ಬ್ರೇಕಿಂಗ್ ನ್ಯೂಸ್
17-03-25 08:01 pm Mangalore Correspondent ಕರಾವಳಿ
ಉಳ್ಳಾಲ, ಮಾ.17 : ಯರ್ರಾಬಿರ್ರಿ ಚಲಿಸಿದ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಾ.ಹೆ. 66ರ ಕಲ್ಲಾಪು ಬಳಿಯ ಆಡಂಕುದ್ರು ಎಂಬಲ್ಲಿ ನೇತ್ರಾವತಿ ನದಿಯ ಹಿನ್ನೀರಿಗೆ ಉರುಳಿ ಬಿದ್ದಿದೆ. ಹೆದ್ದಾರಿ ಬದಿಯಲ್ಲಿದ್ದ ಕಲ್ಲಾಪು ಬುರ್ದುಗೋಳಿ ಗುಳಿಗ-ಕೊರಗಜ್ಜ ಕ್ಷೇತ್ರದ ಸ್ವಾಗತ ಫಲಕದ ಕಮಾನಿಗೆ ಗುದ್ದಿದ ಪರಿಣಾಮ ಕಾರಿನ ವೇಗ ನಿಯಂತ್ರಣಕ್ಕೆ ಬಂದು ಕಾರಿನಲ್ಲಿದ್ದ ಉಳ್ಳಾಲದ ಐವರು ಮುಸ್ಲಿಂ ಹುಡುಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆ ಉಳ್ಳಾಲ ಮೂಲದ ಐವರು ಸಣ್ಣ ಪ್ರಾಯದ ಹುಡುಗರಿದ್ದ ಕಾರು ತೊಕ್ಕೊಟ್ಟಿನ ಕಡೆಗೆ ಧಾವಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯಲ್ಲಿದ್ದ ಬುರ್ದುಗೋಳಿ ಕೊರಗಜ್ಜನ ನಾಮಫಲಕದ ಕಬ್ಬಿಣದ ಕಮಾನಿನ ಸಲಾಕೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದೆ. ಭಯಗೊಂಡ ಹುಡುಗರು ಕಾರಿನಿಂದಿಳಿದು ಅಪಘಾತ ನಡೆದ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಿಂದ ಹೆದ್ದಾರಿ ಸಂಚಾರದಲ್ಲಿ ಸ್ವಲ್ಪ ಹೊತ್ತು ವ್ಯತ್ಯಯ ಉಂಟಾಯಿತು.



ಅಪಘಾತದಿಂದ ಕೊರಗಜ್ಜನ ನಾಮಫಲಕದ ಕಮಾನು ಕೂಡ ಉರುಳಿ ಬಿದ್ದು ಹಾನಿಯುಂಟಾಗಿದೆ. ಕಾರಲ್ಲಿದ್ದ ಇಬ್ಬರು ಹುಡುಗರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ.
ಹುಡುಗರನ್ನ ಓಡಿಸಿದ್ದ ಸ್ಥಳೀಯರು
ಅಪಘಾತಕ್ಕೂ ಮುನ್ನ ಐವರು ಸಣ್ಣ ಪ್ರಾಯದ ಹುಡುಗರಿದ್ದ ಸ್ವಿಫ್ಟ್ ಕಾರು ಅಡಂಕುದ್ರುವಿನ ಒಳ ರಸ್ತೆಯಲ್ಲಿ ಯರ್ರಾಬಿರ್ರಿ ಓಡಾಡಿ, ಗದ್ದಲ ಎಬ್ಬಿಸಿದ್ದು ಸ್ಥಳೀಯ ಕ್ರೈಸ್ತ ನಿವಾಸಿಗಳು ಹುಡುಗರನ್ನ ಬೆನ್ನಟ್ಟಿರುವುದಾಗಿ ಘಟನಾ ಸ್ಥಳಕ್ಕೆ ಬಂದಿದ್ದ ಟ್ರಾಫಿಕ್ ಪೊಲೀಸರಲ್ಲಿ ಸ್ಥಳೀಯರೇ ಮಾಹಿತಿ ನೀಡಿದ್ದಾರೆ. ಕೊರಗಜ್ಜನ ನಾಮಫಲಕ ಇಲ್ಲದೇ ಇರುತ್ತಿದ್ದರೆ ಕಾರು ನೇರ ನದಿ ನೀರಿಗೆ ಬಿದ್ದು ಪ್ರಾಣ ಹಾನಿ ಸಂಭವಿಸುತ್ತಿತ್ತೆಂದು ಟ್ರಾಫಿಕ್ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನದಿಯ ಇಳಿಜಾರಿನಲ್ಲಿ ಉಳಿದಿದ್ದ ಕಾರನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಕ್ರೇನ್ ಮುಖಾಂತರ ಮೇಲಕ್ಕೆತ್ತಿ ವಶಕ್ಕೆ ಪಡೆದಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
Local Residents Save Five Youths After Car Plunges into Adankadu Netravati Backwaters at kallapu in mangalore
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am