ಬ್ರೇಕಿಂಗ್ ನ್ಯೂಸ್
25-07-21 11:03 pm Mangaluru Correspondent ಕರಾವಳಿ
ಮಂಗಳೂರು, ಜುಲೈ 25: ಟಿವಿ ಜಾಹೀರಾತಿನಲ್ಲಿ ಯುವತಿಯೊಬ್ಬಳು ತಾಯಿ ಜೊತೆಗೆ ಕಾರಿನಲ್ಲಿ ತೆರಳಿದ್ದಾಗ ಟೈರ್ ಪಂಕ್ಚರ್ ಆಗಿ ಬಳಿಕ ಯುವತಿಯೇ ಟೈರ್ ತೆಗೆದು ಹಾಕುತ್ತಾಳೆ. ಕೊನೆಯಲ್ಲಿ ಅಪ್ಪನನ್ನು ನೋಡಿದ್ದೆ ಎಂದುಸುರುತ್ತಾ ಟಾನಿಕ್ ಬಗ್ಗೆ ಹೇಳುತ್ತಾಳೆ. ಅದು ಜಾಹೀರಾತು. ನಿಜ ಜೀವನದಲ್ಲಿ ಯುವತಿ ಕಾರು ಡ್ರೈವ್ ಮಾಡುವಾಗ ಟೈರ್ ಪಂಕ್ಚರ್ ಆದರೆ ಏನು ಗತಿ ? ಇಂಥಾದ್ದೇ ಪ್ರಸಂಗ ಮಂಗಳೂರಿನಲ್ಲಿ ಇವತ್ತು ಆಗಿತ್ತು.
ಮಹಿಳೆ ಮತ್ತು ಮಗು ಮಾತ್ರ ಇದ್ದ ಕಾರೊಂದು ನಾಗುರಿಯಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದಾಗ ಟಯರ್ ಪಂಕ್ಚರ್ ಆಗಿತ್ತು. ಕೂಡಲೇ ಕಾರಿನಿಂದಿಳಿದ ಮಹಿಳೆ ಹೊರಗೆ ನಿಂತು ಏನು ಮಾಡುವುದೆಂದು ತೋಚದೆ ನಿಂತಿದ್ದರು. ಆಕೆ ಕುಂದಾಪುರ ಮೂಲದ ಮಹಿಳೆಯಾಗಿದ್ದರಿಂದ ಸಂಬಂಧಿಕರು ಹತ್ತಿರ ಇರಲಿಲ್ಲವೋ ಏನೋ..ಮಹಿಳೆಯ ಅಸಹಾಯಕತೆ ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ತಾವೇ ಟೈರ್ ಬಿಚ್ಚಿಸಲು ನೆರವಾಗಿದ್ದಾರೆ. ರಸ್ತೆ ಬದಿ ಕಾರನ್ನು ಪಾರ್ಕ್ ಮಾಡಿ, ಟೈರ್ ತೆಗೆದು ಬೇರೆ ಸ್ಟೆಪಿನ್ ಟಯರ್ ಅಳವಡಿಸಿ ಮಾನವೀಯತೆ ಕಾರ್ಯ ಮಾಡಿದ್ದಾರೆ.
ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿತ್ತು. ಇದೇ ಸಂದರ್ಭ ಹೈವೇ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ನೆರವಿಗೆ ನಿಂತಿದ್ದಾರೆ. ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾಡ್೯ ಆಸಿಫ್ ಸೇರಿ ಮಾಡಿರುವ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
Mangalore Kankandy Traffic Police help a woman fix the car tyre. Traffic police SI Lasrado, Mahesh and Home guard Asif help in fixing the punctured car. The Picture of this goes viral on social media.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm