ಬ್ರೇಕಿಂಗ್ ನ್ಯೂಸ್
09-02-21 03:58 pm Mangalore Correspondent ಕರಾವಳಿ
ಕೊಣಾಜೆ, ಫೆ.9: SDPI ಮುಖಂಡ ರಿಯಾಝ್ ಪರಂಗಿಪೇಟೆ ತಾಂಟ್ರೆ ಬಾ ತಾಂಟ್ ಎಂದು ಕೋಮು ಪ್ರಚೋದನಕಾರಿ ಭಾಷಣ ಮಾಡಿ ಹಿಂದು ಪರ ಸಂಘಟನೆಗಳ ಅವಹೇಳನ ಮಾಡಿ ಬೆದರಿಕೆ ಹಾಕಿದ್ದು ಈತ ಸಮಾಜದ ಸ್ವಾಸ್ಥ್ಯ ಕದಡಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದು ಪೊಲೀಸರು ತಕ್ಷಣ ಆತನನ್ನು ಬಂಧಿಸಲು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮುಡಿಪು ವಲಯಯದ ಪದಾಧಿಕಾರಿಗಳು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾಷಣದ ವಿಡಿಯೋ ತುಣುಕು ಹರಿದಾಡುತ್ತಿದ್ದು ಆ ಭಾಷಣದಲ್ಲಿ ರಿಯಾಝ್ ಪರಂಗಿಪೇಟೆ RSS ಮತ್ತು ಅದರ ಪರಿವಾರ ಸಂಘಟನೆಗಳಲ್ಲಿ ತನಗೆ ಹೇಳಲಿರುವುದು ಒಂದೇ..ನಿಮ್ಮನ್ನು ಎದುರಿಸಲು ನಾವು ಯಾವತ್ತೂ ಎಲ್ಲಿಯೂ ಸಿದ್ಧ. ನೀವು ತಾಂಟಲು ಬಂದರೆ ಬನ್ನಿ ತಾಂಟುವ, ಪ್ರತೀ ಗಲ್ಲಿಗಳಲ್ಲಿಯೂ ನಮ್ಮ ಯುವ ಪಡೆಯನ್ನು ನಿರ್ಮಿಸಿ ಸಂಘ ಪರಿವಾರದ ವಿರುದ್ಧ ಛೂ ಬಿಡುತ್ತೇವೆ. ಈ ಆಟ ಇನ್ನು ಆರಂಭವಾಗಲಿದೆ ಎಂಬಿತ್ಯಾದಿ ಮಾತುಗಳನ್ನು ಆಡಿ ಹಿಂದು ಪರ ಸಂಘಟನೆಗಳನ್ನು ನೇರವಾಗಿ ಸಂಘರ್ಷಕ್ಕೆ ಆಹ್ವಾನಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕುರ್ನಾಡು ಗ್ರಾಮದ ಮಿತ್ತಕೋಡಿಯಲ್ಲಿ ಈ ಕೋಮು ಪ್ರಚೋದಕ ಭಾಷಣ ಮಾಡಿದರ ಪರಿಣಾಮ ಶಾಂತಿ ಸೌಹಾರ್ದವಾಗಿದ್ದ ಕುರ್ನಾಡು ಪರಿಸರ ಅಶಾಂತಿಗೊಳಗಾಗಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈತನ ಕೋಮು ಪ್ರಚೋದಕ ಭಾಷಣದಿಂದಾಗಿ ಮಂಗಳೂರಿನ ಲಾಲ್ ಬಾಗ್ ನಲ್ಲಿ ಹಿಂದು ಯುವಕನಿಗೆ ಚೂರಿ ಇರಿತವಾಗಿದೆ. ಈತನು ಈ ಮೊದಲೂ ಪ್ರಚೋದನಕಾರಿ ಭಾಷಣ ಮಾಡಿದ್ದು ಈತನ ವಿರುದ್ಧ ಯಾವುದೇ ಕಠಿಣ ಕ್ರಮ ಜರಗಿಲ್ಲ. ಈತನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೊಂದು ದಿನ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆಗಳಿವೆ ಎಂದು ಜಾಗರಣ ವೇದಿಕೆ ಮುಖಂಡರು ಪೊಲೀಸ್ ಇಲಾಖೆಗೆ ದೂರಿದ್ದಾರೆ.
ಹಿರಿಯ ಮುಖಂಡರಾದ ಟಿ.ಜಿ ರಾಜಾರಾಂ ಭಟ್, ಜಗದೀಶ್ ಆಳ್ವ ಕುವೆತ್ತಬೈಲು, ಹಿಂ.ಜಾ.ವೇ ಮುಡಿಪು ವಲಯಾಧ್ಯಕ್ಷ ಪ್ರಶಾಂತ್ ಅನಂಗ, ಪ್ರಮುಖರಾದ ದಿವ್ಯರಾಜ್ ಶೆಟ್ಟಿ, ವಿಶ್ವನಾಥ ಕಡುವಾಯಿ, ರಂಜಿತ್ ಹೂಹಾಕುವಕಲ್ಲು ಇದ್ದರು.
The Hindu Jagarana Vedike activists of Konaje have filed a complaint against Riyaz Farangipete for his speech of communal disharmony in Mangalore.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 07:23 pm
Mangalore Correspondent
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
07-11-25 08:05 pm
HK News Desk
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm