ಬ್ರೇಕಿಂಗ್ ನ್ಯೂಸ್
20-03-21 11:10 pm Mangaluru correspondent ಕರಾವಳಿ
ಮಂಗಳೂರು, ಮಾ.20 : ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಶಾಲೆಯನ್ನೇ ಕೆಡವಿ ಹಾಕಿದ್ದಾರೆ. ಗೋವನ್ನು ಸಾಕುತ್ತಿದ್ದವರಿಗೂ ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಇವರಿಗೆ ಗೋವು ರಾಜಕೀಯ ಮಾಡುವುದಕ್ಕೆ ಮಾತ್ರ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರವಲಯದ ಕೆಂಜಾರಿನಲ್ಲಿ ಕಪಿಲಾ ಗೋಶಾಲೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಧ್ವಂಸ ಮಾಡಲಾಗಿದೆ. ಗೋಶಾಲೆಯಲ್ಲಿರುವ ಕರುಗಳು ಬೀದಿಗೆ ಬೀಳುವಂತಾಗಿದ್ದು ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ಬಿಜೆಪಿಯವರು ಗೋವು ರಕ್ಷಣೆಗಾಗಿ ಕಾನೂನು ತರುತ್ತಾರೆ. ಕಡಿಯುವುದನ್ನು ತಪ್ಪಿಸುವ ನೆಪದಲ್ಲಿ ರಾಜಕೀಯ ಮಾಡುತ್ತಾರೆ. ಆದರೆ ಇವರು ಅಧಿಕಾರದಲ್ಲಿರುವಾಗಲೇ ದೇಶ ಬೀಫ್ ರಫ್ತು ಮಾಡುವುದರಲ್ಲಿ ಜಗತ್ತಿಗೆ ನಂಬರ್ ವನ್ ಆಗಿದೆ. ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.
ಇಲ್ಲಿನ ಸಂಸದರು, ಶಾಸಕರೆಲ್ಲ ಬಿಜೆಪಿಯವರಿದ್ದಾರೆ. ಇವರಿಗೆ ಯಾರಿಗೂ ಗೋವಿನ ಕಾಣಿಸಲಿಲ್ಲ. ಗೋವನ್ನು ಬೀದಿಗೆ ಹಾಕುವಾಗ ಇಲ್ಲಿನ ಹಿಂದು ಸಂಘಟನೆಗಳಿಗೆ ಕಣ್ಣು ಕಾಣಲಿಲ್ಲ. ಎಲ್ಲರ ಕಣ್ಣು ಕುರುಡಾಗಿತ್ತು. ಇವರಿಗೆ ಗೋವಿನ ಮೇಲೆ ನೈಜ ಪ್ರೇಮ ಇದ್ದರೆ ಗೋಶಾಲೆ ಕೆಡಹುವುದನ್ನು ತಪ್ಪಿಸಬೇಕಿತ್ತು. ಇಲ್ಲಿನ ಸಂಸದರಿಗೆ ಗೋವು ಬರೀ ರಾಜಕೀಯಕ್ಕೆ ಮಾತ್ರ. ಇವರ ಗೋ ಪ್ರೇಮ ನಕಲಿಯೆಂದು ಮೊಯ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದರು.
ನೆಲಸಮಗೊಂಡ ಗೋಶಾಲೆಯ ಮಾಲೀಕ ಪ್ರಕಾಶ್ ಶೆಟ್ಟಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಸಹಾಯಧನ ನೀಡುತ್ತೇನೆ ಎಂದು ಚೆಕ್ಕನ್ನು ಗೋಶಾಲೆಯ ಮಾಲೀಕ ಪ್ರಕಾಶ್ ಶೆಟ್ಟಿಯವರಿಗೆ ಇದೇ ವೇಳೆ ಹಸ್ತಾಂತರಿಸಿದರು. ಅಲ್ಲದೆ, ತನ್ನ ಸೋದರ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಕೊಡಿಸುವುದಾಗಿ ಹೇಳಿದರು.
Former MLA Mohiuddin Bava handed over a cheque of Rs 1 lac to the owner of Kapila goshala Prakash Shetty for construction of a temporary goshala.
25-07-25 04:07 pm
Bangalore Correspondent
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
25-07-25 04:40 pm
HK News Desk
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
26-07-25 11:37 am
Mangalore Correspondent
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
DIG Anucheth Mangalore, SIT Dharmasthala: ಎಸ್...
25-07-25 06:05 pm
Udupi: ಸೊಸೈಟಿಗೆ ಅಡಿಟ್ ಮಾಡಿಕೊಡಲು ಲಂಚ ಬೇಡಿಕೆ ;...
25-07-25 02:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am