ಬ್ರೇಕಿಂಗ್ ನ್ಯೂಸ್
04-05-21 05:13 pm Mangalore Correspondent ಕರಾವಳಿ
ಮಂಗಳೂರು, ಮೇ 4 : ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳಿಗೆ ಅಂತ್ಯಸಂಸ್ಕಾರ ನಡೆಸಲು ಸ್ವತಃ ರಕ್ತಸಂಬಂಧಿಗಳೇ ಹಿಂಜರಿಯುತ್ತಿದ್ದರೆ, ಇಲ್ಲೊಬ್ಬರು ಕಾರ್ಪೊರೇಟರ್ ಜನಸೇವೆಯೇ ಜನಾರ್ದನ ಸೇವೆ ಎನ್ನುತ್ತಾ ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ವಾರಸುದಾರರಿಲ್ಲದ, ಸಂಬಂಧಿಕರು ತ್ಯಜಿಸಿದ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್ ವಾರ್ಡಿನ ಕಾರ್ಪೊರೇಟರ್ ಗಣೇಶ್ ಕುಲಾಲ್, ಎರಡು ವಾರಗಳಿಂದ ತಮ್ಮ ವಿಭಿನ್ನ ಕಾರ್ಯದಿಂದ ಗಮನ ಸೆಳೆದಿದ್ದಾರೆ. ಕಳೆದ ಎರಡು ವಾರಗಳಲ್ಲಿ ವಾರಸುದಾರರಿಲ್ಲದ 12 ಮೃತದೇಹಗಳಿಗೆ ಸ್ವತಃ ಸಂಸ್ಕಾರ ನೆರವೇರಿಸಿದ್ದಾರೆ.

12 ಶವಗಳ ಪೈಕಿ 9 ಕೊರೊನಾ ಸೋಂಕಿನಿಂದ ಮೃತಪಟ್ಟದ್ದಾಗಿದ್ದು ಉಳಿದ ಮೂರು ಮಂದಿ ಇತರೇ ಕಾಯಿಲೆಯಿಂದ ಮೃತಪಟ್ಟವರು. ಇದರಲ್ಲಿ ಕೇರಳ ಹಾಗೂ ಮಡಿಕೇರಿ ಮೂಲದ ವಾರೀಸುದಾರರಿಲ್ಲದ ಶವಗಳೂ ಇದ್ದವು. ಕುಟುಂಬಸ್ಥರು ನಿರಾಕರಿಸಿದ ಎರಡು ಮೃತದೇಹಗಳಿಗೆ ಗಣೇಶ ಕುಲಾಲ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ವಿಶೇಷ ಅಂದ್ರೆ ಒಂಬತ್ತು ಶವಗಳು ಮಂಗಳೂರು ತಾಲೂಕಿನದ್ದೇ ಆಗಿದ್ದು ಸಂಬಂಧಿಕರಿದ್ದರೂ ಅಂತ್ಯಕ್ರಿಯೆ ಸಾಧ್ಯವಾಗದೆ ಗಣೇಶ ಕುಲಾಲರೇ ಸ್ವತಃ ಖರ್ಚಿನಲ್ಲಿ ಸಂಸ್ಕಾರ ನೆರವೇರಿಸಿದ್ದಾರೆ. ಐವರು ಮಹಿಳೆಯರಾಗಿದ್ದು, ಏಳು ಮಂದಿ ಪುರುಷರು. ಎಲ್ಲ ಶವಗಳನ್ನೂ ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ವಿಧಿವತ್ತಾಗಿ ಭಸ್ಮ ಮಾಡಿದ್ದಾರೆ.

ಗಣೇಶ ಕುಲಾಲ್ ಸಾಮಾಜಿಕವಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಇದ್ದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಜೊತೆಗೆ ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಉಚಿತ ವ್ಯವಸ್ಥೆಯನ್ನೂ ನೆರವೇರಿಸಿದ್ದಾರೆ. ಕೊರೊನಾ ಸೋಂಕು ಸಮಾಜದಲ್ಲಿ ಭೀತಿ ಮೂಡಿಸಿರುವಾಗ, ಆಸ್ಪತ್ರೆಯಲ್ಲಿ ಶವಗಳನ್ನು ಬಿಟ್ಟು ಸ್ವಂತ ಸಂಬಂಧಿಗಳೇ ದೂರ ಹೋಗುತ್ತಿರುವಾಗ ಒಬ್ಬ ಜನಪ್ರತಿನಿಧಿಯಾಗಿ ಗಣೇಶ್ ಕುಲಾಲ್ ಉತ್ತಮ ಕಾರ್ಯ ಮಾಡುತ್ತಿದ್ದು ತಮ್ಮ ಕೆಲಸದಿಂದಲೇ ಗಮನ ಸೆಳೆದಿದ್ದಾರೆ.
Mangalore MCC Derebail Corporater Ganesh Kulal is giving dignified burial to unclaimed Covid-19 victims in the city. The Corporater has gained huge appreciation for his humanitarian work.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 12:35 pm
HK News Staffer
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm