ಬ್ರೇಕಿಂಗ್ ನ್ಯೂಸ್
30-08-21 05:43 pm Mangaluru Correspondent ಕರಾವಳಿ
ಉಳ್ಳಾಲ, ಆ.30: ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ನವಾಝ್ ಬೆಂಗ್ರೆಯನ್ನ ರಕ್ಷಿಸಿದ್ದ ಉಳ್ಳಾಲ ಹೊಯ್ಗೆಯ ಮೀನುಗಾರರ ತಂಡವನ್ನ ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯು ಗೌರವಿಸಿ ಸನ್ಮಾನಿಸಿದೆ.
ನಿನ್ನೆ ನಡೆದ ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಉಳ್ಳಾಲ ಹೊಯ್ಗೆಯ ಐವರು ಜೀವ ರಕ್ಷಕ ಮೀನುಗಾರರನ್ನ ಸನ್ಮಾನಿಸಲಾಯಿತು.
ಉಳ್ಳಾಲದ ಅಳಿವೆ ಬಾಗಿಲಿನ ಸಮುದ್ರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಿ ಹಿಂತಿರುಗುವಾಗ ಅಲೆಗಳ ಆರ್ಭಟಕ್ಕೆ ಸಮುದ್ರಕ್ಕೆಸೆಯಲ್ಪಟ್ಟ ನವಾಝ್ ಬೆಂಗ್ರೆಯನ್ನು ಸಾವಿನ ದವಡೆಯಿಂದ ರಕ್ಷಿಸಿದ ಉಳ್ಳಾಲ ಹೊಯ್ಗೆಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್, ರಿತೇಶ್ ಡಿಸೋಜ ಮತ್ತು ಅಜಿತ್ ಕರ್ಕೇರ ಬೆಂಗ್ರೆ ಅವರನ್ನು ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ಧಮಾಕ- ಸೀಸನ್ 15 ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಮುಖ್ಯಸ್ಥ ಲಿಯೋ ಡಿಸೋಜ ರಾಣಿಪುರ, ಲೋಬೋ ಸೌಂಡ್ಸ್ ಪೆರ್ಮನ್ನೂರಿನ ಮಾಲೀಕ ಜೈಸನ್ ಲೋಬೊ ಹಾಗೂ ಸಂಗೀತ ಕಾರ್ಯಕ್ರಮದ ಸದಸ್ಯರಾದ ರವಿರಾಜ್ ಡಿಸೋಜ, ರೋಲ್ಟನ್ ಪಿಂಟೋ, ಮೆಲ್ವಿಟಾ ಡಿಸೋಜ, ಕ್ಲಿಯೋನ್ ಡಿಸೋಜ, ಪ್ರೀತಮ್ ನೊರೊನ್ಹ ಪಜೀರು, ಕಾರ್ಯಕ್ರಮದ ಪ್ರಾಯೋಜಕ ಮ್ಯಾಕ್ಸಿಮ್ ಡಿಸೋಜ ರಾಣಿಪುರ, ಡೋಲ್ಫಿ ಡಿಸೋಜ ರಾಣಿಪುರ, ರೋನಿ ಡಿಸೋಜ ಪೆರ್ಮನ್ನೂರು, ರೇಡಿಯೋ ಸಾರಂಗ್ ಕಾರ್ಯಕ್ರಮ ನಿರೂಪಕ
ರೋಷನ್ ಕ್ರಾಸ್ತಾ ಪಾಲ್ದನೆ ಮೊದಲಾದವರು ಉಪಸ್ಥಿತರಿದ್ದರು.
ಫೇಸ್ ಬುಕ್ ನೇರಪ್ರಸಾರ ವೀಕ್ಷಿಸಿದ ಸಾವಿರಾರು ಮಂದಿ ಜೀವ ಪಣಕ್ಕಿಟ್ಟು ಸಮುದ್ರಪಾಲಾಗುತ್ತಿದ್ದ ಪ್ರಾಣ ಉಳಿಸಿದ ಉಳ್ಳಾಲ ಹೊಯ್ಗೆಯ ಐವರು ಯುವಕರ ಸಾಧನೆಯನ್ನು ಪ್ರಶಂಸಿದ್ದಾರೆ.
Ullal Fishermen rescued from drowning team felicitated for saving life
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm