ಬ್ರೇಕಿಂಗ್ ನ್ಯೂಸ್
03-09-21 03:31 pm Mangaluru Correspondent ಕರಾವಳಿ
ಉಳ್ಳಾಲ, ಸೆ.3: ದ್ವಿಚಕ್ರ ವಾಹನಗಳಿಗೂ ಚಲಿಸಲಾಗದ ಸ್ಥಿತಿಯಲ್ಲಿ ಕೆಟ್ಟು ಕೆರ ಹಿಡಿದಿದ್ದ ಕುಂಪಲ ಸರಳಾಯ ಕಾಲನಿ ಮುಖ್ಯ ರಸ್ತೆಗೆ ಕೊನೆಗೂ ಕಾಯಕಲ್ಪ ದೊರಕಿದ್ದು ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಯು.ಟಿ. ಖಾದರ್ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ಕುಂಪಲ ಸರಳಾಯ ಕಾಲನಿ ಮಧ್ಯಮ ವರ್ಗದ ಜನರೇ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶವಾಗಿದೆ. ಹಿಂದೆಯೂ ಈ ಕಾಲನಿಯ ಅಡ್ಡ ರಸ್ತೆಗಳು ನಾದುರಸ್ಥಿಯಲ್ಲಿದ್ದಾಗ ಇಲ್ಲಿನ ಪ್ರದೇಶವಾಸಿಗಳು ಸರಕಾರದ ಅನುದಾನವನ್ನ ಕಾಯದೆ ಸ್ವಂತ ಹಣವನ್ನೇ ಒಗ್ಗೂಡಿಸಿ ಸುಸಜ್ಜಿತ ಕಾಂಕ್ರೀಟ್ ಅಡ್ಡ ರಸ್ತೆಗಳನ್ನು ತಾವೇ ನಿರ್ಮಿಸಿ ಸುದ್ದಿಯಾಗಿದ್ದರು.
ಸರಳಾಯ ಕಾಲನಿಯಿಂದ ಪಿಲಾರು ಪಲ್ಲ ಸಂಪರ್ಕದ ಮುಖ್ಯ ರಸ್ತೆಯು ಕಳೆದ ಹಲವಾರು ವರುಷಗಳಿಂದ ನಡೆಯಲೂ ಯೋಗ್ಯವಿಲ್ಲದ ಕಚ್ಛಾ ರಸ್ತೆಯಾಗಿಯೇ ಉಳಿದಿತ್ತು. ಈ ರಸ್ತೆಗಳಿಂದ ಸಂಚರಿಸುವ ದ್ವಿಚಕ್ರ ವಾಹನಗಳು ರಸ್ತೆ ನಡುವಿನ ಹೊಂಡಗಳಿಗೆ ಸಿಲುಕಿ ಪಲ್ಟಿ ಹೊಡೆಯುತ್ತಾ ಸಾಗುತ್ತಿದ್ದವು.






ರಸ್ತೆಯ ದುಸ್ಥಿಯನ್ನ ಅವಲೋಕಿಸಿದ್ದ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಕಾಂಕ್ರಿಟೀಕರಣಕ್ಕೆ ತಕ್ಷಣ ಅನುದಾನ ಮಂಜೂರು ಮಾಡಿದ್ದಾರೆ. ಇಂದು ನೂತನ ಕಾಂಕ್ರಿಟೀಕರಣ ಕಾಮಗಾರಿಗೆ ಅವರು ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ನೂತನವಾಗಿ ನಿರ್ಮಾಣವಾಗುವ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುಣಮಟ್ಟವನ್ನ ಸ್ಥಳೀಯರೇ ಅಳೆಯುವಂತಾಗಬೇಕು. ರಸ್ತೆಯು ಮೂವತ್ತು ವರ್ಷಗಳ ಬಳಕೆಗೆ ಯೋಗ್ಯವಿರುವಂತೆ ಗುಣಮಟ್ಟವನ್ನು ಗುತ್ತಿಗೆದಾರರು ಕಾಯ್ದುಕೊಳ್ಳಬೇಕು. ಕಾಂಕ್ರೀಟ್ ರಸ್ತೆಯ ಗುಣ ಮಟ್ಟಕ್ಕೆ ಕುಂಪಲ - ಚೇತನನಗರ ಮುಖ್ಯ ರಸ್ತೆಯೆ ಮಾದರಿ ಎಂದರು. ರಸ್ತೆ ನಿರ್ಮಾಣದ ವೇಳೆ ಸ್ಥಳೀಯರು ತಾಳ್ಮೆ ವಹಿಸಿದಲ್ಲಿ ಅತ್ಯುತ್ತಮ ರಸ್ತೆ ನಿರ್ಮಾಣವಾಗಲಿದೆ ಎಂದರು.
ಇದೇ ವೇಳೆ ಕುಂಪಲ ಆಶ್ರಯ ಕಾಲನಿಯಲ್ಲಿ ನಿರ್ಮಾಣಗೊಂಡ ನೂತನ ಇಂಟರ್ ಲಾಕ್ ರಸ್ತೆಯನ್ನೂ ಅವರು ಉದ್ಘಾಟಿಸಿದರು.ಪ್ರಮುಖರಾದ ಶ್ರೀಧರ ಆಳ್ವ, ಸದಾಶಿವ ಉಳ್ಳಾಲ್, ದಿನೇಶ್ ಕುಂಪಲ, ದೇವೇಶ ಸರಳಾಯ, ನಳಿನಿ, ಸೋಮೇಶ್ವರ ಪುರಸಭೆಯ ನಿಕಟ ಪೂರ್ವ ಸದಸ್ಯರಾದ ಪುರುಷೋತ್ತಮ ಶೆಟ್ಟಿ ಪಿಲಾರ್, ದೀಪಕ್ ಪಿಲಾರ್, ಉದಯಗಟ್ಟಿ ಪಿಲಾರ್, ಮುಖಂಡರಾದ ಸತೀಶ್ ಉಳ್ಳಾಲ್, ವಿನೋದ್, ಎ.ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
Kumpala colony in ullal road concrete work to begin and inauguration.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 09:54 am
HK News Desk
ಎಐಎಡಿಎಂಕೆ ತಾಳಕ್ಕೆ ಕುಣಿಯುತ್ತಿರುವ ಬಿಜೆಪಿ ; ಫೈರ್...
04-02-26 03:42 pm
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
06-02-26 03:09 pm
Mangalore Correspondent
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
ನಂತೂರಿನಿಂದ ಬೈಕಂಪಾಡಿಗೆ ಫ್ಲೈ ಓವರ್ ಪ್ರಸ್ತಾಪ ; ಮಾ...
05-02-26 11:03 pm
ಅತಿದೊಡ್ಡ ಸೈಬರ್ ನೆಟ್ವರ್ಕ್ ಪತ್ತೆಹಚ್ಚಿದ ಮಂಗಳೂರು...
05-02-26 10:01 pm
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
06-02-26 01:36 pm
HK News Desk
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm