ಬ್ರೇಕಿಂಗ್ ನ್ಯೂಸ್
11-05-21 05:20 pm Udupi Correspondent ಕರಾವಳಿ
ಕುಂದಾಪುರ, ಮೇ 11: ಲಾಕ್ಡೌನ್ ಇರುವುದರಿಂದ ಗ್ರೋಸರಿ ತರುವುದಕ್ಕೂ ವಾಹನ ಬಳಸುವಂತಿಲ್ಲ ಎಂದು ರಾಜ್ಯ ಸರಕಾರ ನಿಯಮ ಹೇರಿರುವುದರಿಂದ ಹೆಚ್ಚಿನ ಕಡೆ ಪೊಲೀಸರು ಲಾಠಿ ಬೀಸಿದ್ದು ಪರ- ವಿರೋಧ ಟೀಕೆಗೂ ಕಾರಣವಾಗಿದೆ. ಇದೇ ವೇಳೆ, ಇಲ್ಲಿನ ಕುಂಭಾಸಿಯ ಯುವಕನೊಬ್ಬ ಪೊಲೀಸರ ಲಾಠಿರುಚಿಯನ್ನು ಅಣಕಿಸುವುದಕ್ಕಾಗಿಯೇ ಹೊಸ ತಂತ್ರಕ್ಕೆ ಮೊರೆಹೋಗಿರುವ ಫೋಟೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬವರು ಸೈಕಲ್ ನಲ್ಲಿ ಪೇಟೆಗೆ ಹೊರಟಿದ್ದು ತಲೆಗೆ ಹೆಲ್ಮೆಟ್ ಮತ್ತು ಬೆನ್ನಿಗೆ ತಗಡು ಶೀಟನ್ನು ಕಟ್ಟಿಕೊಂಡಿದ್ದಾರೆ. ಬೆನ್ನಿಗೆ ಪೆಟ್ಟು ಬಿದ್ದರೂ ತಗಡು ಶೀಟ್ ಇದೆಯೆಂಬ ರೀತಿ ಬಿಂಬಿಸಿ, ಸೈಕಲಿನಲ್ಲಿ ಹೊರಟಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಲಾಠಿಗೆ ಪ್ರತಿತಂತ್ರ ಎನ್ನುವ ರೀತಿ ಬಿಂಬಿತವಾಗುತ್ತಿದೆ.

ಬೆಳಗ್ಗೆ ಹತ್ತು ಗಂಟೆ ವರೆಗೆ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ನೀಡಿದ್ದು ಆದರೆ ನಡೆದುಕೊಂಡೇ ಮನೆ ಪರಿಸರದ ಅಂಗಡಿಗಳಿಂದ ಖರೀದಿ ನಡೆಸಬೇಕು. ಯಾವುದೇ ಕಾರಣಕ್ಕೂ ವಾಹನಗಳಲ್ಲಿ ದೂರಕ್ಕೆ ಪ್ರಯಾಣ ಮಾಡಬಾರದು. ಅಗತ್ಯ ವಸ್ತು ಖರೀದಿಗೆಂದು ಮಾರುಕಟ್ಟೆ ಇನ್ನಿತರ ಪ್ರದೇಶಕ್ಕೆ ಹೋಗಬಾರದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ಈ ನಿಯಮವನ್ನು ಬಹುತೇಕ ಕಡೆ ಜನರು ಮುರಿಯುತ್ತಿದ್ದಾರೆ. ಪೊಲೀಸರು ಅಡ್ಡಗಟ್ಟಿದರೂ ಒಳದಾರಿಗಳಿಂದ ಅಂಗಡಿಗಳಿಗೆ ತೆರಳುತ್ತಿದ್ದಾರೆ. ಈ ವೇಳೆ, ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವ ಘಟನೆ ನಡೆದಿದೆ.
ಪೊಲೀಸರ ಲಾಠಿ ಬೀಸುವ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಯಸ್ಸಾದವರು ತಮ್ಮ ಸ್ಕೂಟರ್ ಬಳಸದೆ ಗ್ರೋಸರಿ ತರುವುದು ಹೇಗೆಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಕೆಲವು ಕಡೆ ವಯಸ್ಸಾದವರು, ಅಸಹಾಯಕರಿಗೆ ಮಾತ್ರ ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಹೀಗಿದ್ದರೂ, ಜನರು ಅಂಗಡಿ ಮುಂದೆ ಸೇರುವುದು, ಮುಗಿ ಬೀಳುವುದು ಕಾಮನ್ ಆಗಿದೆ. ಇಂಥ ಸಂದರ್ಭದಲ್ಲೇ ಯುವಕನೊಬ್ಬ ಬೆನ್ನಿಗೆ ಕಬ್ಬಿಣದ ಶೀಟ್ ಕಟ್ಟಿಕೊಂಡು ಸೈಕಲಿನಲ್ಲಿ ಪೇಟೆಗೆ ಹೊರಟು ಸುದ್ದಿಯಾಗಿದ್ದಾನೆ.
27-03-26 04:49 pm
HK News Staffer
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ...
26-03-26 09:21 pm
27-03-26 04:07 pm
HK News Staffer
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
ಮಂಗಳೂರಿಗೆ ಮತ್ತೆರಡು ಬೃಹತ್ ತೈಲ ಟ್ಯಾಂಕರ್ ಹಡಗು ;...
26-03-26 09:31 am
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
27-03-26 10:02 pm
HK News Staffer
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅ...
27-03-26 09:32 pm
ಪುಟ್ಟೇನಹಳ್ಳಿ ಠಾಣೆ ಇನ್ಸ್ಪೆಕ್ಟರ್ ತಿಂಗಳ ವಸೂಲಿ 2...
27-03-26 08:37 pm
Rowdy Sheeter Arif Hussain Murder, Mangalore:...
27-03-26 06:51 am