ಬ್ರೇಕಿಂಗ್ ನ್ಯೂಸ್
08-04-21 05:46 pm Mangalore Correspondent ಕರಾವಳಿ
ಉಳ್ಳಾಲ: ಎ.8; ತೊಕ್ಕೊಟ್ಟಿನ ಸ್ಮಾರ್ಟ್ ಪ್ಲಾನೆಟ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಸೆಕ್ಯುರಿಟಿ ಗಾರ್ಡ್ ಓರ್ವರಿಗೆ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿಯ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಲಭಿಸಿದೆ.

ಮೂಲತಃ ಕೇರಳ ರಾಜ್ಯದ ಕ್ಯಾಲಿಕಟ್ ನಿವಾಸಿಯಾಗಿರುವ ಮೊಯ್ದಿನ್ ಕುಟ್ಟಿ (65) ಅವರಿಗೆ ಒಂದು ಕೋಟಿ ಬಂಪರ್ ಬಹುಮಾನ ಲಭಿಸಿದೆ. ಮೊಯ್ದಿನ್ ಕುಟ್ಟಿ ಅವರು ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿ ಸೆಕ್ಯುರಿಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರಿಗೆ ಕೇರಳದ ಲಾಟರಿ ತೆಗೆಯುವ ಹವ್ಯಾಸವಿದ್ದು ಕಳೆದ ವಾರ ಎಪ್ರಿಲ್ 4 ರಂದು ಡ್ರಾಗೊಳ್ಳುವ 100 ರೂಪಾಯಿ ಬೆಲೆಯ ಭಾಗ್ಯ ಮಿತ್ರ ಟಿಕೇಟನ್ನು ಕೇರಳದ ಉಪ್ಪಳದಲ್ಲಿ ಖರೀದಿಸಿದ್ದು ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಗಿಟ್ಟಿಸಿ ಕೋಟ್ಯಾಧೀಶರಾಗಿದ್ದಾರೆ. ಮೊಯ್ದಿನ್ ಕುಟ್ಟಿಗೆ ಪತ್ನಿ ಮೂವರು ಮಕ್ಕಳಿದ್ದಾರೆ. ಕೆಲಸ ಅರಸಿ ತೊಕ್ಕೊಟ್ಟಿಗೆ ಬಂದಿದ್ದ ಮೊಯ್ದಿನ್ ಕುಟ್ಟಿ ಅವರು ಸ್ಮಾರ್ಟ್ ಪ್ಲಾನೆಟ್ ಪ್ಲಾಝಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.


500 ರೂಪಾಯಿ ಸಾಲ ಕೊಟ್ಟಿದ್ದ ಟೈಲರ್
ಕಳೆದ ಶನಿವಾರ ಮೊಯ್ದಿನ್ ಕುಟ್ಟಿ ಅವರು ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿರುವ ಒಮೇಗಾ ಟೈಲರ್ ಶಾಪ್ ಮಾಲೀಕರಾದ ರವಿ ಅವರಲ್ಲಿ 500 ರೂಪಾಯಿ ಸಾಲ ಪಡೆದು ಕೇರಳದ ಭಾಗ್ಯಮಿತ್ರ ಲಾಟರಿಯನ್ನು ಖರೀದಿಸಿದ್ದರಂತೆ. ತಾನು ಸಾಲವಾಗಿ ನೀಡಿದ ಹಣದಲ್ಲಿ ಮೊಯ್ದಿನ್ ಕುಟ್ಟಿ ಅವರಂತಹ ಬಡವನಿಗೆ ಕೋಟಿ ಬಹುಮಾನ ಬಂದ ವಿಷಯ ತಿಳಿದ ರವಿ ಅವರು ಸಂಭ್ರಮಿಸಿದ್ದು ಕುಟ್ಟಿ ಅವರನ್ನ ಅಭಿನಂದಿಸಿದ್ದಾರೆ.

ಭಾಗ್ಯಮಿತ್ರ ಲಾಟರಿಯಲ್ಲಿ 5 ಜನರಿಗೆ ತಲಾ 1 ಕೋಟಿ ಬಂಪರ್ ಬಹುಮಾನ ಲಭಿಸಿದ್ದು ಅದರಲ್ಲಿ ಮೊಯ್ದಿನ್ ಕುಟ್ಟಿ ಅವರು ಓರ್ವ ಅದೃಷ್ಟಶಾಲಿಯಾಗಿದ್ದಾರೆ.
Read: ಕೋಟಿ ಲಾಟರಿ ಕತೆಯೇ ಸುಳ್ಳು ; ಯಾಮಾರಿಸಿದ ವಾಚ್ಮನ್ ಕುಟ್ಟಿ ಪರಾರಿ !
In a big-time luck a security guard from Ullal, Mangalore has won rupees one crore Kerela lottery unexpectedly. Mohiuddin Kuti is the lucky Security Guard.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm