ಬ್ರೇಕಿಂಗ್ ನ್ಯೂಸ್
20-12-25 08:47 pm Mangalore Correspondent ಕರಾವಳಿ
ಪುತ್ತೂರು, ಡಿ.20 : ನೂತನ ಎಸ್ಪಿ ಮತ್ತು ಕಮಿಷನರ್ ಬಂದ ಬಳಿಕ ಜಿಲ್ಲೆಯಾದ್ಯಂತ ಕಳೆದ ಆರು ತಿಂಗಳಲ್ಲಿ ಕೋಳಿ ಅಂಕಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪುತ್ತೂರು ಕ್ಷೇತ್ರದ ಶಾಸಕ ಅಶೋಕ ರೈ ತಾಲೂಕಿನ ಕೇಪು ಉಳ್ಳಾಲ್ತಿ ಜಾತ್ರೆ ನಿಮಿತ್ತ ಜನರ ಭಾವನೆಯಂತೆ ಜೂಜು ರಹಿತ ಕೋಳಿ ಅಂಕ ಆಗಲೇಬೇಕೆಂದು ಪಟ್ಟು ಹಿಡಿದು ಕೋಳಿ ಅಂಕ ಮಾಡಿಸಿದ್ದಾರೆ.
ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ ಕ್ಷೇತ್ರದ ವಾರ್ಷಿಕ ಉತ್ಸವ ವಿಶಿಷ್ಟ. ಇಲ್ಲಿ ಉತ್ಸವ ಮುಗಿದು ಪ್ರತಿ ವರ್ಷ ಮೂರು ದಿನಗಳ ಜೂಜು ರಹಿತ ಕೋಳಿ ಅಂಕ ಆಗುವುದು ವಾಡಿಕೆ. ಆದರೆ ಈ ಬಾರಿ ಎಲ್ಲಿಯೂ ಕೋಳಿ ಅಂಕ ಇಲ್ಲದೇ ಇರುವುದರಿಂದ ಇಲ್ಲಿ ಆಗುತ್ತಾ ಎಂಬ ಆತಂಕ ಇತ್ತು. ಬೆಳಗ್ಗೆ ಕೋಳಿ ಅಂಕಕ್ಕೆ ಜನರು ಸೇರುತ್ತಿದ್ದಾಗಲೇ ವಿಟ್ಲ ಪೊಲೀಸರು ಬಂದು ಕೋಳಿ ಅಂಕ ಮಾಡದಂತೆ ತಡೆದಿದ್ದಾರೆ. ಪೊಲೀಸರನ್ನು ನೋಡಿ ಕೋಳಿ ಹಿಡಿದು ಬಂದಿದ್ದ ಜನರು ಯರ್ರಾಬಿರ್ರಿ ಓಡಿ ತಪ್ಪಿಸಿಕೊಂಡಿದ್ದರು.

ಇದರ ಬೆನ್ನಲ್ಲೇ ಸಾರ್ವಜನಿಕರು ಶಾಸಕರಿಗೆ ಕರೆ ಮಾಡಿ ಇಲ್ಲಿನ ಧಾರ್ಮಿಕ ಭಾವನೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ತಕ್ಷಣವೇ ಶಾಸಕ ಅಶೋಕ ರೈ ಸ್ಥಳಕ್ಕೆ ಬಂದಿದ್ದು ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ ಯಾನುಲ್ಲೆ (ಎಲ್ಲರೂ ಕೋಳಿ ಕಟ್ಟಿ, ಯಾರೂ ಓಡಬೇಡಿ, ನಾನಿದ್ದೇನೆ) ಎಂದು ಹೇಳಿ ಅಲ್ಲಿಯೇ ಚೇರ್ ಹಾಕಿ ಕುಳಿತಿದ್ದಾರೆ. ವಿಟ್ಲ ಎಸ್ಐಯನ್ನು ಉದ್ದೇಶಿಸಿ ಇದು ಪ್ರತಿ ವರ್ಷ ಆಗುವ ಧಾರ್ಮಿಕ ಪ್ರಕ್ರಿಯೆ. ಇಲ್ಲಿ ಜೂಜು ಇಲ್ಲ. ಕೇವಲ ಕೋಳಿ ಕಟ್ಟುವುದು ಮಾತ್ರ. ಜನರ ಧಾರ್ಮಿಕ ನಂಬಿಕೆ ಚ್ಯುತಿ ತರಬೇಡಿ. ನೀವು ಕೇಸು ಮಾಡುವುದಿದ್ದರೆ ನನ್ನ ಮೇಲೆ ಮಾಡಿ, ಅರೆಸ್ಟ್ ಮಾಡೋದಿದ್ದರೂ ನನ್ನನ್ನು ಮಾಡಿ.. ಎಂದು ಹೇಳಿದರು.
ಪ್ರತಿ ವರ್ಷ ಮೂರು ದಿನ ಇಲ್ಲಿ ಕೋಳಿ ಅಂಕ ಆಗುತ್ತದೆ. ಈ ಬಾರಿ ಒಂದು ದಿನ ಸಾಕು. ಇವತ್ತು ಸಂಜೆ ಆರು ಗಂಟೆ ವರೆಗೆ ಕೋಳಿ ಕಟ್ಟಿ. ಯಾವುದೇ ಭಯ ಬೇಡ. ಎರಡು ಗಂಟೆ ವರೆಗೆ ಇಲ್ಲೇ ಇರುತ್ತೇನೆಂದೂ ಅಶೋಕ ರೈ ಹೇಳಿದರು. ಸಂಜೆ ಐದು ಗಂಟೆ ವೇಳೆಗೆ ಮತ್ತೆ ಬಂದ ಅಶೋಕ ರೈ, ಸಾಕು ಸಾಕು, ಕೋಳಿ ಅಂಕ ನಿಲ್ಲಿಸಿ. ಮತ್ತೆ ಪೊಲೀಸರು ಬಂದು ಕೊಂಡೋದ್ರು ಅಂತ ಹೇಳಬೇಡಿ ಎನ್ನುತ್ತ ಕೋಳಿ ಅಂಕ ನಿಲ್ಲಿಸಿದರು. ಆಮೂಲಕ ಕೇಪು ಉಳ್ಳಾಲ್ತಿಯ ಉತ್ಸವಕ್ಕೆ ಶಾಸಕ ಅಶೋಕ ರೈಯವರೇ ಖುದ್ದಾಗಿ ನಿಂತು ಪ್ರತಿ ವರ್ಷದಂತೆ ಅದ್ದೂರಿಯಾಗಿ ಜೂಜು ರಹಿತ ಕೋಳಿ ಅಂಕ ಮಾಡಿಸಿದ್ದಾರೆ.
After the arrival of a new SP and Police Commissioner, rooster-tying events (Koli Ank), traditionally held across Dakshina Kannada, had been halted for the past six months. But Puttur MLA Ashok Rai ensured that the customary non-gambling religious rooster-tying ritual at the Kepu Ullalthi annual festival was conducted without interruption—right in front of the police.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm