ಬ್ರೇಕಿಂಗ್ ನ್ಯೂಸ್
23-01-21 05:51 pm Mangalore Correspondent ಕರಾವಳಿ
ಮಂಗಳೂರು, ಜ.23: ಮಂಗಳೂರಿನ ಪೊಲೀಸರು ರಾತ್ರಿ ವೇಳೆ ತಿರುಗಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾಹನದಲ್ಲಿ ಕುಳಿತು ಕುಡಿಯುವುದು, ರಾತ್ರಿ ವೇಳೆ ವಿನಾಕಾರಣ ತಿರುಗಾಡುವುದು ಮಾಡುವಂತಿಲ್ಲ ಎಂದು ಹೊಸ ಕಮಿಷನರ್ ಪೊಲೀಸರಿಗೆ ಹೊಸ ಕೆಲಸ ಕೊಟ್ಟಿದ್ದಾರೆ. ಆದರೆ, ಇದೇ ವಿಚಾರವನ್ನು ಇಟ್ಟುಕೊಂಡು ವೇದಾಂತ್ ಶೆಣೈ ಎಂಬ ಯುವಕ ತನಗಾದ ಕಿರುಕುಳದ ಬಗ್ಗೆ ಇನ್ ಸ್ಟಾ ಗ್ರಾಮಿನಲ್ಲಿ ಹಂಚಿಕೊಂಡಿದ್ದಾನೆ.


ತಾನು ಬಲ್ಮಠದಲ್ಲಿ ಕೆಫೆ ಒಂದಕ್ಕೆ ರಾತ್ರಿ 8 ಗಂಟೆ ಸುಮಾರಿಗೆ ತೆರಳಿದ್ದಾಗ ಪೊಲೀಸರು ಬಂದು ತಮ್ಮನ್ನು ಜೀಪಿನಲ್ಲಿ ಹಾಕಿ ಕೊಂಡೊಯ್ದಿದ್ದರು. ಬಳಿಕ ಟೌನ್ ಹಾಲ್ ಬಳಿಯ ಮಿನಿ ಹಾಲ್ ಗೆ ಕರೆದೊಯ್ದು ನಮ್ಮನ್ನು ಕಳ್ಳರಂತೆ ಟ್ರೀಟ್ ಮಾಡಿದ್ದಾರೆ. ಅಲ್ಲಿ ನಮ್ಮ ವಿಳಾಸ, ಪೂರ್ವಾಪರ ಕೇಳಿಕೊಂಡು ಸುಮ್ಮನೆ ನಿಲ್ಲಿಸಿದ್ದಾರೆ. ಕಮಿಷನರ್ ಹೊರಗಡೆ ಹೋಗಿದ್ದಾರೆ, ಅಲ್ಲಿ ವರೆಗೂ ಕೂತಿರಿ ಎಂದು ಒರಟು ಭಾಷೆಯಲ್ಲಿ ಬೈದಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆಂದು ಅಲ್ಲಿ ಕೂಡಿಹಾಕಿದ್ದಾರೆಂದು ಗೊತ್ತಿರಲಿಲ್ಲ. ಅಲ್ಲಿ ನೋಡಿದಾಗ ನೂರಕ್ಕೂ ಹೆಚ್ಚು ಮಂದಿ ಇದ್ದರು. ಎಲ್ಲರನ್ನೂ ನೆಲದಲ್ಲಿ ಕೂರಿಸಿದ್ದರು. ನಾಲ್ಕು ಗಂಟೆ ಕಾಲ ಕಾಯಿರಿ ಏನಾಗಲ್ಲ ಎಂದಿದ್ದಾರೆ. ಇದರಿಂದ ತುಂಬ ಕಿರುಕುಳ ಆಗಿದೆ ಎಂದು ಬರೆದುಕೊಂಡಿದ್ದು ಅದರ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದೆ.
ರಾತ್ರಿ ವೇಳೆ ಹೊರಗೆ ಹೋಗುವ ಮಂದಿ ಇನ್ನು ಜಾಗ್ರತೆ ಇರಿ. ಪೊಲೀಸರು ನಿಮ್ಮನ್ನು ಕಿಡ್ನಾಪ್ ಮಾಡುತ್ತಾರೆ. ಟೌನ್ ಹಾಲಲ್ಲಿ ಕೂಡಿಹಾಕಿ ಫೇಕ್ ಕೇಸ್ ಹಾಕಲು ಪ್ರಯತ್ನ ಪಡುತ್ತಾರೆ ಎಂದು ಬರೆದಿದ್ದಾರೆ. ಈ ಬಗ್ಗೆ ಪೊಲೀಸರು ಏನು ಆ್ಯಕ್ಷನ್ ತಗೋತಾರೋ ಗೊತ್ತಿಲ್ಲ.
Youth slams Mangalore Police Commissioner Shashi Kumar and team on Instagram for unnecessarily seizing people into custody at night. Also shares a brief incident of what happened to him.
25-03-26 09:32 pm
HK News Staffer
13 ವರ್ಷಗಳ ಜೀವನ್ಮರಣ ಹೋರಾಟಕ್ಕೆ ಕೊನೆ ; ನಿಷ್ಕ್ರಿಯ...
25-03-26 03:25 pm
ಹಿಂದು, ಸಿಖ್, ಬೌದ್ಧರಲ್ಲಿ ಮಾತ್ರ ಪರಿಶಿಷ್ಟ ಮೀಸಲು,...
24-03-26 02:55 pm
ಬಿಜೆಪಿ ಜೊತೆಗಿನ ಮೈತ್ರಿ ತಳ್ಳಿಹಾಕಿದ ನಟ ವಿಜಯ್ ; ಜ...
23-03-26 12:48 pm
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
25-03-26 06:15 pm
HK News Staffer
ಟ್ರಂಪ್ ಯುದ್ಧ ವಿರಾಮ ನಡುವೆಯೂ ಇಸ್ರೇಲ್ ದಾಳಿ ಮುಂದು...
24-03-26 04:43 pm
ಅಮೆರಿಕಾ ಜೊತೆ ಯಾವುದೇ ಮಾತುಕತೆ ನಡೆದಿಲ್ಲ , ನಮ್ಮ ವ...
24-03-26 12:10 pm
ಇರಾನ್ - ಅಮೆರಿಕ ಸಂಘರ್ಷ ; ದಿಢೀರ್ ಐದು ದಿನಗಳ ಕದನ...
23-03-26 09:46 pm
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
25-03-26 08:44 pm
HK News Staffer
ಭಾರತೀಯ ನೌಕಾಪಡೆ ರಕ್ಷಣೆ, ಆತಂಕದಿಂದ ಪಾರಾಗಿದ್ದೇವೆ...
25-03-26 05:23 pm
ಟೋಲ್ ಪ್ಲಾಜಾಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ...
25-03-26 03:49 pm
ಗುಡ್ಡದಲ್ಲಿ ಹೊಳೆ ಬರುತ್ತಾ? ನಿವೇಶನ ರಹಿತರ ಜಮೀನು ಹ...
25-03-26 12:15 pm
ಹಣಕಾಸು ಮಸೂದೆ ಮೇಲಿನ ಚರ್ಚೆ ; ರಾಷ್ಟ್ರೀಯ ಭದ್ರತೆ,...
24-03-26 09:29 pm
24-03-26 02:04 pm
HK News Staffer
ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಪ್ರಚೋದಿಸುವ ವಿಡಿ...
23-03-26 09:44 pm
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm