ಬ್ರೇಕಿಂಗ್ ನ್ಯೂಸ್
25-02-21 07:52 pm Mangaluru correspondant ಕರಾವಳಿ
ಉಳ್ಳಾಲ, ಫೆ.25: ಕಾಯಿ ಎಳತಾದರೂ ದೊಡ್ಡದಾಗಿ ನೇತಾಡುತ್ತಿರುವ ಅಸ್ಸಾಂ ತಳಿಯ ಸೋರೆ ಕಾಯಿಗಳು. ಹತ್ತಿರದಲ್ಲೇ ಇರೋ ಚಪ್ಪರದಲ್ಲಿ ಎಣಿಕೆಗೆ ಸಿಗದಷ್ಟು ಬೆಳೆದು ತೂಗುತ್ತಿರುವ ಹೀರೆ ಕಾಯಿಗಳು. ಅದರ ಸುತ್ತಲೂ ಹರಿವೆ, ಬದನೆ, ಬೆಂಡೆಕಾಯಿ ಮೂಲಂಗಿ, ಟೊಮೆಟೋ, ಮುಳ್ಳು ಸೌತೆಗಳ ಗೊಂಚಲು ಕಣ್ಮನ ಸೆಳೆಯುತ್ತದೆ.
ಉಳ್ಳಾಲದ ಕಾಪಿಕಾಡಿನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಈಗ ನೋಡುಗರ ಕಣ್ಣಿಗೆ ಹಸಿರ ತಂಪು ನೀಡುತ್ತಿದೆ. ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಕೂಲಿ ಕಾರ್ಮಿಕರು ಸೇರಿ ಇಂತಹ ಸಾವಯವ ಕೃಷಿಯನ್ನು ನಡೆಸಿ ಸಫಲತೆ ಕಂಡಿದ್ದಾರೆ.


14 ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಗೇರು ಮೂಲ ಕೃಷಿಯಾಗಿದ್ದರೂ ಖಾಲಿ ಇರುವ ಜಾಗದಲ್ಲಿ ತರಕಾರಿಗಳ ಕೈ ತೋಟವನ್ನು ಬೆಳೆಯಲಾಗಿದೆ. ಅಸ್ಸಾಂ ಗಡಿ ಪ್ರದೇಶದಲ್ಲಿ ಬೆಳೆಯುವ ಸೋರೆ ಕಾಯಿಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಅಸ್ಸಾಂ ತಳಿಯ ಸೋರೆ ಕಾಯಿಗಳನ್ನು ಇಲ್ಲಿ ಬೆಳೆದಿದ್ದು ಎಳೆಯದಾದರೂ ಅದರ ಗಾತ್ರ ಮಾತ್ರ ಎಲ್ಲರನ್ನೂ ಆಕರ್ಷಿಸುತ್ತಿದೆ.
ಚೈನಾದಲ್ಲೂ ಅಸ್ಸಾಂ ತಳಿಯ ಸೋರೆ ಕಾಯಿ ಬಹಳ ಫೇಮಸ್ ಅಂತೆ. ಜೊತೆಗೆ ಹತ್ತಿರದ ಬೃಹತ್ ಚಪ್ಪರದಲ್ಲಿ ಎಣಿಕೆಗೂ ಸಿಗದಷ್ಟು ಲೋಕಲ್ ಹೀರೆಕಾಯಿಗಳು, ಟೊಮೆಟೊ, ಮೂಲಂಗಿ, ಮುಳ್ಳು ಸೌತೆ, ಬದನೆ, ಬೆಂಡೆಕಾಯಿ ಕೈತೋಟಗಳು ಜನರನ್ನ ಕೃಷಿಯತ್ತ ಆಕರ್ಷಿಸುವಂತೆ ಮಾಡಿದೆ. ಕೇಂದ್ರದ ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರು ಸೇರಿ ತೋಟವನ್ನು ಬಹಳ ಚೆನ್ನಾಗಿ ಮಾಡಿದ್ದು ನೀರು, ಗೊಬ್ಬರಗಳನ್ನು ಹಾಕಿ ಸಲಹಿದ ಪರಿಣಾಮ ಸಮೃದ್ಧ ತರಕಾರಿ ಬೆಳೆದಿದ್ದಾರೆ.

ತೋಟದಲ್ಲಿ ಬೆಳೆದ ತರಕಾರಿಗಳನ್ನು ಕೇಂದ್ರದ 25 ಸಿಬ್ಬಂದಿಗಳು, ಕೂಲಿ ಕಾರ್ಮಿಕರಿಗೆ ಹಂಚಿ ಉಳಿದ ತರಕಾರಿಗಳಿಂದ ಸಿಗುವ ಬೀಜಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ, ಕೇಂದ್ರಕ್ಕೆ ಅನೇಕ ಕೃಷಿಕರು ಭೇಟಿ ನೀಡುತ್ತಿರುತ್ತಾರೆ. ಅವರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕೈ ತೋಟವನ್ನು ನಿರ್ಮಿಸಲಾಗಿದೆ.


ಮಂಗಳೂರು ನಗರ ಅಂತೂ ಹಸಿರು ಮುಕ್ತವಾಗುತ್ತಿದೆ. ಇರೋ ಸ್ವಲ್ಪ ಜಾಗದಲ್ಲಾದರೂ ಎಲ್ಲರೂ ಈ ರೀತಿ ತರಕಾರಿಗಳನ್ನಾದರೂ ಬೆಳೆಯಬಹುದು ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬಲು ಕೈತೋಟ ನಿರ್ಮಿಸಲಾಗಿದೆ. ಅಲ್ಲದೆ ತಾರಸಿ ತೋಟದಲ್ಲೂ ಥರ್ಮಾಕೋಲಿನ ಪೆಟ್ಟಿಗೆಗಳಲ್ಲಿ ಯಾವ ರೀತಿ ತರಕಾರಿಗಳನ್ನು ಬೆಳೆಯಬಹುದೆಂದು ಇಲ್ಲಿ ತೋರಿಸಿಕೊಡಲಾಗಿದೆ ಎಂದಿದ್ದಾರೆ.
A plantation program was held at Ullal, Mangalore. Hundreds thronged to the venue to see various vegetables grown in different states of India.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm