ಬ್ರೇಕಿಂಗ್ ನ್ಯೂಸ್
25-07-21 03:57 pm Mangaluru Correspondent ಕರಾವಳಿ
ಮಂಗಳೂರು, ಜುಲೈ 25: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಿರುವ ಭಾರತೀಯ ಕ್ರೀಡಾಳುಗಳಿಗೆ ಶುಭಾಶಯ ಕೋರುವ ಅವಸರದಲ್ಲಿ ರೆಸ್ಲಿಂಗ್ ಚಾಂಪ್ಯನ್ ಶಿಪ್ಪಿನಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಮಲ್ಲಿಕ್ ಅವರನ್ನು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದಾಗಿ ಶುಭಾಶಯ ಕೋರಿ ಎಡವಟ್ಟು ಮಾಡಿದ್ದಾರೆ.

ಹಂಗೇರಿಯಲ್ಲಿ ನಡೆದ ವಿಶ್ವ ಕೇಡೆಟ್ ರೆಸ್ಲಿಂಗ್ ಚಾಂಪ್ಯನ್ ಶಿಪ್ ಕೂಟದಲ್ಲಿ ಭಾರತದ ಪ್ರಿಯಾ ಮಲಿಕ್ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಫೈನಲ್ ಪಂದ್ಯದಲ್ಲಿ ಬೆಲಾರಸ್ಸಿನ ಎದುರಾಳಿ ಕ್ಸೆನಿಯಾ ಪತಾಪೊವಿಚ್ ಅವರನ್ನು 5-0 ನೇರ ಸೆಟ್ ಗಳಲ್ಲಿ ಮಣಿಸಿ ಚಿನ್ನದ ಬೇಟೆಯಾಡಿದ್ದರು. ಆದರೆ, ಇದನ್ನೇ ಒಲಿಂಪಿಕ್ಸ್ ನಲ್ಲಿ ಭಾರತದ ಮತ್ತೊಬ್ಬ ಕ್ರೀಡಾಳು ಚಿನ್ನ ಗೆದ್ದಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಟ್ವಿಟರ್ ನಲ್ಲಿ ಪ್ರಿಯಾ ಮಲಿಕ್ ಫೋಟೋ ಜೊತೆಗೆ ಪೋಸ್ಟ್ ಮಾಡಿದ್ದು, ನೆಟ್ಟಿಗರು ವ್ಯಂಗ್ಯದ ನಗೆ ಬೀರಿದ್ದಾರೆ.


ಹಲವಾರು ಮಂದಿ ನಳಿನ್ ಕುಮಾರ್ ಟ್ವೀಟನ್ನು ಮರು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಕೆಲವರು ತುಳುವಿನಲ್ಲೇ ಟ್ವೀಟ್ ಮಾಡಿದ್ದು ಅದು ಒಲಿಂಪಿಕ್ಸ್ ಅಲ್ಲ ಮಾರ್ರೇ.. ಒಮ್ಮೆ ಡಿಲೀಟ್ ಮಾಡ್ರಿ.. ಅದು ವರ್ಲ್ಡ್ ರೆಸ್ಲಿಂಗ್.. ಎಂದು ಬರೆದುಕೊಂಡಿದ್ದಾರೆ. ಕೆಲವರು ಇವತ್ತು ಈ ಟ್ವಿಟರ್ ಹ್ಯಾಂಡ್ಲರ್ ಗೆ ಕಾದಿದೆ ಎಂದು ಬರೆದಿದ್ದಾರೆ. ಇದಲ್ಲದೆ, ಈ ರೀತಿಯ ಎಡವಟ್ಟಿನ ಟ್ವಿಟರ್ ಫೋಟೋಗಳು, ಕಮೆಂಟುಗಳನ್ನು ಫೋಟೋ ತೆಗೆದು ವಾಟ್ಸಪ್ ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಡಿಯೋ ಹೊರಬಂದು ತೀವ್ರ ಟ್ರೋಲ್ ಆಗಿರುವ ನಳಿನ್ ಕುಮಾರ್ ಈಗ ಮತ್ತೆ ಟ್ರೋಲ್ ಆಗುವಂತಾಗಿದೆ. ಟ್ವೀಟಿಗರು ಗರಂ ಆಗುತ್ತಿದ್ದಂತೆ ನಳಿನ್ ಕುಮಾರ್ ಎಡವಟ್ಟಿನ ಟ್ವೀಟ್ ಡಿಲೀಟ್ ಆಗಿತ್ತು.
BJP Naleem Kumar Kateel wrongly tweets as Priya Malik wins gold medal in Olympics instead of Cadet World Championship in Budapest, Hungary, on Sunday. Many Twitter handlers asked for the tweet to be deleted.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm