ಬ್ರೇಕಿಂಗ್ ನ್ಯೂಸ್
13-07-21 03:47 pm Mangalore Correspondent ಕರಾವಳಿ
ಬಂಟ್ವಾಳ, ಜುಲೈ 13: ಮನೆಯಲ್ಲಿ ಗ್ಯಾಸ್ ಗೀಸರ್ ಬಳಸಿ ಸ್ನಾನ ಮಾಡುತ್ತಿದ್ದ ಯುವಕನೊಬ್ಬ ಬಾತ್ ರೂಮಿನಲ್ಲೇ ಉಸಿರುಕಟ್ಟಿ ಸಾವು ಕಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ. ಫರಂಗಿಪೇಟೆಯ ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಸ್ ಅಹ್ಮದ್ (23) ಮೃತ ಯುವಕ. ಜುಲೈ 12ರಂದು ಸಂಜೆ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದಾಗ ಘಟನೆ ನಡೆದಿದೆ.
ಮಳೆ ಇದ್ದುದರಿಂದ ಗೀಸರ್ ಆನ್ ಮಾಡಿ, ಇಜಾಸ್ ಸ್ನಾನಕ್ಕೆ ಹೋಗಿದ್ದ. ಆದರೆ, ಒಂದು ಗಂಟೆ ಕಳೆದರೂ ಹೊರಗೆ ಬರದ್ದನ್ನು ಕಂಡು ತಂದೆ ಮತ್ತು ಇತರ ಸೋದರರು ಸೇರಿ ಬಾಗಿಲು ಬಡಿದು ಕರೆದಿದ್ದಾರೆ. ಬಾಗಿಲು ಬಡಿದರೂ ಸ್ಪಂದಿಸದ್ದರಿಂದ ಬಳಿಕ ಒಡೆದು ನೋಡಿದಾಗ, ಇಜಾಸ್ ನೆಲದಲ್ಲಿ ಕುಸಿದು ಬಿದ್ದಿರುವುದು ಕಂಡಿದೆ. ಕೂಡಲೇ ಆಸ್ಪತ್ರೆಗೆ ಒಯ್ದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗೀಸರ್ ವರ್ಕಿಂಗ್ ಇರುವಾಗ ಕಾರ್ಬನ್ ಮೋನೋಕ್ಸೈಡ್ ಬಿಡುಗಡೆಯಾಗುವುದು ಮತ್ತು ಈ ವೇಳೆ ಬಾತ್ ರೂಮ್ ಬಾಗಿಲು ಬಂದ್ ಮಾಡಿದ್ದರಿಂದ ಅದನ್ನು ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಇಜಾಸ್ ಹುಬ್ಬಳ್ಳಿಯಲ್ಲಿ ಆಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದು, ವಾರದ ಹಿಂದಷ್ಟೇ ಊರಿಗೆ ಬಂದಿದ್ದ. ಇಜಾಸ್ ಅಹ್ಮದ್, ತಂದೆ, ತಾಯಿ ಮತ್ತು ಮೂವರು ಸೋದರರನ್ನು ಅಗಲಿದ್ದಾರೆ.
The youth died due to asphyxiation while having a bath due to the gas geyser. This incident is reported from Maripalla of Farangipet in the taluk on the afternoon of Monday, July 12. Ijaz Ahmed (23), son of Ismail, is the youth who died in this incident. He was having a bath in the bathroom with the geyser on.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm