ಬ್ರೇಕಿಂಗ್ ನ್ಯೂಸ್
15-08-21 11:06 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 15: ಖ್ಯಾತ ಭಾಗವತ, ಪ್ರಸಂಗಕರ್ತ ಯಕ್ಷಗಾನದ ಹಿಮ್ಮೇಳ- ಮುಮ್ಮೇಳದಲ್ಲಿ ಸವ್ಯಸಾಚಿಯೆಂದು ಹೆಸರು ಮಾಡಿದ್ದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (65) ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಅವರನ್ನು ಇತ್ತೀಚೆಗೆ ಮನೆಗೆ ಒಯ್ಯಲಾಗಿತ್ತು. ಶನಿವಾರ ದಿಢೀರ್ ಅಸ್ವಸ್ಥರಾಗಿದ್ದು ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ. ಮೂಲತಃ ಕೊಣಾಜೆ ಸಮೀಪದ ಮಂಜನಾಡಿಯ ಬೊಟ್ಟಿಕೆರೆ ಎಂಬಲ್ಲಿನ ನಿವಾಸಿಯಾಗಿದ್ದ ಪುರುಷೋತ್ತಮ ಪೂಂಜ ಬಿಎಸ್ಸಿ ಪದವೀಧರರು. ಪದವಿ ಬಳಿಕ ಅವರು ಆನೆಗುಂಡಿ ಗಣಪತಿ ಭಟ್ ಮತ್ತು ಹೊಸಹಿತ್ಲು ಮಹಾಲಿಂಗ ಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹಿಮ್ಮೇಳ- ಮುಮ್ಮೇಳಗಳಲ್ಲಿ ತರಬೇತಿ ಪಡೆದಿದ್ದರು. ಆರಂಭದಲ್ಲಿ ಉದ್ಯೋಗ ನಿಮಿತ್ತ ಮುಂಬೈಯಲ್ಲಿದ್ದ ಪೂಂಜರು ಬಳಿಕ ವೃತ್ತಿ ಮೇಳಗಳಲ್ಲಿ ತೊಡಗಿಸಿದ್ದರು. ಸಮರ್ಥ ವೇಷಧಾರಿ, ಚೆಂಡೆ- ಮದ್ದಳೆ ವಾದಕ, ಭಾಗವತ ಮತ್ತು ಪ್ರಸಂಗಕರ್ತರೂ ಆಗಿದ್ದ ಪೂಂಜರ ಗರಡಿಯಲ್ಲಿ ಅದೆಷ್ಟೋ ಮಂದಿ ಕಲಾವಿದರಾಗಿ ವೃತ್ತಿ ಬದುಕು ನಡೆಸುತ್ತಿದ್ದಾರೆ.
ಮುಂಬೈನಲ್ಲಿ ಗೀತಾಂಬಿಕಾ, ಉಪ್ಪಳ ಭಗವತಿ, ಪುತ್ತೂರು, ಕರ್ನಾಟಕ ಮತ್ತು ಕಟೀಲು ಮೇಳಗಳಲ್ಲಿ 42 ವರ್ಷ ತಿರುಗಾಟ ಮಾಡಿದ್ದ ಪೂಂಜರು ಪ್ರಸಕ್ತ ಕಟೀಲು ಒಂದನೇ ಮೇಳದ ಪ್ರಧಾನ ಭಾಗವತರಾಗಿದ್ದರು. ಕಟೀಲಿನ ಎಲ್ಲ ಮೇಳಗಳ ಪ್ರಸಂಗ, ಪಾತ್ರ ಸಂಯೋಜನೆ ಜವಾಬ್ದಾರಿಯನ್ನೂ ಇವರೇ ನಿರ್ವಹಿಸುತ್ತಿದ್ದರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 32 ಪ್ರಸಂಗಗಳನ್ನು ಅವರು ಬರೆದಿದ್ದಾರೆ.
ರಾಮಾಯಣದ ಕೊನೆಯ ಅಂಕ ಮಾನಿಷಾದ ಇವರ ಅತೀ ಹೆಚ್ಚು ಹೆಗ್ಗಳಿಕೆ ಪಡೆದ ಪ್ರಸಂಗ. ಉಳಿದಂತೆ ನಳಿನಾಕ್ಷಿ ನಂದಿನಿ, ಉಭಯಕುಲ ಬಿಲ್ಲೋಜ, ಮೇಘ ಮಯೂರಿ, ಸ್ವರ್ಣನೂಪುರ (ಕನ್ನಡ) ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣೆ, ಗರುಡಕೇಂಜವೆ, ಪಟ್ಟದಕತ್ತಿ, ಕುಡಿಯನ ಕಣ್ಣ್, ಸ್ವರ್ಣಕೇದಗೆ (ತುಳು) ಪ್ರಸಂಗಗಳು ವೃತ್ತಿ ಮೇಳಗಳಲ್ಲಿ ಪ್ರಯೋಗಗೊಂಡು ಜನಪ್ರಿಯವಾಗಿದ್ದವು.
ಅವರ 29 ಪ್ರಸಂಗಗಳನ್ನು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 'ಅಂಬುರುಹ' ಎಂಬ ಹೆಸರಿನಿಂದ ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ನಾನಾ ಪ್ರಶಸ್ತಿ ಪಡೆದ ಅವರು ಯಕ್ಷ ಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಮನೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
Bottikere Purushotham Poonja (68), renowned as 'Abhinava Valmiki' and an all-rounder in the field of Yakshagana, passed away late night on Saturday, August 14. Poonja, who was suffering from illness, was undergoing treatment at a hospital. He was a BSc graduate and
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am