ತೆಂಗಿನ ಮರ ಏರಿದ್ದಾಗ ಕಣಜದ ಹುಳು ದಾಳಿ ; ಎಂಸಿಎಫ್‌ ಮೆಕ್ಯಾನಿಕ್ ದಾರುಣ ಸಾವು !

22-09-21 07:59 pm       Headline Karnataka News Network   ಕರಾವಳಿ

ಎಡಪದವಿನ ಪಟ್ಲಚ್ಚಿಲ್‌ ಎಂಬಲ್ಲಿನ ನಿವಾಸಿ, ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ (24) ಎಂಬವರು ಕಣಜದ ಹುಳುಗಳ ದಾಳಿಗೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರು, ಸೆ.22 : ಎಡಪದವಿನ ಪಟ್ಲಚ್ಚಿಲ್‌ ಎಂಬಲ್ಲಿನ ನಿವಾಸಿ, ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ (24) ಎಂಬವರು ಕಣಜದ ಹುಳುಗಳ ದಾಳಿಗೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮನೆಯಲ್ಲಿ ತೆಂಗಿನ ಮರದ ಕಾಯಿ ಕೀಳಲೆಂದು ಕೇಶವ ಹೊಸ ಯಂತ್ರವನ್ನು ಖರೀದಿಸಿದ್ದರು. ಅದನ್ನು ಬಳಸಿಕೊಂಡು ಕೇಶವ ಸ್ವತಃ ಮರ ಏರಿದ ಸಂದರ್ಭದಲ್ಲಿ ಅದರಲ್ಲಿ ಗೂಡು ಕಟ್ಟಿದ್ದ ಕಣಜದ ಹುಳು ದಾಳಿ ಮಾಡಿವೆ. ಏಕಾಏಕಿ ನೊಣಗಳ ದಾಳಿಯಿಂದಾಗಿ ಮೈಮೇಲೆ 70ಕ್ಕೂ ಹೆಚ್ಚು ಕಡೆ ಗಾಯಗಳಾಗಿದ್ದು ಕೂಡಲೇ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸದಾಶಿವ ಮತ್ತು ಕಮಲಾಕ್ಷಿ ದಂಪತಿಯ ಪುತ್ರನಾಗಿರುವ ಕೇಶವ, ಅವಿವಾಹಿತರಾಗಿದ್ದರು. ಮೂವರು ಸಹೋದರರನ್ನು ಅಗಲಿದ್ದಾರೆ.

A 24 year old youth AC Mechanic dies after an insect bite attack in Mangalore. The deceased has been identified as Keshav. He was working as AC Mechanic in MCF.