ಬ್ರೇಕಿಂಗ್ ನ್ಯೂಸ್
25-06-21 04:20 pm Udupi Correspondent ಕರಾವಳಿ
Photo credits : Oneindia Kannada
ಉಡುಪಿ, ಜೂನ್ 25: ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡು ಬೀದಿಯಲ್ಲಿ ನರಳಾಡುತ್ತಿದ್ದ ನಾಯಿ ಮರಿಗೆ ಕೊನೆಗೂ ಆಸರೆ ಸಿಕ್ಕಿದೆ. ನಾಯಿ ಮರಿ ಬದುಕಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದವರ ಮಧ್ಯೆ ಮಹಿಳೆಯೊಬ್ಬರು ತನ್ನ ಅಕ್ಕರೆಯಿಂದಲೇ ನಾಯಿ ಮರಿಯಲ್ಲಿ ನಗು ಮೂಡಿಸಿದ್ದಾರೆ.
ಮೂರು ತಿಂಗಳ ಹಿಂದೆ ಉಡುಪಿ ತಾಲೂಕಿನ ಹೊಸಂಗಡಿ ಎಂಬಲ್ಲಿ ರಸ್ತೆ ಬದಿ ನಾಯಿ ಮರಿಯೊಂದು ಯಾವುದೋ ವಾಹನ ಹರಿದು ಕಾಲು ಮುರಿತಕ್ಕೊಳಗಾಗಿ ನರಳುತ್ತಿತ್ತು. ನಾಯಿಯ ಚೀರಾಟ, ನರಳಾಟ ನಡೆದಿದ್ದರೂ, ಯಾರು ಕೂಡ ಸಹಾಯಕ್ಕೆ ಧಾವಿಸಿರಲಿಲ್ಲ.
15 ದಿನಗಳಿಂದ ನಾಯಿ ಮರಿ ರಸ್ತೆ ಬದಿಯಲ್ಲೇ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ಕಂಡ ಮಹಿಳೆಯ ಮಾತೃ ಹೃದಯ ಕರಗಿಹೋಗಿದೆ. ಸ್ಥಳೀಯ ನಿವಾಸಿ ಕೆಪಿಸಿಎಲ್ನಲ್ಲಿ ಉದ್ಯೋಗದಲ್ಲಿರುವ ಪ್ರಿಯಾ ಎಂಬವರು ನಾಯಿಯನ್ನು ಮನೆಗೆ ಕರೆ ತಂದಿದ್ದಾರೆ.
ಗಾಯಗೊಂಡು 15 ದಿನಗಳಾಗಿದ್ದರಿಂದ ಹಿಂಬದಿಯ ಎರಡೂ ಕಾಲುಗಳ ಗಾಯ ಉಲ್ಬಣಿಸಿ ನಡೆಯಲಾಗದ ಸ್ಥಿತಿಗೆ ತಲುಪಿತ್ತು. ಚಿಕಿತ್ಸೆ ನೀಡಿದ ವೈದ್ಯರು ಕೂಡ ನಾಯಿ ಬದುಕುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು.

ಆದರೆ ಪ್ರಿಯಾ ಅವರು ನಾಯಿ ಮೇಲೆ ತೋರಿದ ಪ್ರೀತಿಯೇ ನಾಯಿಯನ್ನು ಮತ್ತೆ ಬದುಕಿಸಿದೆ. ಆದರೆ ಹಿಂಬದಿಯ ಎರಡೂ ಕಾಲುಗಳು ಊಣಗೊಂಡು ನಿಷ್ಕ್ರಿಯವಾಗಿದೆ. ಆದರೂ ನಾಯಿ ಅತ್ತಿತ್ತ ಓಡಾಡಲೇಬೇಕೆಂದು ಆಲೋಚಿಸಿದ ಪ್ರಿಯಾ, ಅದಕ್ಕಾಗಿ ಹೊಸ ಪ್ರಯೋಗ ಮಾಡಿದ್ದಾರೆ.
ಆನ್ಲೈನ್ ಮೂಲಕ ಎರಡು ಪುಟ್ಟ ಚಕ್ರಗಳನ್ನು ತರಿಸಿಕೊಂಡು ನಾಯಿಯ ಹಿಂಗಾಲಿನ ಬದಲಿಗೆ ಸಾಧನ ಜೋಡಿದ್ದಾರೆ. ಪಿವಿಸಿ ಪೈಪ್ಗೆ ಚಕ್ರವನ್ನು ಜೋಡಿಸಿ ಎರಡು ಕಾಲುಗಳ ನಡುವೆ ಚಕ್ರಗಳು ಚಲಿಸುವಂತೆ ಮಾಡಿ ಯಶಸ್ವಿಯಾಗಿದ್ದಾರೆ.
ನೆಲದಲ್ಲಿ ತೆವಳಿಕೊಂಡೇ ಸಾಗುತ್ತಿದ್ದ ನಾಯಿ, ಚಕ್ರ ಬಳಸಿಕೊಂಡು ಅತ್ತಿತ್ತ ತೆರಳಲು ಅಭ್ಯಾಸವಾಗುವಂತೆ ತರಬೇತಿ ನೀಡಿದ್ದಾರೆ. ಕೃತಕ ಕಾಲು ಜೋಡಣೆಯ ನಂತರ ಪುಟ್ಟ ನಾಯಿಯಲ್ಲಿ ಲವಲವಿಕೆ ಬಂದಿದೆ. ತುಂಬಾ ಖುಷಿಯಿಂದ ಅತ್ತಿಂದಿತ್ತ ಓಡಾಡಿದೆ. ಬದುಕಲು ಸಾಧ್ಯವೇ ಇಲ್ಲವೆಂದು ಭಾವಿಸಿದ್ದ ನಾಯಿ, ತಾಯಿ ಪ್ರೀತಿಯಿಂದಲೇ ಬದುಕಿ ಗೆಲುವಿನ ನಗೆ ಬೀರಿದೆ.
After a puppy met with a Roadside accident Priya from Udupi who is soft-hearted, saw that the puppy in question, which somehow recovered from the accident, could not walk. She prepared a wheel cart by creating her own technology, tied it to the cart with the help of a belt, and enabled it to move around.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm