ಬ್ರೇಕಿಂಗ್ ನ್ಯೂಸ್
09-07-21 11:54 am Mangalore Correspondent ಕರಾವಳಿ
ಮಂಗಳೂರು, ಜುಲೈ 9 : ಕೋವಿಡ್ ಸೋಂಕಿನ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗಿ ಅಬ್ಬರ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, ಶೇ.80 ರಷ್ಟು ಮಲೇರಿಯಾ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.
ರಾಜ್ಯದಲ್ಲಿ ಕಳೆದ ವರ್ಷ ಒಟ್ಟು 1,701 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 1,397 ಪ್ರಕರಣ ಪತ್ತೆಯಾಗಿದ್ದರೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ದಾಖಲೆಯ 1,306 ಪ್ರಕರಣಗಳು ಪತ್ತೆಯಾಗಿದ್ದವು. ಈ ಬಾರಿ ಕೂಡ ಮಲೇರಿಯಾ ಪ್ರಕರಣ ಹೆಚ್ಚುವ ಭೀತಿ ಎದುರಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಜೂನ್ ತಿಂಗಳಿನಿಂದ ಏರಿಕೆ ಆಗುತ್ತಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 277 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ಇದರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ 255 ಪ್ರಕರಣ ದಾಖಲಾಗಿವೆ. ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ಅಬ್ಬರ ಜೋರಾಗುತ್ತಿದ್ದು ಮೇ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 122 ಪ್ರಕರಣ ಪತ್ತೆಯಾಗಿವೆ.
2019ರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 2,593 ಮಲೇರಿಯಾ ಪ್ರಕರಣ ದಾಖಲಾಗಿದ್ದವು. ಜಿಲ್ಲೆಯಲ್ಲಿ 2,797 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಮಲೇರಿಯಾ ಹಾಗೂ ಡೆಂಗಿ ರೋಗದ ಬಗ್ಗೆ ಮತ್ತು ಸೊಳ್ಳೆಗಳ ನಿಯಂತ್ರಣದ ವಿಚಾರದಲ್ಲಿ ಜಾಗೃತಿ ಮೂಡಿಸುವ ಹೆಜ್ಜೆ ಇಟ್ಟಿದೆ.
‘ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗಿ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕ್ಷೇತ್ರ ಹಾಗೂ ಮನೆ ಭೇಟಿ, ಲಾರ್ವಾ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ವೈದ್ಯಾಧಿಕಾರಿ ನೇತೃತ್ವದಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ತಿಳಿಸಿದರು.
ದಿನದ 24 ಗಂಟೆ ಸೇವೆ ವ್ಯವಸ್ಥೆ
ಕೋವಿಡ್ ಸೋಂಕು ಒಮ್ಮೆ ಬಾಧಿಸಿ ಹೋಗಬಹುದು, ಆದರೆ ಡೆಂಗಿ, ಮಲೇರಿಯಾ ಪದೇ ಪದೇ ಬರಬಹುದು. ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು. ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಬಿಟ್ಟು ಬಿಟ್ಟು ಬರುವ ಚಳಿ ಜ್ವರ, ತಲೆ ನೋವು, ಮೈಕೈ, ನೋವು ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ದಿನದ 24 ಗಂಟೆ ಉಚಿತ ಸೇವೆ ನೀಡುತ್ತಿದೆ. ಮೊಬೈಲ್ 9448556872 ಸಂಪರ್ಕಿಸಿ ಸೇವೆ ಪಡೆಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Amid coronavirus Dakshina Kannada stands first in reporting Malaria and Dengue cases in State with 80 percent of cases being detected from Mangalore.
13-06-25 07:01 pm
HK News Desk
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
Hassan, Heart Attack, Death: ಹಾಸನ ; ಎರಡು ತಿಂಗ...
11-06-25 09:35 pm
No Cabinet Reshuffle, Karnataka: ಸದ್ಯಕ್ಕಿಲ್ಲ...
11-06-25 05:23 pm
ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಗಣತಿ ; ಪ್ರಬಲ ಸಮುದಾಯ...
10-06-25 09:24 pm
13-06-25 03:08 pm
HK News Desk
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
PM Modi, Ahmedabad, Plane Crash: ವಿಮಾನ ದುರಂತ...
13-06-25 12:25 pm
Lone Survivor, Ahmedabad Plane Crash: ಟೇಕ್ ಆ...
12-06-25 10:11 pm
Ahmedabad Plane Crash, 241 Dead, One survives...
12-06-25 08:52 pm
13-06-25 06:47 pm
Mangalore Correspondent
Indias First Special Action Force, Mangalore:...
13-06-25 03:46 pm
Special Task Force, Home Minister Parameshwar...
13-06-25 01:05 pm
Mangalore Student Death, Kuthar, Hiba Aiman:...
13-06-25 09:38 am
Mangalore, Co Pilot Clive Kunder: ಕೋ ಪೈಲಟ್ ಕ್...
12-06-25 10:26 pm
13-06-25 07:30 pm
Mangalore Correspondent
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm
Vitla Police, SI Kaushik: ಜುಗಾರಿ ಅಡ್ಡೆಗೆ ದಾಳಿ...
11-06-25 07:26 pm
ಅಡಿಕೆ ಖರೀದಿಸಿ 50ಕ್ಕೂ ಹೆಚ್ಚು ರೈತರಿಗೆ ಹಣ ಕೊಡದೆ...
11-06-25 02:03 pm