ಬ್ರೇಕಿಂಗ್ ನ್ಯೂಸ್
20-01-26 10:59 pm Mangalore Correspondent ಕರಾವಳಿ
ಮಂಗಳೂರು, ಜ.20 : ನಗರದ ಹೊಯ್ಗೆ ಬಜಾರ್ ನಲ್ಲಿರುವ 158 ವರ್ಷಗಳ ಇತಿಹಾಸವುಳ್ಳ, ದೇಶದ ಮೊದಲ ಟೈಲ್ ಫ್ಯಾಕ್ಟರಿಯೆಂದು ಹೆಸರಾಗಿರುವ ಮಂಗಳೂರು ಟೈಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ನಸುಕಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ನಸುಕಿನ 3-4 ಗಂಟೆ ವೇಳೆಗೆ ಹಠಾತ್ತಾಗಿ ಫ್ಯಾಕ್ಟರಿಯ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡಿದ್ದು ಬಹಳಷ್ಟು ನಷ್ಟ ಉಂಟಾಗಿದೆ.
ಆಬಳಿಕ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಮಾಲಕರಾದ ಅಲ್ಬುಕರ್ಕ್ ಸನ್ಸ್ ಕುಟುಂಬದ ಸದಸ್ಯರಲ್ಲಿ ಕೇಳಿದಾಗ, ನಷ್ಟದ ಬಗ್ಗೆ ಮತ್ತು ಹೇಗೆ ಬೆಂಕಿ ಉಂಟಾಗಿದೆಯೆಂದು ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. ಮಂಗಳೂರು ಟೈಲ್ ಫ್ಯಾಕ್ಟರಿಯನ್ನು 1868ರಲ್ಲಿ ಬ್ರಿಟಿಷರ ಆಡಳಿತ ಇದ್ದಾಗ ಅಲೆಕ್ಸ್ ಅಲ್ಬುಕರ್ಕ್ ಪೈಯವರು ಆರಂಭಿಸಿದ್ದರು. ಸದ್ಯ ಈ ಕುಟುಂಬದ ನಾಲ್ಕನೇ ತಲೆಮಾರಿನವರು ಸಂಸ್ಥೆಯನ್ನು ನಡೆಸುತ್ತಿದ್ದಾರೆ.



ದೇಶ- ವಿದೇಶಕ್ಕೆ ಟೈಲ್ಸ್ ಮತ್ತು ಇನ್ನಿತರ ಮಣ್ಣಿನ ಸಾಮಗ್ರಿಗಳನ್ನು ತಯಾರಿಸಿ ಪೂರೈಸುವುದರಲ್ಲಿ ಅಲ್ಬುಕರ್ಕ್ ಸನ್ಸ್ ಒಡೆತನದ ಈ ಫ್ಯಾಕ್ಟರಿ ಹೆಸರು ಪಡೆದಿದೆ. ಬೆಂಕಿ ಅವಘಡದಿಂದ ಫ್ಯಾಕ್ಟರಿಯ ಒಂದು ಭಾಗಕ್ಕೆ ಮಾತ್ರ ಹಾನಿಯಾಗಿದ್ದು ಉತ್ಪಾದನೆಗೇನೂ ತೊಂದರೆಯಾಗಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಈಗಲೂ ಮಂಗಳೂರು ಟೈಲ್ಸ್ ಸಂಸ್ಥೆಯ ಇಟ್ಟಿಗೆ, ಹಂಚುಗಳಿಗೆ ದೇಶಾದ್ಯಂತ ಬೇಡಿಕೆ ಇದೆ. ವಿಷಯ ತಿಳಿದು ಬೆಂಗಳೂರಿನಲ್ಲಿ ನೆಲೆಸಿದ್ದ ಅಲ್ಬುಕರ್ಕ್ ಸಂಸ್ಥೆಯವರು ಮಂಗಳೂರಿಗೆ ಬಂದಿದ್ದಾರೆ.
A fire broke out in the early hours of Tuesday at the historic Mangalore Tile Factory in Hoigebazar, known as India’s first tile factory with a 158-year legacy. The blaze reportedly started around 3–4 a.m., damaging a section of the factory and causing significant loss.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 05:57 pm
HK News Staffer
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm
Suhas Shetty, Mangalore, NIA: ಸುಹಾಸ್ ಶೆಟ್ಟಿ ಹ...
23-06-26 02:15 pm
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm