ಬ್ರೇಕಿಂಗ್ ನ್ಯೂಸ್
19-06-26 07:48 pm HK News Staffer ಕರಾವಳಿ
ಮಂಗಳೂರು, ಜೂನ್ 19: ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು 8-9 ಗಂಟೆಗಳಿಂದ ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ ಮಹತ್ವದ ತಿರುವು ಸಿಕ್ಕಿದೆ. ರಸ್ತೆ ಮತ್ತು ರೈಲು ಮಾರ್ಗವನ್ನು ಒಂದೇ ಸುರಂಗದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ತಾಂತ್ರಿಕ ಅಡೆತಡೆ ಎದುರಾಗಿದ್ದು, ರೈಲ್ವೆ ಇಲಾಖೆ ಜಂಟಿ ಯೋಜನೆಯಿಂದ ಹಿಂದೆ ಸರಿಯಲು ಮುಂದಾಗಿದೆ.
ರಸ್ತೆ-ರೈಲು ಜಂಟಿ ಯೋಜನೆಗೆ ತಾಂತ್ರಿಕ ಅಡ್ಡಿ
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಅಪಾಯಕಾರಿ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸುವ ಯೋಜನೆಗೆ ಭಾರೀ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಇತ್ತೀಚಿನ ಜಂಟಿ ಸರ್ವೆ ವೇಳೆ ಭೌಗೋಳಿಕ ಏರಿಳಿತಗಳು ಯೋಜನೆಗೆ ಸವಾಲಾಗಿ ಪರಿಣಮಿಸಿವೆ. ಹೆದ್ದಾರಿ ಇಲಾಖೆಯ ನಿಯಮಗಳ ಪ್ರಕಾರ ಸುರಂಗ ರಸ್ತೆಗೆ 1:50 ಗ್ರೇಡಿಯಂಟ್ ಸಾಕಾಗುತ್ತದೆ. ಇದರ ಆಧಾರದ ಮೇಲೆ ಸುಮಾರು 38 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಲಿದೆ.
ಆದರೆ ರೈಲ್ವೆ ಇಲಾಖೆಯ ಸುರಕ್ಷತಾ ಮಾನದಂಡಗಳ ಪ್ರಕಾರ 1:150 ಗ್ರೇಡಿಯಂಟ್ ಕಡ್ಡಾಯವಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ರೈಲು ಹಳಿ ನಿರ್ಮಿಸಲು ಸುಮಾರು 88 ಕಿಲೋಮೀಟರ್ ಉದ್ದದ ಸುರಂಗ ಅಗತ್ಯವಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಅಂದಾಜಿಸಿದ್ದಾರೆ. ಹೀಗಾಗಿ 38 ಕಿಲೋಮೀಟರ್ ರಸ್ತೆ ಸುರಂಗ ಮತ್ತು 88 ಕಿಲೋಮೀಟರ್ ರೈಲು ಸುರಂಗವನ್ನು ಒಂದೇ ಪ್ರಕಾರದಲ್ಲಿ ಜೋಡಿಸುವುದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಕಷ್ಟಸಾಧ್ಯ ಎಂಬ ಅಭಿಪ್ರಾಯಕ್ಕೆ ರೈಲ್ವೆ ಇಲಾಖೆ ಬಂದಿದೆ.
ಇದರಿಂದಾಗಿ ರಸ್ತೆ ಮತ್ತು ರೈಲು ಯೋಜನೆಗಳನ್ನು ಪ್ರತ್ಯೇಕ ಅನುಷ್ಠಾನಗೊಳಿಸಲು ಎರಡೂ ಇಲಾಖೆಗಳು ಚಿಂತನೆ ನಡೆಸುತ್ತಿವೆ.
ಹೆದ್ದಾರಿ ಇಲಾಖೆಗೆ ದೊಡ್ಡ ತಾಂತ್ರಿಕ ಅಡೆತಡೆಗಳಿಲ್ಲದ ಕಾರಣ, ರಸ್ತೆ ಸುರಂಗ ಯೋಜನೆಯನ್ನು ಶೀಘ್ರವಾಗಿ ಅನುಷ್ಟಾನಕ್ಕೆ ತರುವ ಸಿದ್ಧತೆ ನಡೆದಿದೆ. ಏರಿಳಿತದ ಅಂತಿಮ ನಕ್ಷೆ ಸಿದ್ಧವಾದ ಬಳಿಕ ವಿವರವಾದ ಯೋಜನಾ ವರದಿ ತಯಾರಿಸಿ, ಟೆಂಡರ್ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆಮೂಲಕ ಬೆಂಗಳೂರು- ಮಂಗಳೂರು ನಡುವಿನ ರಸ್ತೆ ಪ್ರಯಾಣವನ್ನು ಗಣನೀಯ ಕಡಿಮೆ ಮಾಡುವ ಕನಸು ಶೀಘ್ರ ಸಾಕಾರವಾಗುವ ನಿರೀಕ್ಷೆ ಮೂಡಿದೆ.
ರೈಲು ಯೋಜನೆಗೆ ವಿಳಂಬ ಸಾಧ್ಯತೆ
ರೈಲ್ವೆ ಇಲಾಖೆ ಸುರಕ್ಷತೆ ಹಾಗೂ ತಾಂತ್ರಿಕ ಮಾನದಂಡಗಳ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದರಿಂದ, ಕರಾವಳಿ ಭಾಗದ ರೈಲು ಸುರಂಗ ಯೋಜನೆ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬೆಳವಣಿಗೆ ಬೆನ್ನಲ್ಲೇ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂಬರುವ ಸಂಸತ್ ಅಧಿವೇಶನದ ವೇಳೆ ರೈಲ್ವೆ ಹಾಗೂ ರಸ್ತೆ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿ ಯೋಜನೆಯ ಕಗ್ಗಂಟು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
06-08-26 03:49 pm
HK News Staffer
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ, ಛಲವಾದಿ...
04-08-26 09:12 pm
ಸಿದ್ದರಾಮಯ್ಯ ಆಪ್ತ ಎಂಬ ಕಾರಣಕ್ಕೆ ನನಗೆ ಅನ್ಯಾಯ ಆಗಿ...
04-08-26 09:10 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
06-08-26 11:03 pm
Mangaluru Staffer
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
ಹೆದ್ದಾರಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಗಿಳ...
06-08-26 08:09 pm
ಸುರತ್ಕಲ್ ಎನ್ಐಟಿಕೆ ಕಾಲೇಜು ಹಾಸ್ಟೆಲ್ನಲ್ಲಿ ಸ್ವಯ...
05-08-26 08:08 pm
06-08-26 09:31 pm
HK News Staffer
ಲವ್ - ಸೆಕ್ಸ್ ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸಿ...
06-08-26 09:31 pm
ಬೆಂಗಳೂರು ; ಒಂದು ತಿಂಗಳ ಹಿಂದೆ ನೇಪಾಳದಿಂದ ಕೆಲಸಕ್ಕ...
06-08-26 06:13 pm
7 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ...
06-08-26 11:48 am
Surathkal Student Death: ಸುರತ್ಕಲ್ ; ವಾಲಿಬಾಲ್...
06-08-26 11:47 am