ಬ್ರೇಕಿಂಗ್ ನ್ಯೂಸ್
28-05-21 09:04 pm Mangaluru Correspondent ಕರಾವಳಿ
ಮಂಗಳೂರು, ಮೇ 28: ಮಂಗಳೂರು ನಗರ ಪೊಲೀಸರು ಆರಂಭಿಸಿರುವ ಕೋವಿಡ್ ಸಮನ್ವಯ ಹೆಲ್ಪ್ ಲೈನ್ ಮೂಲಕ 80 ಮಂಗಳಮುಖಿಯರಿಗೆ ಕೋವಿಡ್ ದಿನಸಿ ಕಿಟ್ ವಿತರಿಸಲಾಗಿದೆ. ರಥಬೀದಿಯ ಉದ್ಯಮಿ ವಿಜಯೇಂದ್ರ ಭಟ್ ಕೊಡಮಾಡಿರುವ ಕಿಟ್ ಗಳನ್ನು ಇಂದು ಕಮಿಷನರ್ ಕಚೇರಿಯಲ್ಲಿ ಮಂಗಳಮುಖಿಯರಿಗೆ ವಿತರಣೆ ಮಾಡಲಾಯಿತು.
ತಲಾ ಹತ್ತು ಕೇಜಿ ದಿನಸಿ ಕಿಟ್ ಪ್ರಾಯೋಜಿಸಿದ ವಿಜಯೇಂದ್ರ ಭಟ್ ಅವರನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ಅಭಿನಂದಿಸಿದರು. ಮೇ 21ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಕೋವಿಡ್ ಸಮನ್ವಯ ಎಂಬ ಹೊಸ ಪರಿಕಲ್ಪನೆಯಡಿ ಸಹಾಯವಾಣಿ ಆರಂಭಿಸಲಾಗಿತ್ತು. ಕೋವಿಡ್ ಸಂಕಷ್ಟದಿಂದ ಕಷ್ಟಕ್ಕೆ ಒಳಗಾದವರು, ವಿದೇಶದಲ್ಲಿದ್ದು ಊರಲ್ಲಿ ಕುಟುಂಬಸ್ಥರಿಗೆ ತೊಂದರೆ ಎದುರಾದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ಪಂದಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದರು.
ಅದರಂತೆ, ವಿವಿಧ ಕಡೆಗಳಿಂದ ಕರೆಗಳು ಬಂದಿದ್ದು ಈವರೆಗೆ 24 ಕರೆಗಳಿಗೆ ಸ್ಪಂದಿಸಲಾಗಿದೆ. ಮಂಗಳಮುಖಿಯರ ಸಂಘದ ರಾಜ್ಯ ಘಟಕದಿಂದ ಕರೆ ಮಾಡಿ, ಮಂಗಳೂರಿನಲ್ಲಿರುವ ಮಂಗಳಮುಖಿ ಸದಸ್ಯರು ಕಷ್ಟದಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು. ಹೀಗಾಗಿ ಉದ್ಯಮಿಗಳ ಮೂಲಕ ಆಹಾರದ ಕಿಟ್ ವಿತರಿಸುವ ಕೆಲಸ ಮಾಡಲಾಗಿದೆ. ವಿಜಯೇಂದ್ರ ಭಟ್ ದಿನಸಿ ಕಿಟ್ ಪ್ರಾಯೋಜಿಸಿದ್ದಾರೆ ಎಂದು ಕಮಿಷನರ್ ಇದೇ ವೇಳೆ ತಿಳಿಸಿದರು.
ಲಾಕ್ಡೌನ್ ಕಾರಣದಿಂದ ಬಹಳಷ್ಟು ಕಷ್ಟದಲ್ಲಿದ್ದೇವೆ. ರಾಜ್ಯ ಸರಕಾರದಿಂದಲೂ ನಮಗೆ ಯಾವುದೇ ಪರಿಹಾರ, ಸೌಲಭ್ಯ ದೊರಕಿಲ್ಲ. ನಮ್ಮ ಕಷ್ಟದ ಬಗ್ಗೆ ತಿಳಿದು ಸ್ಪಂದಿಸಿದ ಮಂಗಳೂರಿನ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಂಗಳಮುಖಿ ಹೇಮಾ ತಿಳಿಸಿದರು.
ಈ ಸಂದರ್ಭ ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ ಗಾಂವ್ಕರ್, ಎಸಿಪಿಗಳಾದ ಮಹೇಶ್ ಕುಮಾರ್, ನಟರಾಜ್, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಉಪಸ್ಥಿತರಿದ್ದರು.
Mangaluru city police commissioner N Shashi Kumar along with DCP (Law and Order) Hariram Shankar, DCP (Crime and Traffic) Vinay A Gaonkar distributed grocery kits to over 80 transgenders in the city on Friday, May 28. The grocery kits were distributed on the premises of the police commissioner's office.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm