ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ ಹಲ್ಲೆ ; ನಕಲಿ ಪೊಲೀಸರಿಂದ ಹೊಡೆಸಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ, ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ..! ನೀಟ್ ಅಕ್ರಮಕ್ಕೆ ಸಚಿವರ ರಾಜಿನಾಮೆ ಕೇಳೋದು ತಪ್ಪಾ..? 

22-07-26 09:18 pm       HK News Desk   ಕರಾವಳಿ

ದೆಹಲಿಯಲ್ಲಿ ನೀಟ್ ಅಕ್ರಮ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಬರೀ ಹಲ್ಲೆಯಲ್ಲ.., ನಮ್ಮ ದೇಶದ ಭವಿಷ್ಯದ ಮೇಲೆ ನಡೆದಿರುವ ಹಲ್ಲೆ! ಸ್ಥಳೀಯರು ವೇಷ ಮರೆಸಿ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ‌

ಮಂಗಳೂರು, ಜುಲೈ 22 ದೆಹಲಿಯಲ್ಲಿ ನೀಟ್ ಅಕ್ರಮ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಬರೀ ಹಲ್ಲೆಯಲ್ಲ.., ನಮ್ಮ ದೇಶದ ಭವಿಷ್ಯದ ಮೇಲೆ ನಡೆದಿರುವ ಹಲ್ಲೆ! ಸ್ಥಳೀಯರು ವೇಷ ಮರೆಸಿ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ‌

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ವಿಪಕ್ಷ ನಾಯಕರನ್ನು ಬಂಧಿಸಿದ್ದನ್ನ ನಾವು ಖಂಡಿಸುತ್ತೇವೆ. ಈ ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗು ಪೋಷಕರ ನೋವಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಲಾಠಿ ಒದೆ ನೀಡಿದ್ದಾರೆ. ಇದು ಭಾರತದ ಸಂವಿಧಾನಕ್ಕೆ ಮಾಡಿದ ಅಪಚಾರ. ವಿಶ್ವದಲ್ಲೇ ಭಾರತ ತಲೆತಗ್ಗಿಸುವ ರೀತಿ ಕೇಂದ್ರ ಸರಕಾರ ಮಾಡಿದೆ‌. 

ನೀಟ್ ವಿಚಾರವನ್ನ ಒಂದೆಡೆ ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡಲು ಬಿಡೋದಿಲ್ಲ. ಹೊರಗಡೆ ಪ್ರತಿಭಟನೆ ಮಾಡಿದ್ರೆ ಲಾಠಿ ತೆಗೆದುಕೊಂಡು ಹೊಡೀತಾರೆ.‌ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಮಾನಸಿಕ ತೊಂದರೆಗೆ ಒಳಗಾಗಿದ್ದಾರೆ.‌ ಇದಕ್ಕಾಗಿ ನೈತಿಕ ಹೊಣೆಯಾಗಿ ಶಿಕ್ಷಣ ಸಚಿವರ ರಾಜೀನಾಮೆ ಕೇಳೋದು ತಪ್ಪಾ? ಇಲಾಖೆಯ ಬೇಜವಾಬ್ದಾರಿ ನಡೆಗೆ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು.‌ ರಾಜ್ಯದಲ್ಲಿ ಕೆ.ಜೆ ಜಾರ್ಜ್ ಹಾಗು ನಾಗೇಂದ್ರ ಅವರ ಮೇಲೆ ಆರೋಪ ಬಂದ ಕೂಡಲೇ ರಾಜೀನಾಮೆ ನೀಡಿಲ್ಲವೇ..?ತನಿಖೆ ಎದುರಿಸಿ ಕೆ.ಜೆ ಜಾರ್ಜ್ ಮತ್ತೆ ಮಂತ್ರಿಯಾಗಿದ್ದಾರೆ. ನೀವು ನೈತಿಕ ಹೊಣೆ ಹೊತ್ತು ಯಾವಾಗ ರಾಜೀನಾಮೆ ನೀಡುತ್ತೀರಾ? ಎಂದು ಖಾದರ್ ಪ್ರಶ್ನಿಸಿದರು. 

ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಎಲ್ಲ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಈ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಅನ್ಯಾಯವೇ ಕಾನೂನು ಆಗಿದೆ. ದೇಶದಲ್ಲಿ ಪ್ರತಿಭಟನೆ ಆಗದೆ ಏನಾದರೂ ಬದಲಾವಣೆ ಆಗಿದೆಯೇ? ನೀಟ್ ಪೇಪರ್ ಲೀಕ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಕೊಡಬೇಕು ಎಂದು ಕೇಳೋದು ತಪ್ಪಾಗುತ್ತಾ..? ಈ ಹಿಂದೆ ಅನೇಕ ನಾಯಕರು ರಾಜೀನಾಮೆ ಕೊಟ್ಟಿದ್ದಾರೆ.‌ ಬಿಜೆಪಿಯವರಿಗೆ ಯಾಕೆ ನೈತಿಕತೆ ಇಲ್ಲ. ಲಾಠಿ ಬೀಸಿ ವಿದ್ಯಾರ್ಥಿಗಳ ಗಾಯದ ಮೇಲೆ ಮತ್ತೆ ಬರೆ ಎಳೆಯುತ್ತೀರಿ. ಇದು ಮುಂದಕ್ಕೆ ದೇಶದ ಜನ ನೋಡಿಕೊಳ್ಳುತ್ತಾರೆ.‌ ಈ ಘಟನೆಯ ಬಗ್ಗೆ ಪ್ರಧಾನ ಮಂತ್ರಿ ಬಾಯಿ ಬಿಡಬೇಕು ಎಂದು ಸಚಿವ ಖಾದರ್ ಹೇಳಿದ್ದಾರೆ.