ಬ್ರೇಕಿಂಗ್ ನ್ಯೂಸ್
03-06-21 04:19 pm Mangalore Correspondent ಕರಾವಳಿ
ಮಂಗಳೂರು, ಜೂನ್ 3: ಬಾಲಿವುಡ್ ನಟ ಸೋನು ಸೂದ್ ತಮ್ಮ ಚಾರಿಟಿಯಿಂದ ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ. ಕಳೆದ ಬಾರಿ ವಲಸೆ ಕಾರ್ಮಿಕರು ನಡೆದುಕೊಂಡೇ ಉತ್ತರ ಭಾರತಕ್ಕೆ ಹೊರಟು ನಿಂತಾಗ, ದಾರಿಮಧ್ಯೆ ಊಟ, ವಸತಿಯ ವ್ಯವಸ್ಥೆ ಮಾಡಿ ಗಮನಸೆಳೆದಿದ್ದರು. ಈ ಬಾರಿ ಸೋಂಕಿತರಿಗೆ ಆಮ್ಲಜನಕದ ಅಗತ್ಯ ಕಂಡುಬಂದಿದ್ದರಿಂದ ಸೋನು ಸೂದ್ ಮಹಾರಾಷ್ಟ್ರ, ಕರ್ನಾಟಕ ಸೇರಿ ದೇಶದ ವಿವಿಧ ಕಡೆ ಆಮ್ಲಜನಕದ ಪೂರೈಕೆಗೆ ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ರೈಲ್ವೇ ಪೊಲೀಸರ ನೆರವಿನಲ್ಲಿ ಸೋನು ಸೂದ್ ಫೌಂಡೇಶನ್ನಿಂದ ಆಮ್ಲಜನಕದ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ರೈಲ್ವೇ ಪೊಲೀಸ್ ಎಡಿಜಿಪಿ ಭಾಸ್ಕರ ರಾವ್ ಸಹಕಾರದಲ್ಲಿ ರಾಜ್ಯದ 18 ಕಡೆ ಆಮ್ಲಜನಕದ ವಿತರಣೆಗೆ ಸ್ಟೇಶನ್ ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಶನ್ನಲ್ಲಿರುವ ರೈಲ್ವೇ ಪೊಲೀಸ್ ಠಾಣೆಗೆ ಇಂದು ಸೋನು ಸೂದ್ ಫೌಂಡೇಶನ್ ವತಿಯಿಂದ 20 ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಗಿದೆ. ಏಳು ಸಾವಿರ ಲೀಟರ್ ಸಾಮರ್ಥ್ಯದ ಹತ್ತು ಸಿಲಿಂಡರ್ ಮತ್ತು ಒಂದು ಸಾವಿರ ಲೀಟರಿನ ಹತ್ತು ಸಿಲಿಂಡರ್ ಒಟ್ಟು 80 ಸಾವಿರ ಲೀಟರ್ ಆಮ್ಲಜನಕವನ್ನು ಸಂಗ್ರಹ ಮಾಡಲಾಗಿದೆ.
ಕರ್ನಾಟಕದಲ್ಲಿ ಆಕ್ಸಿಜನ್ ಸಿಲಿಂಡರ್ ವಿತರಣೆಯ ಹೊಣೆಯನ್ನು ಬೆಂಗಳೂರಿನ ಸ್ವಾಗ್ ಬೈಕರ್ಸ್(Swag Bykers) ಸಂಸ್ಥೆ ಹೊತ್ತುಕೊಂಡಿದೆ. ಸೋನು ಸೂದ್ ಫೌಂಡೇಶನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸ್ವಾಗ್ ಸಂಸ್ಥೆಯವರು, ಆಯಾ ಕೇಂದ್ರಗಳಿಂದ ತುರ್ತು ಪರಿಸ್ಥಿತಿಯಲ್ಲಿ ತಮ್ಮದೇ ಸಿಬಂದಿ ಮೂಲಕ ಸಿಲಿಂಡರ್ ಪೂರೈಕೆ ಮಾಡಲಿದ್ದಾರೆ. ವಿಶೇಷ ಅಂದ್ರೆ, ಸೋನು ಸೂದ್ ಫೌಂಡೇಶನ್ ವತಿಯಿಂದ ಕೊಡಮಾಡುವ ಆಮ್ಲಜನಕವನ್ನು ನೇರವಾಗಿ ಜಾಲತಾಣದಲ್ಲಿಯೇ ಪಡೆಯಬಹುದು. ಟ್ವಿಟರ್, ಫೇಸ್ಬುಕ್ ಅಥವಾ ಫೌಂಡೇಶನ್ನಿನ ಸಹಾಯವಾಣಿ ಸಂಖ್ಯೆಗೆ ಫೋನ್ ಮಾಡಿದರೆ, ತುರ್ತಾಗಿ ಸ್ಪಂದಿಸಿ ಆಮ್ಲಜನಕದ ಪೂರೈಕೆ ಮಾಡಲಾಗುವುದು ಎಂದು ಸಂಸ್ಥೆಯ ಸಿಬಂದಿ ಹೇಳಿಕೊಂಡಿದ್ದಾರೆ.
ಮಂಗಳೂರಿನ ಆಮ್ಲಜನಕ ಸ್ಟೇಶನ್ನಿಂದ 80 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕುಗ್ರಾಮಕ್ಕೆ ಬೇಕಾದ್ರೂ ಆಮ್ಲಜನಕ ಪೂರೈಕೆ ಮಾಡುತ್ತೇವೆ. ಆಮ್ಲಜನಕದ ಅಗತ್ಯ ಇರುವ ಬಗ್ಗೆ ಫೋನ್ ಮಾಡಿದ ಕೂಡಲೇ ನಮ್ಮ ತಜ್ಞರ ತಂಡ, ಆ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದು ಆಮ್ಲಜನಕದ ಅಗತ್ಯ ಇದೆಯೇ ಎನ್ನುವ ಬಗ್ಗೆ ದೃಢಪಡಿಸುತ್ತದೆ. ಅಲ್ಲದೆ, ಎಷ್ಟು ಕೇಜಿ ಆಮ್ಲಜನಕ ಬೇಕು ಎನ್ನುವ ಬಗ್ಗೆಯೂ ಸ್ಟೇಶನ್ನಿಗೆ ಮಾಹಿತಿ ನೀಡುತ್ತದೆ. ಆಕ್ಸಿಜನ್ ಸಿಲಿಂಡರನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದರ ಬಗ್ಗೆ ಪೊಲೀಸರಿಗೆ ಮತ್ತು ಸಿಬಂದಿಗೆ ತರಬೇತಿ ನೀಡಿದ್ದೇವೆ ಎಂದು ಸ್ವಾಗ್ ಸಂಸ್ಥೆಯ ಅಮಿತ್ ಪುರೋಹಿತ್ ಹೇಳಿದ್ದಾರೆ.
ಸ್ವಾಗ್ ಸಂಸ್ಥೆಯ ಪಾಲುದಾರರಾದ ಅಮಿತ್ ಪುರೋಹಿತ್ ಮತ್ತು ಅಜಯ್ ಪ್ರತಾಪ್ ಸಿಂಗ್ ಮಂಗಳೂರಿನ ಸೆಂಟ್ರಲ್ ರೈಲ್ವೇ ಸ್ಟೇಶನ್ನಿಗೆ ಆಗಮಿಸಿ ಆಮ್ಲಜನಕದ ಪೂರೈಕೆ ಮತ್ತು ವಿತರಣಾ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಪೊಲೀಸರಿಗೂ ಪ್ರಾತ್ಯಕ್ಷಿಕೆ ನೀಡಿದ್ದು, ಆಮ್ಲಜನಕ ಅಗತ್ಯ ಕಂಡುಬಂದರೇ ವ್ಯಕ್ತಿಯೇ ಸಿಲಿಂಡರಿನಿಂದ ನೇರವಾಗಿ ಹೇಗೆ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದರು. ಆಮ್ಲಜನಕದ ಅಗತ್ಯ ಇದ್ದವರು ಕರ್ನಾಟಕದಲ್ಲಿ ಸೋನು ಫೌಂಡೇಶನ್ನಿನ ಸಹಾಯವಾಣಿ ಸಂಖ್ಯೆ (7069999916) ಕರೆ ಮಾಡಬಹುದು.
ಇನ್ನು ಹತ್ತು ದಿನದಲ್ಲಿ ಮತ್ತಷ್ಟು ಆಕ್ಸಿಜನ್ ಸಿಲಿಂಡರ್ ಮುಂಬೈನಿಂದ ಮಂಗಳೂರಿಗೆ ಬರಲಿದ್ದು ಸ್ವಾಗ್ ಸಂಸ್ಥೆಯಿಂದ ಬೈಕಿನಿಂದಲೇ ವಿವಿಧ ಕಡೆಗಳಿಗೆ ಆಕ್ಸಿಜನ್ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಅಮಿತ್ ಪುರೋಹಿತ್ ಹೇಳಿದರು.
Real Hero Sonu Sood Provides free 20 Oxygen Cylinders to Mangalore in partnership with Swag Bikes. 7000 litres of 10 cylinders and 1000 litres of 10 Cylinders are been sent to Railway Police station. Anyone in need of oxygen can dail to 7069999916.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm