ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ರಾಜೇಶ್ ಬಲ್ಲಾಳ್ ನಿಧನ

24-08-26 06:25 pm       HK News Staffer   ಕರಾವಳಿ

ಮಂಗಳೂರಿನ ಪ್ರಸಿದ್ಧ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಸಿ.ಆರ್ ಬಲ್ಲಾಳ್ ಅವರ ಪುತ್ರ, ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್ ಮತ್ತು ಜನರಲ್ ಸರ್ಜನ್ ಆಗಿದ್ದ ಡಾ.ರಾಜೇಶ್ ಬಲ್ಲಾಳ್(60) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮಂಗಳೂರು, ಆ.24: ಮಂಗಳೂರಿನ ಪ್ರಸಿದ್ಧ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಸಿ.ಆರ್ ಬಲ್ಲಾಳ್ ಅವರ ಪುತ್ರ, ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್ ಮತ್ತು ಜನರಲ್ ಸರ್ಜನ್ ಆಗಿದ್ದ ಡಾ.ರಾಜೇಶ್ ಬಲ್ಲಾಳ್(60) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. 

ಮಂಗಳೂರಿನ ಕೊಡಿಯಾಲಬೈಲಿನ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನ ಹೆಸರಾಂತ ವೈದ್ಯರೆಲ್ಲ ಬಂದು ಸೇರಿದ್ದು ಅಂತಿಮ ನಮನ ಸಲ್ಲಿಸಿದರು. ಜನರಲ್ ಫಿಸಿಶಿಯನ್ ಆಗಿದ್ದ ರಾಜೇಶ್ ಬಲ್ಲಾಳ್, ಲ್ಯಾಪರೊಸ್ಕೋಪಿಕ್, ಎಂಡೋಸ್ಕೋಪಿಕ್ ವಿಭಾಗದಲ್ಲಿ ಸ್ಪೆಷಲ್ ಸರ್ಜನ್ ಆಗಿದ್ದರು. ದೇರಳಕಟ್ಟೆ ಕೆಎಸ್ ಹೆಗ್ಡೆ (ಕ್ಷೇಮ) ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಸರ್ಜರಿ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು. ಇದಲ್ಲದೆ, ಹಲವು ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮತ್ತು ತಮ್ಮದೇ ಕ್ಲಿನಿಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.‌ 

ಈ ಹಿಂದೆ 2013- 14ರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಘಟಕದ ಅಧ್ಯಕ್ಷರಾಗಿಯೂ ರಾಜೇಶ್ ಬಲ್ಲಾಳ್ ಸೇವೆ ಸಲ್ಲಿಸಿದ್ದರು.‌ ಅದಕ್ಕೂ ಹಿಂದೆ 13 ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆಯಲ್ಲಿದ್ದರು. ಕಳೆದ ಕೆಲವು ತಿಂಗಳಿನಿಂದ ಲಿವರ್ ಸಂಬಂಧಪಟ್ಟ ಕಾಯಿಲೆಯಿಂದಾಗಿ ದೇಹಸ್ಥಿತಿ ಬಿಗಡಾಯಿಸಿತ್ತು. ಅವರು ತಂದೆ ಪ್ರಸಿದ್ಧ ವೈದ್ಯ ಸಿ.ಆರ್ ಬಲ್ಲಾಳ್, ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.