ಬ್ರೇಕಿಂಗ್ ನ್ಯೂಸ್
08-12-25 01:42 pm Mangalore Correspondent ಕರಾವಳಿ
ಮಂಗಳೂರು, ಡಿ.8 : ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಉದ್ದೇಶಕ್ಕಾಗಿ ಎಐ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಲಾದ ಎಐ ಶಿಕ್ಷಕ್ ಜನಮನ್ನಣೆ ಪಡೆಯುತ್ತಿದ್ದು, ರಾಜ್ಯಾದ್ಯಂತ ಅತಿ ಹೆಚ್ಚು ಮಂದಿಗೆ ಈ ತಂತ್ರಜ್ಞಾನ ತಲುಪಿಸಲು ಯತಿಕಾರ್ಪ್ ಸಂಸ್ಥೆ ಸಮಗ್ರ ಅಭಿಯಾನ ಕೈಗೊಂಡಿದೆ. ಇದಕ್ಕಾಗಿ ನಿರುದ್ಯೋಗಿಗಳು, ಸ್ವಸಹಾಯ ಸಂಘದ ಸದಸ್ಯರು ಅಥವಾ ಇನ್ನಾವುದೇ ಆಸಕ್ತರು ಈ ಎಐ ಶಿಕ್ಷಕ್ ಎನ್ನುವ ತಂತ್ರಜ್ಞಾನ ಮಾದರಿಯನ್ನು ಶಾಲೆ, ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಿ ಪ್ರತಿ ತಿಂಗಳು ಆದಾಯ ಗಳಿಸಲು ವೇದಿಕೆ ಸೃಷ್ಟಿಸಿದೆ.
ಯಾವುದೇ ಬಂಡವಾಳ ಇಲ್ಲದೆ, ವಿದ್ಯಾರ್ಥಿಗಳಿಗೆ ಈ ಮಾದರಿಯನ್ನು ಪರಿಚಯಿಸಿ ಕಮಿಷನ್ ಮೇಲೆ ಆದಾಯ ಸೃಷ್ಟಿಸಿಕೊಳ್ಳಬಹುದು. ಇದಕ್ಕಾಗಿ ಆಸಕ್ತರು ಡಿ.15ರೊಳಗೆ ತಮ್ಮ ಹೆಸರು ನೋಂದಾಯಿಸಿ ಶೂನ್ಯ ಹೂಡಿಕೆಯಲ್ಲಿ ವಿತರಕರಾಗಬಹುದು. ಆಮೂಲಕ ತಿಂಗಳಿಗೆ 40ರಿಂದ 50 ಸಾವಿರದ ವರೆಗೆ ಆದಾಯ ಗಳಿಸಬಹುದಾಗಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ 'ಎಐ ಶಿಕ್ಷಕ್' ಅನ್ನು ಪರಿಚಯಿಸಿ ನೋಂದಣಿ ಮಾಡಿಸಿದರೆ ಪ್ರತಿ ಮಾರಾಟಕ್ಕೂ ಕಮಿಶನ್ ಸಿಗಲಿದ್ದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬೀಳಲಿದೆ. ಇದಕ್ಕಾಗಿ ಯಾವುದೇ ಹೂಡಿಕೆಯಾಗಲೀ, ಕಚೇರಿಯಾಗಲೀ ಅಗತ್ಯವಿಲ್ಲ. ರಾಜ್ಯ ಅಥವಾ ದೇಶದ ಯಾವುದೇ ಮೂಲೆಯಲ್ಲಿದ್ದರೂ ಅತಿ ಸರಳವಾಗಿ ಎಐ ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಬಳಿಗೆ ತಲುಪಿಸಬಹುದಾಗಿದೆ. ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ಪ್ರತಿ ವಿದ್ಯಾರ್ಥಿಗೂ ತಲುಪಬೇಕಾದ ತಂತ್ರಜ್ಞಾನ ಇದಾಗಿದ್ದು ಅತಿ ಕಡಿಮೆ ದರದಲ್ಲಿ ಈ ಸೌಲಭ್ಯ ಪಡೆಯಬಹುದಾಗಿದೆ. ಎಐ ಶಿಕ್ಷಕ್ ವಿದ್ಯಾರ್ಥಿಗಳಿಗೆ ತಲುಪಿಸುವ ಅಭಿಯಾನದಲ್ಲಿ ಉದ್ಯೋಗಸ್ಥರು, ವಿಮಾ ಏಜೆಂಟರು, ಗೃಹಿಣಿಯರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಫ್ರೀಲಾನ್ಸರ್ಗಳು ಜೋಡಿಸಿಕೊಳ್ಳಬಹುದು.
ಏನಿದು ಎಐ ಶಿಕ್ಷಕ್ ?
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಹತ್ತಿರ ಬರುವಾಗ ಯಾವುದನ್ನು ಓದಬೇಕೆಂದು ತಿಳಿಯದೆ ತಲೆಬಿಸಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಎಐ ಶಿಕ್ಷಕ್ ಅತ್ಯಂತ ಅಗತ್ಯ ತಂತ್ರಜ್ಞಾನವಾಗಿದ್ದು, ಯಾವುದೇ ಪ್ರಶ್ನೆಗೂ ಖಚಿತ ಉತ್ತರವನ್ನು ಥಟ್ಟನೆ ನೀಡುವುದು, ಯಾವುದೇ ಸಂಶಯಗಳಿಗೂ ಶಿಕ್ಷಕರ ಅಗತ್ಯವಿಲ್ಲದೆ ನೆರವು ನೀಡುವ ಆಪ್ತನಾಗಿ ಈ ಎಐ ಶಿಕ್ಷಕ್ ನೆರವಾಗಲಿದೆ. ವಿದ್ಯಾರ್ಥಿಗಳೇ ನೇರವಾಗಿ ಲಿಂಕ್( https://wame.pro/aishikshak) ಮೂಲಕ ಈ ಮಾದರಿಯನ್ನು (watsup - 9535440195, 960897782) ಬಳಸಿಕೊಳ್ಳಬಹುದು. ತಜ್ಞರ ನೆರವಿನಲ್ಲಿ ಶೇ.100 ಎನ್ಸಿಇಆರ್ಟಿ ಆಧರಿಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಮಾದರಿಯನ್ನು ರಚಿಸಲಾಗಿದೆ. ಇದನ್ನು ಪಡೆಯಲು ಎಸ್ಸೆಸ್ಸೆಲ್ಸಿಗೆ ಕೇವಲ 888 ರೂ., ಪಿಯುಸಿ ವಿದ್ಯಾರ್ಥಿಗಳಿಗೆ 999 ರೂ. ಶುಲ್ಕ ಇರಲಿದೆ.
ತಂತ್ರಜ್ಞಾನ ತಲುಪಿಸಲು ಸಮಗ್ರ ಅಭಿಯಾನ
ಈಗಾಗಲೇ ರಾಜ್ಯದೆಲ್ಲೆಡೆಯಿಂದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇಂಗ್ಲಿಷ್ ಮತ್ತು ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಲಭ್ಯವಿರುವ ಈ ವೇದಿಕೆಯನ್ನು ಇನ್ನಷ್ಟು ಮಂದಿಗೆ ಅತಿ ಕಡಿಮೆ ವೆಚ್ಚದಲ್ಲಿ ತಲುಪಿಸುವುದು ಸಂಸ್ಥೆಯ ಉದ್ದೇಶ. ಇದಕ್ಕಾಗಿ ಆಸಕ್ತರನ್ನು ಜೋಡಿಸಿಕೊಂಡು ರಾಜ್ಯ ಮಾತ್ತವಲ್ಲ, ದೇಶದ ಎಲ್ಲ ಕಡೆಯ ವಿದ್ಯಾರ್ಥಿಗಳಿಗೂ ತಂತ್ರಜ್ಞಾನ ತಲುಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವನ್ನೂ ಸಂಸ್ಥೆ ಬಯಸಿದೆ.
ನಿಮ್ಮ ಆದಾಯದ ಅವಕಾಶ ಹೇಗೆ?
ಯತಿಕಾರ್ಪ್ ಸಂಸ್ಥೆಯು ಎಐ ಶಿಕ್ಷಕ್ ವಿತರಕರಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಡಿಜಿಟಲ್ ತರಬೇತಿಯನ್ನು ನೀಡಲಿದ್ದು, ಪೋಸ್ಟರ್, ವಿಡಿಯೋ, ಮಾರ್ಕೆಟಿಂಗ್ ಸಾಮಗ್ರಿಗಳನ್ನು ಒದಗಿಸಲಿದೆ. ನಿಮ್ಮ ಪ್ರದೇಶದ ಎಸ್ಎಸ್ಎಲ್ಸಿ/ಪಿಯು ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಇದರ ಪ್ರಯೋಜನ ತಿಳಿಸಿ, ಅವರನ್ನು ನೋಂದಣಿ ಮಾಡಿಸಬೇಕು. ಪ್ರತಿಯೊಂದು ನೊಂದಣಿಗೂ ಕಮಿಷನ್ ಮಾದರಿಯಲ್ಲಿ ಆದಾಯ ಸಿಗಲಿದೆ. ಏಜೆಂಟರು ಎಷ್ಟು ಮಾರಾಟ ಮಾಡುವುದಕ್ಕೂ ಮಿತಿ ಇರುವುದಿಲ್ಲ.
ನಗರ ಪ್ರದೇಶವಲ್ಲದೆ, ಹಳ್ಳಿಗಳ ಮಕ್ಕಳೂ ಸೇರಿದಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನೂ ಈ ತಂತ್ರಜ್ಞಾನದ ಅವಕಾಶ ಪಡೆಯಲು ಪ್ರೇರಣೆ ನೀಡಬಹುದು. ಆಯಾ ಭಾಗದ ಶಾಲೆಗಳು, ಕೋಚಿಂಗ್ ಸೆಂಟರ್ಗಳಿಗೆ ಭೇಟಿ ಕೊಟ್ಟು ಎಐ ಶಿಕ್ಷಕ್ ವಿತರಕರಾಗಬಹುದು. ಆಮೂಲಕ ಯಾವುದೇ ಉದ್ಯೋಗದಲ್ಲಿದ್ದರೂ ಹೆಚ್ಚುವರಿ ಆದಾಯವನ್ನು ಗಳಿಸಬಹುದಾಗಿದೆ. ಯತಿಕಾರ್ಪ್ ಸಂಸ್ಥೆಯ ಮೂಲಕ ‘ಎಐ ಶಿಕ್ಷಕ್ ’ ವಿತರಕರಾಗಲು ಬಯಸುವವರು ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. (https://reg-ister.yaticorp.com) ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಬಹುದಾಗಿದೆ. (ಜಾಹೀರಾತು)
AI Shikshak, an AI-powered exam preparation tool for SSLC and PUC students, has gained huge popularity across Karnataka. To expand its reach, Yaticorp has launched a state-wide campaign inviting unemployed youths, self-help group members, working professionals, teachers, students, housewives, and freelancers to become distributors — with zero investment.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm