ಬ್ರೇಕಿಂಗ್ ನ್ಯೂಸ್
09-07-21 04:36 pm Mangalore Correspondent ಕರಾವಳಿ
ಮಂಗಳೂರು, ಜುಲೈ 9: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದರೂ ಅದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಅಕ್ರಮ ಗೋಹತ್ಯೆ, ಅಕ್ರಮ ಗೋಸಾಗಣೆ ನಿರಂತರವಾಗಿ ನಡೆಯುತ್ತಿದೆ. ಈಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು, ಆ ಸಂದರ್ಭದಲ್ಲಿ ಮತ್ತೆ ಗೋವುಗಳ ವಧೆಯಾಗಲಿದೆ. ಅಂತಹ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ತೊಂದರೆಗಳಾದರೆ ನಾವು ಹೊಣೆಯಾಗಲ್ಲ ಎಂದು ವಿಶ್ ಹಿಂದು ಪರಿಷತ್ ವಿಭಾಗ ಮುಖ್ಯಸ್ಥ ಪ್ರೊ.ಎಂ.ಬಿ. ಪುರಾಣಿಕ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಪುರಾಣಿಕ್, ರಾಜ್ಯದಲ್ಲಿ ಜಾರಿಗೆ ಬಂದಿರುವ ಗೋಹತ್ಯೆ ಕಾನೂನು ಪ್ರಬಲವಾಗಿದೆ. ಅಕ್ರಮವಾಗಿ ಗೋವನ್ನು ಹತ್ಯೆ ಮಾಡುವುದು ಕಂಡುಬಂದರೆ 3ರಿಂದ ಏಳು ವರ್ಷದ ವರೆಗೆ ಶಿಕ್ಷಿಸಲು ಅವಕಾಶವಿದೆ. 5 ಲಕ್ಷ ರೂ. ವರೆಗೆ ದಂಡವನ್ನೂ ವಿಧಿಸಬಹುದು. ಯಾವುದೇ ಕಡೆ ಗೋವನ್ನು ಹತ್ಯೆ ಮಾಡಿದ್ದು ಕಂಡುಬಂದರೆ ಆ ಕಟ್ಟಡ, ಮನೆಯನ್ನು ಮುಟ್ಟುಗೋಲು ಹಾಕುವುದಕ್ಕೂ ಅವಕಾಶಗಳಿವೆ. ಆದರೆ, ಈ ರೀತಿಯ ಕಾನೂನು ಬಂದಿದ್ದರೂ, ಅದರ ಅನುಷ್ಠಾನ ಆಗುತ್ತಿಲ್ಲ ಎಂದು ಹೇಳಿದರು.
ಗೋಹತ್ಯೆ ವಿಚಾರ ಹಿಂದುಗಳ ಭಾವನೆಗೆ ಘಾಸಿಗೊಳಿಸುವಂಥದ್ದು. ಹಾಗಾಗಿ, ಇದರ ಕಾರಣಕ್ಕೆ ಈ ಹಿಂದೆ ಕೋಮು ಗಲಭೆ ಆಗಿದ್ದೂ ಇದೆ. ಆದರೆ, ಅಂತಹುದಕ್ಕೆ ಜಿಲ್ಲಾಡಳಿತ ಅವಕಾಶ ಕೊಡಬಾರದು. ಕಾನೂನು ಏನಿದೆಯೋ ಅದನ್ನು ಸೂಕ್ತವಾಗಿ ಪಾಲನೆ ಮಾಡಿದಲ್ಲಿ ಅಕ್ರಮ ಗೋಹತ್ಯೆ, ಗೋಸಾಗಣೆಗೆ ಕಡಿವಾಣ ಬೀಳುತ್ತದೆ. ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕು ಎಂದು ಪುರಾಣಿಕ್ ಆಗ್ರಹಿಸಿದರು.
ಅಧಿಕೃತ ಕಸಾಯಿಖಾನೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಆಗಿತ್ತು. ಆದರೆ, ಇನ್ನೂ ಕೂಡ ಕುದ್ರೋಳಿ ಕಸಾಯಿಖಾನೆಯಲ್ಲಿ ಸಿಸಿಟಿವಿ ಹಾಕಿಲ್ಲ ಎಂದು ಗೋರಕ್ಷಾ ದಳದ ದಿನೇಶ್ ಪೈ ಹೇಳಿದರು. ಇದಕ್ಕೆ ಈಗ ಬಿಜೆಪಿಯದ್ದೇ ಆಡಳಿತ ಇದೆಯಲ್ಲ. ಯಾಕೆ ಹಾಕಿಸಿಲ್ಲ ಎಂದು ಪ್ರಶ್ನೆ ತೂರಿಬಂತು. ನಾವು ಆಗ್ರಹ ಮಾಡಿದ್ದೇವೆ. ಆಡಳಿತದವರು ತಮ್ಮ ಕಾರ್ಯ ಮಾಡಬೇಕು ಎಂದು ದಿನೇಶ್ ಪೈ ಚುಟುಕಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ ಕುತ್ತಾರ್, ಪುನೀತ್ ಅತ್ತಾವರ, ಪ್ರದೀಪ್ ಪಂಪ್ವೆಲ್, ಗುರುಪ್ರಸಾದ್ ಉಳ್ಳಾಲ ಉಪಸ್ಥಿತರಿದ್ದರು.
Vishwa Hindu Parishad and Bajrang Dal called for strict enforcement of the anti-cow slaughter law. "If anyone is caught slaughtering cows, illegally storing meat, or illegally transporting cattle then the public needs to inform Bajrang Dal representatives or call on the animal helpline number 8277100200 (24/7). They send across videos or photos as proof," he added.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm