ಬ್ರೇಕಿಂಗ್ ನ್ಯೂಸ್
30-08-21 05:43 pm Mangaluru Correspondent ಕರಾವಳಿ
ಉಳ್ಳಾಲ, ಆ.30: ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ನವಾಝ್ ಬೆಂಗ್ರೆಯನ್ನ ರಕ್ಷಿಸಿದ್ದ ಉಳ್ಳಾಲ ಹೊಯ್ಗೆಯ ಮೀನುಗಾರರ ತಂಡವನ್ನ ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯು ಗೌರವಿಸಿ ಸನ್ಮಾನಿಸಿದೆ.
ನಿನ್ನೆ ನಡೆದ ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಉಳ್ಳಾಲ ಹೊಯ್ಗೆಯ ಐವರು ಜೀವ ರಕ್ಷಕ ಮೀನುಗಾರರನ್ನ ಸನ್ಮಾನಿಸಲಾಯಿತು.
ಉಳ್ಳಾಲದ ಅಳಿವೆ ಬಾಗಿಲಿನ ಸಮುದ್ರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಿ ಹಿಂತಿರುಗುವಾಗ ಅಲೆಗಳ ಆರ್ಭಟಕ್ಕೆ ಸಮುದ್ರಕ್ಕೆಸೆಯಲ್ಪಟ್ಟ ನವಾಝ್ ಬೆಂಗ್ರೆಯನ್ನು ಸಾವಿನ ದವಡೆಯಿಂದ ರಕ್ಷಿಸಿದ ಉಳ್ಳಾಲ ಹೊಯ್ಗೆಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್, ರಿತೇಶ್ ಡಿಸೋಜ ಮತ್ತು ಅಜಿತ್ ಕರ್ಕೇರ ಬೆಂಗ್ರೆ ಅವರನ್ನು ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ಧಮಾಕ- ಸೀಸನ್ 15 ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಮುಖ್ಯಸ್ಥ ಲಿಯೋ ಡಿಸೋಜ ರಾಣಿಪುರ, ಲೋಬೋ ಸೌಂಡ್ಸ್ ಪೆರ್ಮನ್ನೂರಿನ ಮಾಲೀಕ ಜೈಸನ್ ಲೋಬೊ ಹಾಗೂ ಸಂಗೀತ ಕಾರ್ಯಕ್ರಮದ ಸದಸ್ಯರಾದ ರವಿರಾಜ್ ಡಿಸೋಜ, ರೋಲ್ಟನ್ ಪಿಂಟೋ, ಮೆಲ್ವಿಟಾ ಡಿಸೋಜ, ಕ್ಲಿಯೋನ್ ಡಿಸೋಜ, ಪ್ರೀತಮ್ ನೊರೊನ್ಹ ಪಜೀರು, ಕಾರ್ಯಕ್ರಮದ ಪ್ರಾಯೋಜಕ ಮ್ಯಾಕ್ಸಿಮ್ ಡಿಸೋಜ ರಾಣಿಪುರ, ಡೋಲ್ಫಿ ಡಿಸೋಜ ರಾಣಿಪುರ, ರೋನಿ ಡಿಸೋಜ ಪೆರ್ಮನ್ನೂರು, ರೇಡಿಯೋ ಸಾರಂಗ್ ಕಾರ್ಯಕ್ರಮ ನಿರೂಪಕ
ರೋಷನ್ ಕ್ರಾಸ್ತಾ ಪಾಲ್ದನೆ ಮೊದಲಾದವರು ಉಪಸ್ಥಿತರಿದ್ದರು.
ಫೇಸ್ ಬುಕ್ ನೇರಪ್ರಸಾರ ವೀಕ್ಷಿಸಿದ ಸಾವಿರಾರು ಮಂದಿ ಜೀವ ಪಣಕ್ಕಿಟ್ಟು ಸಮುದ್ರಪಾಲಾಗುತ್ತಿದ್ದ ಪ್ರಾಣ ಉಳಿಸಿದ ಉಳ್ಳಾಲ ಹೊಯ್ಗೆಯ ಐವರು ಯುವಕರ ಸಾಧನೆಯನ್ನು ಪ್ರಶಂಸಿದ್ದಾರೆ.
Ullal Fishermen rescued from drowning team felicitated for saving life
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 09:49 am
HK News Staffer
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am