ಬ್ರೇಕಿಂಗ್ ನ್ಯೂಸ್
05-04-21 04:03 pm Mangalore Correspondent ಕರಾವಳಿ
ಮಂಗಳೂರು, ಎ.5: ಮೆಸ್ಕಾಂ ಅಧಿಕಾರಿಯೋರ್ವ ಕಚೇರಿಗೆ ಬಂದಿದ್ದ ಗ್ರಾಹಕನ ಮೇಲೆ ಸ್ಟೀಲ್ ಸ್ಕೇಲ್ ನಲ್ಲಿ ಹಿಗ್ಗಾ ಮುಗ್ಗಾ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂಲತಃ ಉಳ್ಳಾಲಬೈಲಿನ ನಿವಾಸಿ ಪ್ರವೀಣ್ ಬಂಗೇರ ಎಂಬವರು ಮಂಗಳೂರಿನ ಮೆಸ್ಕಾಂ ಅತ್ತಾವರ ವಿಭಾಗದಲ್ಲಿ ವಿಜಿಲೆನ್ಸ್ ಅಧಿಕಾರಿ ಆಗಿದ್ದು ಕಚೇರಿಗೆ ಬಂದಿದ್ದ ಗ್ರಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಟೀಲ್ ಸ್ಕೇಲ್ ನಿಂದ ಹಲ್ಲೆ ನಡೆಸಿ ರೌಡಿಸಂ ಪ್ರದರ್ಶನ ಮಾಡಿದ್ದಾರೆ. ನೀವು ಫೋನ್ ತೆಗೆದಿಲ್ಲ. ನಿಮ್ಮ ಮೇಲೆ ದೊಣ್ಣೆಯಲ್ಲಿ ಹೊಡೆಯಬೇಕು ಎಂದು ಹೇಳಿದ್ದಕ್ಕೆ ಸಿಟ್ಟಾದ ಪ್ರವೀಣ್ ತನ್ನ ಕೈಯಲ್ಲಿದ್ದ ಸ್ಟೀಲ್ ಸ್ಕೇಲ್ ನಲ್ಲಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ನೀನು ತಾಕತ್ತಿದ್ದರೆ ದೊಣ್ಣೆಯಲ್ಲಿ ಹೊಡೆದು ನೋಡು. ನಾವು ಪೊಲೀಸರು, ಬಾ ಮುಂದೆ ಎನ್ನುತ್ತಲೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸಿದ್ದಾರೆ. ಬಳಿಕ ಕಚೇರಿಯಲ್ಲಿದ್ದ ಇತರ ವ್ಯಕ್ತಿಗಳು ಸಮಾಧಾನ ಪಡಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ಪ್ರವೀಣ್ ಬಂಗೇರ ಈ ಮೊದಲು ಉಳ್ಳಾಲ ಮೆಸ್ಕಾಂನಲ್ಲಿ ಎಇ (ಅಸಿಸ್ಟೆಂಟ್ ಇಂಜಿನಿಯರ್) ಆಗಿದ್ದು ಆ ಸಂದರ್ಭದಲ್ಲೇ ಭ್ರಷ್ಟಾಚಾರ ನಡೆಸಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪಗಳಿದ್ದವು. ಇವರು ಪತ್ನಿಯ ಹೆಸರಲ್ಲಿ ಉಳ್ಳಾಲ ಬೈಲ್ ಪರಿಸರದಲ್ಲಿ ಕೇಬಲ್ ಟಿ.ವಿ. ನಡೆಸುತ್ತಿದ್ದಾರೆ. ಉಳ್ಳಾಲ ಬೈಲಿನಲ್ಲಿ ದೈವಸ್ಥಾನ ಒಂದರಲ್ಲಿ ಆಡಳಿತ ಕಮಿಟಿ ಅಧ್ಯಕ್ಷನಾಗಿಯೂ ಸ್ಥಾನ ಗಿಟ್ಟಿಸಿದ್ದಾನೆ.

ಹಳೆಯ ವೀಡಿಯೋ ವೈರಲ್ !
ಮೆಸ್ಕಾಂ ವಿಜೆಲೆನ್ಸ್ ಅಧಿಕಾರಿ ಪ್ರವೀಣ್ ಬಂಗೇರ ಗ್ರಾಹಕನ ಮೇಲೆ ಸ್ಕೇಲ್ ನಲ್ಲಿ ಹಲ್ಲೆ ನಡೆಸಿದ್ದ ಘಟನೆಯ ವೀಡಿಯೋ ಹಳೆಯದ್ದೆಂದು ತಿಳಿದುಬಂದಿದೆ. ಈ ಬಗ್ಗೆ ದೂರು - ಪ್ರತಿ ದೂರು ದಾಖಲಾಗಿ ಪ್ರಕರಣ ಕೋರ್ಟಲ್ಲಿ ಇದೆಯಂತೆ. ಸುನಿಲ್ ವಾಝ್ ಎಂಬ ಇಲೆಕ್ಟ್ರಿಕಲ್ ಗುತ್ತಿಗೆದಾರ ಈ ವೀಡಿಯೋ ತೆಗೆದಿದ್ದಾರೆ ಎನ್ನಲಾಗಿದ್ದು ಪ್ರವೀಣ್ ಬಂಗೇರ ಎಂಬ ಅಧಿಕಾರಿಯ ದರ್ಪವನ್ನು ರೆಕಾರ್ಡ್ ಮಾಡಿದ್ದರು. ಹಳೆಯ ವೀಡಿಯೋ ಆಗಿದ್ದರೂ ಮೆಸ್ಕಾಂ ವಿಜಿಲೆನ್ಸ್ ಅಧಿಕಾರಿಯ ರಾಕ್ಷಸೀ ಪ್ರವೃತ್ತಿ ವೈರಲ್ ವಿಡಿಯೋದಲ್ಲಿ ಬಯಲಾಗಿದೆ.
Video:
Mangalore Mescom vegeligence officer Praveen Bangera attacks customer with Steel scale by using foul words a video of this has gone viral on social media.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm