ಬ್ರೇಕಿಂಗ್ ನ್ಯೂಸ್
10-03-21 06:10 pm Mangalore Correspondent ಕರಾವಳಿ
ಮಂಗಳೂರು, ಮಾ.10: ದೈವದರ್ಶನದಲ್ಲಿ ಹೇಳಿದಂತೆ ಪುರಾತನ ಬಾವಿಯೊಂದರಲ್ಲಿ ಶೋಧ ನಡೆಸಿದಾಗ 300 ವರ್ಷಗಳ ಹಿಂದಿನ ದೇವರ ಮೂರ್ತಿ ಪತ್ತೆಯಾದ ಘಟನೆ ಕಿನ್ನಿಗೋಳಿಯ ಬಳ್ಕುಂಜೆ ಸಮೀಪದ ಮೂಡಾಯಿಗುತ್ತಿನಲ್ಲಿ ನಡೆದಿದೆ.


ಬಳ್ಕುಂಜೆ ಮೂಡಾಯಿಗುತ್ತಿನ ಕುಟುಂಬಸ್ಥರಿಗೆ ಸೇರಿದ ಜಮೀನಿನಲ್ಲಿ ಮುಚ್ಚಿ ಹೋಗಿದ್ದ ಬಾವಿಯಲ್ಲಿ ದೈವದ ಮೂರ್ತಿ ಮತ್ತು ಪೂಜಾ ಪರಿಕರಗಳು ಪತ್ತೆಯಾಗಿವೆ. ಈ ಜಾಗದಲ್ಲಿ ಹಿಂದೆ ಮೂಡಾಯಿಗುತ್ತಿನ ಕುಟುಂಬಸ್ಥರು ದೈವಗಳ ಆರಾಧನೆ ನಡೆಸುತ್ತಿದ್ದರು. ಕಾಲಕ್ರಮೇಣ ಈ ಜಮೀನು ಪರರ ಪಾಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕುಟುಂಬಸ್ಥರು ತಮ್ಮ ಮೂಲ ಜಾಗವನ್ನು ಖರೀದಿಸಿ, ದೇವರ ಆರಾಧನೆಗೆಂದು ದೇವಸ್ಥಾನ ಕಟ್ಟಿದ್ದರು.


ಇತ್ತೀಚೆಗೆ ದೈವದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ "ಮುಚ್ಚಿ ಹೋದ ಹಳೆಯ ಬಾವಿಯನ್ನು ಮತ್ತೆ ತೋಡಬೇಕು. ಆಗ 300 ವರ್ಷಗಳ ಹಳೆಯ ದೈವದ ಮೂರ್ತಿ ಮತ್ತು ಪೂಜಾ ಪರಿಕರ ಸಿಗಲಿವೆ ಎಂದು ದೈವ ನುಡಿದಿತ್ತು. ನಿರಂತರ ಕಷ್ಟ ಎದುರಿಸುತ್ತಿದ್ದ ಹಿನ್ನೆಲೆ ದೈವದ ಮೊರೆ ಹೋಗಿದ್ದಾಗ ಕುಟುಂಬಸ್ಥರು ದೈವ ದರ್ಶನ ಇಟ್ಟಿದ್ದರು.

ಅದರಂತೆ, ಮನೆಯವರು ಆ ಜಾಗದಲ್ಲಿ ಬಾವಿ ತೋಡಿದ್ದು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದ ಬಾವಿ ಪತ್ತೆಯಾಗಿದೆ. ಅಲ್ಲದೆ, ಬಾವಿ ಒಳಗೆ ಹಳೆಯದಾದ ಕಂಚಿನ ದೈವದ ಮೂರ್ತಿ, ಆಭರಣ, ಕತ್ತಿಗಳು ಪತ್ತೆಯಾಗಿವೆ.
300-year-old idol found inside well in kinnigoli Mangalore.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm