ಬ್ರೇಕಿಂಗ್ ನ್ಯೂಸ್
22-01-21 02:03 pm Mangalore Correspondent ಕರಾವಳಿ
ಮಂಗಳೂರು, ಜ.22 : ಉಳ್ಳಾಲ ಕೊರಗಜ್ಜನ ಕಟ್ಟೆಯನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಮಂಗಳೂರು ವಿಧಾನಸಭಾ ಇಂಟಕ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ಮನವಿ ನೀಡಲಾಯಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಇಂಟಕ್ ಅಧ್ಯಕ್ಷ ಹರೀಶ್ ರಾವ್ ಮಾತನಾಡಿ ಮಂಗಳೂರು ಕ್ಷೇತ್ರ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿಯ ಶಾಂತಿಗೆ ಧಕ್ಕೆ ತರುವಂತಹ ಷಡ್ಯಂತ್ರವನ್ನು ಹೂಡಿ ಕೊರಗಜ್ಜನ ಕಟ್ಟೆಯ ಹುಂಡಿಯಲ್ಲಿ ವಿಕೃತ ಮನಸ್ಸಿನವರು ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವ ಯತ್ನ ಮಾಡಿದ್ದಾರೆ. ಇದು ಈ ಭಾಗದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡುವ ಕಿಡಿಗೇಡಿ ಪ್ರಯತ್ನವಾಗಿದೆ. ಇದರಿಂದ ಸಹಸ್ರಾರು ಕೊರಗಜ್ಜ ಭಕ್ತರ ಮನಸ್ಸಿಗೆ ನೋವು ಉಂಟು ಮಾಡಿದೆ. ಅಲ್ಲದೆ, ಹಿಂದು ಧರ್ಮೀಯರಿಗೆ ಮಾಡಿದ ಅವಮಾನ ಎಂದು ಹೇಳಿದರು.
ಕೊಣಾಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಬಳಿ ಇದ್ದ ಧ್ವಜ ತೆಗೆದು ಅದಕ್ಕೆ ಮೂತ್ರ ಮಾಡಿ ವಿಕೃತ ಮನಸ್ಸನ್ನು ತೋರಿಸಿರುತ್ತಾರೆ. ಇದರ ಹಿಂದೆ ವಿಕೃತ ಮನಸ್ಸಿನ ಹುಡುಗರ ಷಡ್ಯಂತ್ರ ಇರುವುದು ಖಾತರಿಯಾಗುತ್ತದೆ. ಜಿಲ್ಲೆಯಲ್ಲಿ ಗಲಭೆ ಎಬ್ಬಿಸಲು ಹುನ್ನಾರ ಸ್ಪಷ್ಟವಾಗಿ ಕಾಣುತ್ತಿದೆ. ದುಷ್ಕರ್ಮಿಗಳನ್ನ ಕೂಡಲೇ ಬಂಧಿಸಬೇಕು, ಇಲ್ಲವಾದಲ್ಲಿ ಉಳ್ಳಾಲ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೊರಗಜ್ಜ ಭಕ್ತ ರೋಹಿತ್ ಉಳ್ಳಾಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯೂತ್ ಇಂಟಕ್ ಅಧ್ಯಕ್ಷ ಸಿದ್ದೀಕ್ ಹಸನ್, ಉಳ್ಳಾಲ ಕೊರಗಜ್ಜ ಗುಳಿಗಜ್ಜ ಸಮಿತಿಯ ಅಧ್ಯಕ್ಷ ಸುನೀಲ್, ಯುವ ಇಂಟಕ್ ನಾಯಕರಾದ ದೀಕ್ಷಿತ್ ವಿ.ಶೆಟ್ಟಿ, ಸಿರಾಜುದ್ದೀನ್, ಮುನೀರ್ ಬಾವ, ಬಾಸ್ಕರ್ ಮಡ್ಯಾರ್, ಅಬ್ದುಲ್ ಅಝೀಝ್ ಹಕ್, ಅಮಿತ್ ರಾಜ್ ಬೇಕಲ್, ವಿಶಾಲ್ ಕೊಲ್ಯ, ಮನೋಜ್ ಶೆಟ್ಟಿ, ಸೃಜನ್ ಶೆಟ್ಟಿ, ನಝೀರ್ ಬೆಳ್ಳಾರೆ, ರಾಜೇಂದ್ರ ಭಂಡಸಾಲೆ, ಪ್ರಶಾಂತ್ ಬಜಾಲ್, ವಿಶ್ವತ್ ಕೊಲ್ಯ, ವಿಶ್ವನಾಥ್ ಪೂಜಾರಿ, ನಿಯಾಝ್, ಕಿಶೋರ್ ತೊಕ್ಕೊಟ್ಟು, ಕೆ.ಎಂ.ಅಬ್ದುರ್ರಹ್ಮಾನ್ ಕೋಡಿಜಾಲ್, ಮುನ್ನೂರು ಗ್ರಾಮ ಇಂಟಕ್ ಅಧ್ಯಕ್ಷ ನಿಸಾರ್ ಮೊದಲಾದವರಿದ್ದರು.
ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್, ಸಿಎಂ ಬಿಎಸ್ವೈ ಭಾವಚಿತ್ರಕ್ಕೆ ಶಿಲುಬೆ ಹಾರ !! ಉಳ್ಳಾಲದಲ್ಲಿ ಕಿಡಿಗೇಡಿ ಕೃತ್ಯ
ಉಳ್ಳಾಲಕ್ಕೆ ಕಮಿಷನರ್ ತಂಡ ಭೇಟಿ ; ಧಾರ್ಮಿಕ ಭಾವನೆಗೆ ಧಕ್ಕೆ ತರೋರನ್ನ ಸುಮ್ನೆ ಬಿಡಲ್ಲ ; ಸ್ಥಳದಲ್ಲೇ ವಾರ್ನ್ !
Miscreants Dirty act in temples of Ullal and Konaje Intec demands from quick arrest by submitting memorandum to Police Station
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
09-06-25 09:56 pm
Mangalore Correspondent
Suhas Shetty Murder, NIA, Mangalore: ಸುಹಾಸ್ ಶ...
08-06-25 10:51 pm
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
09-06-25 09:20 pm
HK News Desk
ತನ್ನನ್ನು ಕಾರ್ಡಿಯೋಲಜಿಸ್ಟ್ ಅಂತ ಹೇಳಿಕೊಂಡು 50ಕ್ಕೂ...
08-06-25 10:29 pm
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm