ಬ್ರೇಕಿಂಗ್ ನ್ಯೂಸ್
22-04-21 11:44 am Mangalore Correspondent ಕರಾವಳಿ
ಮಂಗಳೂರು, ಎ.22: ಚಾಲಕನ ಬೇಜವಾಬ್ದಾರಿಯಿಂದ ಕಸ ವಿಲೇವಾರಿ ಮಾಡುವ ಟ್ರಕ್ ಇಳಿಜಾರಿನಲ್ಲಿ ನೇರವಾಗಿ ನುಗ್ಗಿ ಬಂದು ನಾಲ್ಕಾರು ವಾಹನಗಳಿಗೆ ಡಿಕ್ಕಿಯಾಗಿದ್ದಲ್ಲದೆ, ಮಾರುಕಟ್ಟೆಯ ಅಂಗಡಿಗಳಿಗೆ ನುಗ್ಗಿದ ಘಟನೆ ಕಂಕನಾಡಿ ಮಾರುಕಟ್ಟೆಯಲ್ಲಿ ನಡೆದಿದೆ.
ಮಂಗಳೂರು ನಗರದಲ್ಲಿ ಕಸ ಹೆಕ್ಕಲು ಗುತ್ತಿಗೆ ಪಡೆದಿರುವ ಆಂಟನಿ ವೇಸ್ಟ್ ಕಂಪನಿಯ ಟ್ರಕ್ಕನ್ನು ಚಾಲಕ ಕಂಕನಾಡಿ ಮಾರುಕಟ್ಟೆ ಬಳಿ ನಿಲ್ಲಿಸಿ, ಕೆಳಕ್ಕೆ ಇಳಿದಿದ್ದ. ಹಿಂದಿನಿಂದ ಕಾರ್ಮಿಕರು ಕಸ ತುಂಬಿಸುತ್ತಿದ್ದರು. ಚಾಲಕ ವಾಹನವನ್ನು ನ್ಯೂಟ್ರಲ್ ನಲ್ಲಿರಿಸಿ ಇಳಿದಿದ್ದರಿಂದ ಟ್ರಕ್ ಕೆಳಗೆ ಇಳಿದಿದ್ದು, ಅಲ್ಲಿದ್ದ ಮೂರು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳ ಮೇಲೆ ಹರಿದಿದ್ದಲ್ಲದೆ, ಇಂಡಿಯನ್ ಚಿಕನ್ ಎನ್ನುವ ಕೋಳಿ ಮಾಂಸದ ಅಂಗಡಿಗೆ ನುಗ್ಗಿ ಜಖಂ ಮಾಡಿದೆ.
ಚಿಕನ್ ಶಾಪ್ ಎದುರಲ್ಲಿ ನಿಲ್ಲಿಸಿದ್ದ ಬೈಕ್ ಮತ್ತು ಸ್ಕೂಟರ್ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಅಂಗಡಿಯ ಇಬ್ಬರು ಸಿಬಂದಿ ಕಾಲಿಗೆ ಗಾಯಗೊಂಡಿದ್ದಾರೆ. ಟ್ರಕ್ ಅಂಗಡಿಯ ಮುಂಭಾಗಕ್ಕೆ ಬಡಿದು ನಿಂತಿದ್ದು, ಕೂಡಲೇ ಅದಕ್ಕೆ ಹತ್ತಿದ ಸ್ಥಳೀಯರು ವಾಹನವನ್ನು ಆಫ್ ಮಾಡಿದ್ದಾರೆ. ಘಟನೆ ಸಂದರ್ಭ ಹೆಚ್ಚು ಜನರು ಇಲ್ಲದ ಕಾರಣ ಪ್ರಾಣಾಪಾಯ ಆಗಿಲ್ಲ. ಸಾರ್ವಜನಿಕರು ಟ್ರಕ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ, ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಥಳೀಯರ ಪ್ರಕಾರ, ಟ್ರಕ್ ಚಾಲಕ ಕೆಳಗಿಳಿದು ಮೊಬೈಲಲ್ಲಿ ಮಾತನಾಡುತ್ತಿದ್ದ. ಟ್ರಕ್ಕನ್ನು ನ್ಯೂಟ್ರಲ್ ನಲ್ಲಿರಿಸಿ ಕೆಳಕ್ಕೆ ಇಳಿದಿದ್ದೇ ತಪ್ಪು. ಆತನನ್ನು ಈ ಘಟನೆಗೆ ಹೊಣೆಯಾಗಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕಂಕನಾಡಿ ಮತ್ತು ಟ್ರಾಫಿಕ್ ಪೊಲೀಸರು ಆಗಮಿಸಿ ಲಾರಿಯನ್ನು ತೆರವು ಮಾಡಿ ವಶಕ್ಕೆ ಪಡೆದಿದ್ದಾರೆ.
Four Cars and two wheelers completely damaged after a Mcc Antony Waste truck entered a Chicken Shop in Kankanady Market in Mangalore. The accident took place as driver kept the truck in nutral and got down of the truck.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm