ಬ್ರೇಕಿಂಗ್ ನ್ಯೂಸ್
23-04-21 07:02 pm Mangaluru correspondent ಕರಾವಳಿ
ಕೊಣಾಜೆ, ಎ.23: ಕೊರೊನಾ ಸೋಂಕಿನ ಹಿನ್ನೆಲೆ ರಾಜ್ಯದೆಲ್ಲೆಡೆ ಕರ್ಫ್ಯೂ, ಅಘೋಷಿತ ಬಂದ್ ವಾತಾವರಣ ನೆಲೆಸಿದ್ದರೆ ಕೊಣಾಜೆ ಠಾಣೆ ಸಮೀಪದ ಪರಂಡೆ ಎಂಬಲ್ಲಿ ಅಕ್ರಮ ಕೋಳಿ ಅಂಕ ನಡೆಸಲಾಗುತ್ತಿತ್ತು. ಮಾಹಿತಿ ಪಡೆದ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಕೆಲವು ಪೊಲೀಸರ ಹಿಂಬಾಗಿಲ ಸಹಕಾರದಿಂದ ಅಕ್ರಮ ಕೋಳಿ ಅಂಕಗಳು ನಡೆಯುವುದು ಮಾಮೂಲಿ ಆಗಿದೆ. ಆದರೆ ಈಗ ಕೊರೊನಾ ಭೀತಿಯಲ್ಲಿ ಅಧಿಕಾರಿಗಳು, ಪೊಲೀಸರೆಲ್ಲ ಸೇರಿ ಊರಿನೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದರೆ, ಇದರ ಗೊಡವೆಯೇ ಇಲ್ಲ ಎಂಬಂತೆ ಕೊಣಾಜೆ ಬಳಿ ಭಾರೀ ಕೋಳಿ ಅಂಕ ಏರ್ಪಡಿಸಲಾಗಿತ್ತು. ಮಧ್ಯಾಹ್ನದ ಬಳಿಕ ನೂರಾರು ಜೂಜು ಪ್ರಿಯರನ್ನು ಒಟ್ಟು ಸೇರಿಸಿ ಅಕ್ರಮ ಕೋಳಿ ಅಂಕ ನಡೆಸಲಾಗುತ್ತಿತ್ತು.

ಕೊಣಾಜೆ ಪೊಲೀಸ್ ಠಾಣೆಯಿಂದ 3 ಕಿಮೀ ದೂರದ ಪರಂಡೆ ಎಂಬಲ್ಲಿ ಸ್ಥಳೀಯ ಕುಟುಂಬವೊಂದಕ್ಕೆ ಸಂಬಂಧಿಸಿದ ವಾರ್ಷಿಕ ಕೋಲ ನಡೆದಿದ್ದು ಆ ಪ್ರದೇಶದಲ್ಲೇ ಕೊರೊನಾ ಕಟ್ಟುನಿಟ್ಟಿನ ಆದೇಶಗಳನ್ನು ಧಿಕ್ಕರಿಸಿ ಕೋಳಿ ಅಂಕ ನಡೆಸಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರೋರ್ವರು ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದು ಅಕ್ರಮ ಕೋಳಿ ಅಂಕದೆಡೆಗೆ ರಹಸ್ಯ ಕ್ಯಾಮೆರಾ ಚಲಾಯಿಸಲು ನಮ್ಮ ಪ್ರತಿನಿಧಿ ತೆರಳಿದಾಗ ಅದಾಗಲೇ ಅಲ್ಲಿ ಕೊಣಾಜೆ ಪೊಲೀಸರ ಎಂಟ್ರಿ ಆಗಿ ಜೂಜುಕೋರರೆಲ್ಲ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

ಸ್ಥಳೀಯರು ಅಕ್ರಮ ಕೋಳಿ ಅಂಕದ ಬಗ್ಗೆ ರಹಸ್ಯವಾಗಿ ಪೊಲೀಸರಿಗೆ ದೂರಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಕೊಣಾಜೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಅಂಕವನ್ನು ನಿಲ್ಲಿಸಿದ್ದಾರೆ. ಜೂಜಿನಲ್ಲಿ ನಿರತರಾಗಿದ್ದ 7 ಮಂದಿ ಮತ್ತು ಅಂಕದ ಕೋಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
The Konaje Police raid on Cockfight event and take seven persons into Custody. The public alleged that amid covid tough guidelines the event was organised without anyone's fear.
10-11-25 12:22 pm
Bangalore Correspondent
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm