ಬ್ರೇಕಿಂಗ್ ನ್ಯೂಸ್
25-01-21 06:29 pm Mangalore Correspondent ಕರಾವಳಿ
ಮಂಗಳೂರು, ಜ.25 : ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪುತ್ತೂರಿನ ರಾಕೇಶ್ ಕೃಷ್ಣ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಆವಿಷ್ಕಾರದ ಪ್ರಾತ್ಯಕ್ಷಿಕೆ ನೀಡಿದರು. ತಾವು ಆವಿಷ್ಕರಿಸಿದ ಸೀಡೋಗ್ರಾಫರ್ ಯಂತ್ರವು ರೈತರಿಗೆ ಯಾವ ರೀತಿಯಲ್ಲಿ ಉಪಯುಕ್ತ ಅನ್ನುವುದನ್ನು ತೋರಿಸಿಕೊಟ್ಟರು.
ಬಳಿಕ ಮಾಧ್ಯಮದ ಮಂದಿಗೆ ರಾಕೇಶ ಕೃಷ್ಣ ತಮ್ಮ ಯಂತ್ರದ ಬಳಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ರೈತರು ಮಾಮೂಲಿ ಯಂತ್ರಗಳನ್ನು ಬಳಸಿ ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಮಾಡಲು ಕನಿಷ್ಠ 100-120 ಗಂಟೆ ಬೇಕಾಗುತ್ತದೆ. ಆದರೆ, ಈಗ ಅಭಿವೃದ್ಧಿಪಡಿಸಿರುವ ಸೀಡೋಗ್ರಾಫರ್ ಯಂತ್ರದಲ್ಲಿ ಒಂದು ಹೆಕ್ಟೇರ್ ಪ್ರದೇಶವನ್ನು ಕೇವಲ 18 ಗಂಟೆಯೊಳಗೆ ಬಿತ್ತನೆ ಮಾಡಲು ಸಾಧ್ಯ ಎಂದು ರಾಕೇಶ್ ಕೃಷ್ಣ ಹೇಳಿದರು.
ಗದ್ದೆ ಅಥವಾ ಹೊಲದಲ್ಲಿ ಸೀಡೋಗ್ರಾಫರ್ ಯಂತ್ರವನ್ನು ಬಳಸುವಾಗ ಅದು ನೇಗಿಲು ರೀತಿಯಲ್ಲಿ ಗದ್ದೆಯನ್ನು ಉಳುಮೆ ಮಾಡುವುದಲ್ಲದೆ, ಜೊತೆಗೇ ಬಿತ್ತನೆಯನ್ನೂ ಮಾಡುತ್ತದೆ. ಯಂತ್ರದಲ್ಲಿ ಮೊದಲೇ ಬೀಜ ತುಂಬಿಸಲಾಗುತ್ತದೆ. ಯಂತ್ರ ಮುಂದುವರಿದಂತೆ ಬೀಜವು ಅದರಿಂದ ಉದುರುತ್ತದೆ. ಅದರ ಜೊತೆಗೆ ಟ್ಯಾಂಕ್ನಲ್ಲಿರುವ ನೀರೂ ಬೀಳುತ್ತದೆ. ಬೀಜ ಹಾಕಿದ ತಕ್ಷಣ ಯಂತ್ರದಲ್ಲಿರುವ ಪ್ಲೇಟ್ ಬೀಜದ ಮೇಲೆ ಮಣ್ಣನ್ನು ಮುಚ್ಚಿಕೊಂಡು ಬರುತ್ತದೆ. ಈ ಯಂತ್ರದ ಸಹಾಯದಿಂದ ವಿವಿಧ ವಿನ್ಯಾಸದ ಬೀಜಗಳನ್ನು ಬಿತ್ತನೆ ಮಾಡಬಹುದು ಎಂದು ರಾಕೇಶ್ ಕೃಷ್ಣ ಮಾಹಿತಿ ನೀಡಿದರು.
3- 4 ವರ್ಷಗಳ ಸತತ ಪ್ರಯತ್ನದಿಂದ ಸೀಡೋಗ್ರಾಫರ್ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಏಳನೇ ತರಗತಿಯಿಂದಲೇ ಈ ಯಂತ್ರದ ಕೆಲಸ ಆರಂಭಿದ್ದೆ. ಸಹೋದರಿ ರಶ್ಮಿ ಯಂತ್ರ ತಯಾರಿಗೆ ಬಹಳಷ್ಟು ಸಹಕರಿಸಿದ್ದಾರೆ. ಅಲ್ಲದೆ ಹೆತ್ತವರು ಹಾಗೂ ಶಾಲಾ ಕಾಲೇಜಿನ ಅಧ್ಯಾಪಕರ ಸಲಹೆ, ಸಹಕಾರವು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಹೇಳಿದರು.
ರಾಕೇಶ್ ಕೃಷ್ಣ ತಾಯಿ ಡಾ. ದುರ್ಗಾರತ್ನ ಸಿ. ಮಾತನಾಡಿ, ನನ್ನ ಮಗ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಯ್ಕೆ ಆಗಿರುವುದು ಬಹಳ ಸಂತಸ ತಂದಿದೆ. ಅದೇ ರೀತಿ ಪ್ರಧಾನಿ ಮೋದಿಯವರ ಜೊತೆ ನೇರವಾಗಿ ಮಾತನಾಡಲು ಅವಕಾಶ ಸಿಕ್ಕಿದ್ದು ಅದ್ಭುತ ಅನುಭವ. ರೈತರಿಗೆ ಈ ಯಂತ್ರದಿಂದ ಉಪಯೋಗ ಸಿಗಲಿ ಎಂದು ಹೇಳಿದರು.
Video:
Rakesh Krishna, one among 32 children in the country to win Pradhan Mantri Rastriya Bal Puraskar 2021, spoke to media on Monday January 25 after interacting with Prime Minister Narendra Modi through virtual conference at zilla panchayat office here.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
09-06-25 09:20 pm
HK News Desk
ತನ್ನನ್ನು ಕಾರ್ಡಿಯೋಲಜಿಸ್ಟ್ ಅಂತ ಹೇಳಿಕೊಂಡು 50ಕ್ಕೂ...
08-06-25 10:29 pm
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm