಿಂದ ಅ.2ರ ವರೆಗೆ ವಿಶೇಷ ಟ್ರಾಫಿಕ್ ಡ್ರೈವ್ ಮಾಡಲು ಪೊಲೀಸ್ ಕಮಿಷನರ್ ಶಶಿಕುಮಾರ್ ನಿರ್ಧರಿಸಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ ರಹಿತ ಪ್ರಯಾಣ, ಇನ್ ಶೂರೆನ್ಸ್, ಕಾರುಗಳಲ್ಲಿ ಕಪ್ಪು ಬಣ್ಣದ ಟಿಂಟ್ ಬಳಕೆ, ಹಳೆ ಪ್ರಕರಣಗಳು ಇತ್ಯಾದಿ ವಿಚಾರದಲ್ಲಿ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳ ಪೊಲೀಸರು ಆಯಾ ಭಾಗದಲ್ಲಿ ವಿಶೇಷ ಕರ್ತವ್ಯದಲ್ಲಿ ತೊಡಗಲಿದ್ದಾರೆ.
ಅದರಂತೆ, ಸೆ.27ರಂದು ಕಾರು ಸೇರಿದಂತೆ ಇತರ ವಾಹನಗಳಲ್ಲಿ ಟಿಂಟ್ ಅಳವಡಿಕೆ ಅಥವಾ ಗ್ಲಾಸ್ ಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಇತ್ಯಾದಿ ಪ್ರಕರಣಗಳ ಪತ್ತೆ ಕಾರ್ಯ ನಡೆಯಲಿದೆ. ಕಾರುಗಳನ್ನು ರಸ್ತೆ ಬದಿ ನಿಲ್ಲಿಸಿ, ಪೊಲೀಸರು ಈ ಬಗ್ಗೆ 500 ರೂ.ಗಿಂತ ಮೇಲ್ಪಟ್ಟು ದಂಡ ವಿಧಿಸಲಿದ್ದಾರೆ.
ಸೆ.28ರಂದು ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ತುಂಡಾಗಿರುವುದು, ತಪ್ಪಾಗಿ ಬರೆದಿರುವುದು ಅಥವಾ ಕಲರ್ ಕೋಡ್ ಅಳವಡಿಸಿದ್ದಲ್ಲಿ ಅದನ್ನು ಪತ್ತೆಹಚ್ಚಿ ಪೊಲೀಸರು ದಂಡ ವಿಧಿಸಲಿದ್ದಾರೆ. ಇದಕ್ಕೆ ರೂ. 500 ದಂಡ ಇರಲಿದೆ. ಸೆ.29ರಂದು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಪ್ರಯಾಣಕ್ಕೆ ಪೊಲೀಸರು ದಂಡ ವಿಧಿಸಲಿದ್ದಾರೆ. ಹಿಂಬದಿ ಸವಾರನಿಗೆ ಹೆಲ್ಮೆಟ್ ಇಲ್ಲದಿರುವುದು ಅಥವಾ ತ್ರಿವಳಿ ರೈಡಿಂಗ್ ಪತ್ತೆಯಾದಲ್ಲಿ 500 ರೂ. ದಂಡ ಬೀಳಲಿದೆ.
ಸೆ.30ರಂದು ವಾಹನದಲ್ಲಿ ಇನ್ಶೂರೆನ್ಸ್ ಇದೆಯಾ ಎನ್ನುವ ಬಗ್ಗೆ ಪೊಲೀಸರ ಟ್ರಾಫಿಕ್ ಡ್ರೈವ್ ನಡೆಯಲಿದೆ. ದ್ವಿಚಕ್ರ ವಾಹನಗಳು, ಆಟೋರಿಕ್ಷಾ, ಕಾರು ಸೇರಿದಂತೆ ಇನ್ನಿತರ ಎಲ್ಲ ರೀತಿಯ ವಾಹನಗಳಲ್ಲಿ ಇನ್ಶೂರೆನ್ಸ್ ದಾಖಲಾತಿಗಳನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ. ಇನ್ಶೂರೆನ್ಸ್ ಲ್ಯಾಪ್ಸ್ ಆಗಿದ್ದಲ್ಲಿ ಅಥವಾ ದಾಖಲಾತಿ ಇಲ್ಲದೇ ಇದ್ದಲ್ಲಿ 2-3 ವೀಲರ್ ವಾಹನಗಳಿಗೆ 1000, ನಾಲ್ಕು ಚಕ್ರದ ವಾಹನಗಳಿಗೆ ಎರಡು ಸಾವಿರ, ಲಾರಿ, ಟೆಂಪೋ ಇನ್ನಿತರ ಘನ ವಾಹನಗಳಿಗೆ ನಾಲ್ಕು ಸಾವಿರ ರೂಪಾಯಿ ದಂಡ ವಿಧಿಸಲಿದ್ದಾರೆ
ಅಕ್ಟೋಬರ್ 1ರಂದು ವಾಹನಗಳ ಮೇಲಿರುವ ಹಳೆ ಪ್ರಕರಣಗಳ ಪತ್ತೆಗೆ ಪೊಲೀಸರು ಇಳಿಯಲಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ, ಇನ್ಶೂರನ್ಸ್, ಹೆಲ್ಮೆಟ್ ರಹಿತ ಪ್ರಯಾಣಗಳಿಗೆ ಟ್ರಾಫಿಕ್ ಪೊಲೀಸರು ಆಟೋಮೆಟಿಕ್ ಪ್ರಕ್ರಿಯೆಯಲ್ಲಿ ದಂಡ ವಿಧಿಸಿ, ಬಾಕಿ ಉಳಿದಿರುವ ಪ್ರಕರಣಗಳನ್ನು ಕೆದಕಿ ಸ್ಥಳದಲ್ಲೇ ಹಣ ಪೀಕಿಸುವ ಕೆಲಸವನ್ನು ಮಾಡಲಿದ್ದಾರೆ. ಅ.2ರ ಗಾಂಧಿ ಜಯಂತಿಯಂದು ಎಮಿಶನ್ ಟೆಸ್ಟ್ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಲಿದ್ದು, ಕೋರ್ಟಿಗೆ ದಂಡ ಕಟ್ಟಲು ಶಿಫಾರಸು ಮಾಡಲಿದ್ದಾರೆ. ಒಟ್ಟಿನಲ್ಲಿ ಒಂದು ವಾರ ಪೂರ್ತಿ ಟ್ರಾಫಿಕ್ ಡ್ರೈವ್ ನಡೆಯಲಿದ್ದು, ಪೊಲೀಸರು ಸಾರ್ವಜನಿಕರಿಂದ ಟ್ರಾಫಿಕ್ ನಿಯಮಗಳ ನೆಪದಲ್ಲಿ ದಂಡ ಪೀಕಿಸುವುದಂತೂ ಖಚಿತ. ಸಿಟಿ ಪ್ರಯಾಣಿಕರು ತಮ್ಮ ವಾಹನಗಳಲ್ಲಿ ಅಡ್ಡಾಡುವಾಗ ಜಾಗ್ರತೆಯಲ್ಲಿ ಇರಬೇಕು.
— N. Shashi Kumar CP Mangaluru City (@compolmlr) September 26, 2021
September 27th to October 2nd Mangalore Police launch traffic drive huge fines for those violating traffic rules states Mangalore Police Commissioner Shashi Kumar.
23-04-25 10:49 pm
Bangalore Correspondent
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
24-04-25 01:58 pm
HK News Desk
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
Pahalgam terror attack, Pakistani terrorists:...
23-04-25 09:25 pm
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm