ಬ್ರೇಕಿಂಗ್ ನ್ಯೂಸ್
28-08-21 07:34 pm Richard, Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 28: ಆತ ಕೇವಲ 21ರ ಯುವಕ. ಹೆಸರು ಚೇತನ್ ಕುಮಾರ್. ಮನೆಯಲ್ಲಿನ ಬಡತನ ಮತ್ತು ದುಡಿಯುವ ಅನಿವಾರ್ಯತೆಯಿಂದಾಗಿ ಸಣ್ಣ ವಯಸ್ಸಿನಲ್ಲೇ ಉದ್ಯೋಗಕ್ಕೆ ಇಳಿಸಲ್ಪಟ್ಟಿದ್ದ. ಬಸ್ ಕ್ಲೀನರ್ ಕೆಲಸ ಮಾಡುತ್ತಲೇ ಕಷ್ಟದಲ್ಲಿ ಕಾಲೇಜು ಓದಿದ್ದ ಯುವಕ ಒಂದೂವರೆ ವರ್ಷದಿಂದ ಬಸ್ ಕಂಡಕ್ಟರನಾಗಿ ಸೇರಿಕೊಂಡಿದ್ದ. ಐದು ಮಕ್ಕಳಲ್ಲಿ ಹಿರಿಯವನಾಗಿದ್ದ ಈತನ ದುಡಿಮೆಯಿಂದಲೇ ಮನೆ ನಡೆಯಬೇಕಾಗಿತ್ತು.
ಚೇತನ್ ಕುಮಾರ್ ಮನೆ ಇರುವುದು ಮಂಗಳೂರು ಹೊರವಲಯದ ಬೈಕಂಪಾಡಿ ಬಳಿಯ ಜೋಕಟ್ಟೆ ಸಮೀಪದ ಅಂಗರಗುಂಡಿ ಎಂಬಲ್ಲಿ. ಹೆದ್ದಾರಿಯಿಂದ ಮನೆಗೆ ತೆರಳಬೇಕಿದ್ದರೆ ಮೂರು ಕಿಮೀ ನಡೆಯಬೇಕಿತ್ತು. ದಿನವೂ ಬೆಳಗ್ಗೆ ಮೂರು ಕಿಮೀ ನಡೆದುಕೊಂಡೇ ಜೋಕಟ್ಟೆಯ ರೈಲು ಹಳಿಯನ್ನು ದಾಟಿಕೊಂಡು ಕೆಲಸಕ್ಕೆ ಬರುತ್ತಿದ್ದ. ಇಂದು ವೀಕೆಂಡ್ ಲಾಕ್ಡೌನ್ ಇದ್ದ ಕಾರಣ ಬಸ್ಸಿಗೆ ಜನ ಇರಲ್ಲ ಎಂದುಕೊಂಡು ತಡವಾಗಿ ಬಸ್ ಬಿಡಲು ನಿರ್ಧರಿಸಿದ್ದರು.

ಹಾಗಾಗಿ ಬೆಳಗ್ಗೆ 8.30ರ ಸುಮಾರಿಗೆ ನಡೆದುಕೊಂಡು ಬಂದು ಜೋಕಟ್ಟೆಯ ರೈಲು ಹಳಿ ದಾಟುತ್ತಿದ್ದಾಗ, ಅಲ್ಲೊಂದು ಆಡು ಮರಿ ಹಳಿಯ ಉದ್ದಕ್ಕೂ ಓಡುವುದು ಕಾಣಿಸಿತ್ತು. ಅದೇ ಸಂದರ್ಭದಲ್ಲಿ ದೂರದಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ ಚೇತನ್ ಕುಮಾರ್, ಆಡು ಮರಿಯ ರಕ್ಷಣೆಗೆ ಧಾವಿಸಿದ್ದಾನೆ. ಓಡುತ್ತಲೇ ಆಡಿನ ಮರಿಯನ್ನು ಹೊರಕ್ಕೆ ದೂಡಿದ ಚೇತನ್ ಕುಮಾರ್ ಹಳಯಿಂದ ಹೊರಬೀಳುವಷ್ಟರಲ್ಲಿ ರೈಲು ಧಾವಿಸಿ ಬಂದಿದೆ. ಚೇತನ್ ಕಾಲಿನ ಮೇಲಿಂದಲೇ ರೈಲು ಹರಿದು ಹೋಗಿದ್ದು, ಎರಡೂ ಕಾಲುಗಳು ತುಂಡಾಗಿ ಬಿದ್ದಿವೆ.

ಕೆಲವೇ ಕ್ಷಣಗಳಲ್ಲಿ ಘಟನೆ ನಡೆದು ಹೋಗಿದ್ದು ಆಡಿನ ಮರಿಯನ್ನು ರಕ್ಷಿಸಲು ಹೋಗಿದ್ದ ಯುವಕ ದುರಂತವನ್ನೇ ತಂದುಕೊಂಡಿದ್ದಾನೆ. ಕೂಡಲೇ ಆತನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ತರಲಾಗಿದ್ದು, ವೈದ್ಯರು ಪರಿಶೀಲಿಸಿ ಎರಡೂ ಕಾಲು ತುಂಡಾಗಿರುವುದನ್ನು ತಿಳಿಸಿದ್ದಾರೆ. ಯುವಕನ ದುಡಿಮೆಯಿಂದಲೇ ಬದುಕುತ್ತಿದ್ದ ಬಡ ಕುಟುಂಬಕ್ಕೆ ಈ ಘಟನೆಯಿಂದಾಗಿ ದಿಕ್ಕೇ ತೋಚದಂತಾಗಿದೆ.
ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರು ಶಾಲೆ, ಕಾಲೇಜು ಕಲಿಯುತ್ತಿದ್ದಾರೆ. ತಂದೆ, ತಾಯಿ ಮತ್ತು ಇತರ ಮಕ್ಕಳಿಗೆಲ್ಲ ಅಣ್ಣನ ದುಡಿಮೆಯೇ ಆಧಾರವಾಗಿತ್ತು. ಸಣ್ಣ ವಯಸ್ಸಿನಲ್ಲೇ ಕುಟುಂಬಕ್ಕೆ ಆಸರೆಯಾಗಿದ್ದ ಯುವಕನ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಎದ್ದು ನಡೆಯಲಾಗದ ಸ್ಥಿತಿ ಎದುರಾಗಿದೆ. ಸ್ವಲ್ಪ ಖರ್ಚು ಮಾಡಿದರೆ, ಒಂದು ಕಾಲನ್ನು ಉಳಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಕ್ಷೇತ್ರದ ಶಾಸಕರು ಮತ್ತು ಸಹೃದಯಿಗಳ ಸಹಾಯದ ನಿರೀಕ್ಷೆಯಲ್ಲಿ ಚೇತನ್ ಕುಮಾರ್ ಕುಟುಂಬ ಇದೆ.
ಅಂದಹಾಗೆ, ಈತ ಕಂಡಕ್ಟರ್ ಆಗಿದ್ದ ಬಸ್ ರೂಟ್ ನಂಬರ್ 2 ಆಗಿದ್ದು, ಬಜ್ಪೆ, ಜೋಕಟ್ಟೆ, ಸ್ಟೇಟ್ ಬ್ಯಾಂಕ್ ಮಧ್ಯೆ ಸಂಚರಿಸುತ್ತಿತ್ತು. ಆಡು, ನಾಯಿಗಳಂದ್ರೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಚೇತನ್ ಪಾಲಿಗೆ ಆ ಪ್ರೀತಿಯೇ ಸಂಚಕಾರ ತಂದಿಟ್ಟಿದೆ.
Mangalore 21-year-old Bus Conductor Chethan Kumar loses both his legs to save little Goat from the train accident at Baikampady. Chethan who saw the little goat going to be killed saved it and sacrificed both his legs. Chethan is said to be admitted to a private hospital in Mangalore. Doctors have stated that he won't be able to walk anymore.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am