ಬ್ರೇಕಿಂಗ್ ನ್ಯೂಸ್
04-04-21 10:57 pm Mangaluru correspondent ಕರಾವಳಿ
ಮಂಗಳೂರು, ಎ.4: ಕೆಂಜಾರಿನ ಕಪಿಲಾ ಗೋಶಾಲೆಯನ್ನು ಜಿಲ್ಲಾಡಳಿತ ಧ್ವಂಸಗೊಳಿಸಿ ಇಂದಿಗೆ 30 ದಿನವಾಗಿದ್ದು ಜನಪ್ರತಿನಿಧಿಗಳು, ಸರಕಾರ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ಇಂದು ಕೆಂಜಾರಿನ ಗೋಶಾಲೆಯಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೋ ಭಕ್ತರಿಂದ ಪಾದಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾದ್ಯಕ್ಷ ಡಾ.ಎಲ್.ಕೆ. ಸುವರ್ಣ, ಗೋವಿನ ಹೆಸರಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ಬಂದವರು ಆಡಳಿತ ನಡೆಸುತ್ತಿರುವಾಗಲೇ ಗೋಶಾಲೆಯನ್ನು ಕೆಡವಿದ್ದಾರೆ. ಯಾವ ಸರಕಾರ ರಕ್ಷಣೆ ಮಾಡಬೇಕಾಗಿತ್ತೋ ಅದೇ ಸರಕಾರ ಕುಮ್ಮಕ್ಕು ನೀಡಿ ಗೋಶಾಲೆಯನ್ನು ಧ್ವಂಸ ಮಾಡಿದೆ. ಸರಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ನಾವು ದೇವರ ಮೊರೆ ಹೋಗಲೇಬೇಕಾಯಿತು. ಈ ಸರಕಾರ ನಡೆಸುತ್ತಿರುವವರಿಗೆ ಆ ದೇವರೇ ಬುದ್ಧಿ ಕೊಡಲೆಂದು ಕೇಳಿಕೊಳ್ಳಬೇಕಾಗಿದೆ ಎಂದರು.

ಇವತ್ತು ದೈವ, ದೇವರು, ದೇವಸ್ಥಾನ, ದೈವಸ್ಥಾನಕ್ಕೆ ಅನ್ಯ ಮತೀಯರು ಪದೇ ಪದೇ ಅಪಮಾನ ಮಾಡುತ್ತಿದ್ದರೂ, ಅದನ್ನು ತಡೆಯಲು ಇವರಿಂದ ಆಗಿಲ್ಲ. ಹಿಂದುತ್ವದ ಸರಕಾರ ಎಂದು ಹೇಳಿಕೊಳ್ಳುವ ಈಗಿನ ಸರಕಾರಕ್ಕೆ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗದೇ ಆಡಳಿತ ಪಕ್ಷದ ಸದಸ್ಯರೇ ಸೇರಿ ಕೊರಗಜ್ಜನ ಬಳಿಗೆ ಪಾದಯಾತ್ರೆ ಮಾಡಿದ್ದಾರೆ. ಇದರರ್ಥ ಇವರು ತಮ್ಮ ವೈಫಲ್ಯವನ್ನು ಸಾಬೀತು ಮಾಡಿದಂತಲ್ಲವೇ ಎಂದು ಸುವರ್ಣ ಬಿಜೆಪಿ ನಾಯಕರ ಹೆಸರು ಉಲ್ಲೇಖಿಸದೆ ಪ್ರಶ್ನೆ ಮಾಡಿದರು.

ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ನಾಗಾಸಾಧುಗಳು ಆಶೀರ್ವಚನ ನೀಡಿದರು. ನ್ಯಾಯವಾದಿ ದಿನಕರ ಶೆಟ್ಟಿ, ಗೋಶಾಲೆ ಮಾಲಕರಾದ ಪ್ರಕಾಶ್ ಶೆಟ್ಟಿ , ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸುರತ್ಕಲ್, ಯಲಹಂಕ ರಾಜ್ಯ ಸಂಘಟನಾ ಕಾರ್ಯದರ್ಶಿ ಕಮಲಾಕ್ಷ ಸುವರ್ಣ , ದ.ಕ.

ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ, ಉಪಾಧ್ಯಕ್ಷರಾದ ಡಾಕ್ಟರ್ ಶ್ರೀಮತಿ ಅನುರಾಧ, ಶ್ರೀಮತಿ ರೇಣುಕಾ, ಶ್ರೀರಾಮ ಸೇನೆಯ ಮುಖಂಡರಾದ ಪ್ರದೀಪ್, ರಾಮಸೇನೆ ಮುಖಂಡರಾದ ಸೂರಜ್ ಕಟೀಲ್, ಆರ್ಯ ಸಮಾಜ ಕಾರ್ಯದರ್ಶಿ ದೀಪಕ್, ವಿದ್ಯಾರ್ಥಿ ಮುಖಂಡ ಶ್ರೀಪಾಲ್, ಕುಮಾರ್ ಮಾಲೆಮಾರ್, ಸುನೀಲ್ ಬಜಿಲಕೇರಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮುಂತಾದವರು ಪಾದಯಾತ್ರೆಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಪುಟಾಣಿ ಮಕ್ಕಳ ಕುಣಿತ ಭಜನಾ ತಂಡ, ಚೆಂಡೆ, ಗೋ ಮಾತೆಯ ಸ್ತಬ್ಧ ಚಿತ್ರ ಪಾದಯಾತ್ರೆಗೆ ಮೆರುಗು ನೀಡಿತು. ನಂತರ ದುಷ್ಟರಿಗೆ ನೀವೇ ಬುದ್ಧಿ ನೀಡಿ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
Mangalore Goshala destroyed in mangalore Devotees of cow march praying for justice.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm